Tuesday, August 27, 2013

ಶ್ರಾವಣ ಮಾಸ ಮಹಾತ್ಮೆ - ೨

 
೭) ದೂರ್ವಾಗಣಪತಿವೃತ - ಶ್ರಾವಣ ಮಾಸದ ಚತುರ್ಥಿಯಂದು "ದೂರ್ವಾಗಣಪತಿ" ವೃತವನ್ನು ಆಚರಿಸಬೇಕು. ಮಣ್ಣಿನ ಗಣಪತಿಯನ್ನು ಮಾಡಿ ಪೀಠದ ಮೇಲೆ ದೂರ್ವೆಗಳನ್ನು ಹರಡಿ ಅದರ ಮೇಲೆ ಗಣಪತಿಯನ್ನು ಕೂಡಿಸಬೇಕು. "ಗಣಾನಾಂತ್ವಾ ಎಂಬ ಮಂತ್ರದಿಂದಾ ಆವ್ಹಾನಿಸಿ ಷೂಡಷೂಪಚಾರದಿಂದಾ ಪೂಜಿಸಬೇಕು. ಕೆಂಪು ಬಣ್ಣದ ಹೂವು ಗಳಿಂದಾ, ದೂರ್ವಾದಿಂದಾ ನಾಮಪೂಜೆಯೂಂದಿಗೆ ಏರಿಸಬೇಕು. ಗಣೇಶಾಥರ್ವ ಪಾರಾಯಣವನ್ನು ಮಾಡಿ, ಸಾಧ್ಯವಾದಲ್ಲಿ ದೂರ್ವೆ, ಕಡಬುಗಳಿಂದಾ ಹೋಮಿಸಬೇಕು. ಈ ವೃತವು ಸರ್ವವಿಘ್ನಗಳನ್ನು ಪರಿಹರಿಸುತ್ತದೆ.

೮) ಅನಂತ ವೃತ - ಶ್ರಾವಣ ಚತುರ್ಥಿಯಂದು ಅನಂತನ ಪೂಜೆಯನ್ನು ಮಾಡಬೇಕು. ಹದಿಮೂರು ಗ್ರಂಥಿಗಳುಳ್ಳ ಅನಂತನ ದಾರವನ್ನು ಮಾಡಿ ಪೂಜಿಸಿ ಬಲಹಸ್ತದಲ್ಲಿ ಕಟ್ಟಿಕೂಳ್ಳಬೇಕು.

ಇಂದು ವರಾಹ ಜಯಂತಿಕೂಡಾ ಆಚರಿಸಬೇಕು.

೯) ನಾಗ ಚತುರ್ಥಿ ವೃತ - ನಾಗ ಚತುರ್ಥಿಯಂದು ಹೆಣ್ಣುಮಕ್ಕಳು ಅಭ್ಯಂಜನಸ್ನಾನ ಮಾಡಬೇಕು ನಾಗದೆವತೆಯ ಅಂತರ್ಯಾಮಿಯಾದ ಸಂಕರ್ಷಣನನ್ನು ಮನೆಯ ಮುಂದೆ ಬಾಗಿಲಿಗೆ ಕೆಮ್ಮಣ್ಣಿನಿದಾಗಲಿ, ಗೋಮಯದಿಂದಾಗಲಿ ನಾಗನನ್ನು ಬರೆದು ಆವಾಹಿಸಿ ಅಭಿಷೇಕ ಮಾಡಿ ಗಂಧ,ದೂರ್ವಾ, ಹಳದಿಗೆಜ್ಜೆವಸ್ತ್ರಾದಿಗಳಿಂದಾ ಪೂಜಿಸಿ ಬೆಲ್ಲದನೀರು (ಹಾಲು)ಎರೆಯಬೇಕು, ಹಸಿಕಡಲೇಕಾಳು, ಅರಳು,ಹಸಿಚಿಗಳೆ, ತಂಬಿಟ್ಟು ಮುಂತಾದವುಗಳಿಂದಾ ನಿವೇದಿಸಬೇಕು. ನಂತರ ಫಲಹಾರ ಮಾಡಬಹುದು ಅಂದು ನಾರಿಯರು ಉಪವಾಸ ಮಾಡಬೇಕು.

೧೦) ನಾಗ ಪಂಚಮಿ - ಇಂದು ಐದು ಹೆಡೆಗಳುಳ್ಳ ನಾಗನನ್ನು ಮೃತಿಕೆಯಿಂದಾ ಮಾಡಿ ಅದರಲ್ಲಿ ಶೇಷಾಂತರ್ಯಾಮಿಯಾದ ಸಂಕರ್ಣನನ್ನು ಆವಾಹಿಸಿ ಷೂಡಷೂಪಚಾರಗಳಿಂದಾ ಪೂಜಿಸಿ (ಇಂದು ಕೆಂಪು ಗೆಜ್ಜೆವಸ್ತ್ರ) ಹಿಂದೆಹೇಳಿದ ಪೂಜಾದ್ರವ್ಯಗಳಿಂದಾ ಅಲಂಕಾರ ನಿವೆದನೆಗಳನ್ನು ಮಾಡಬೇಕು. ಇಂದು ಹಸುವಿನ ಹಾಲನ್ನು ಎರೆಯಬೇಕು. ಇಂದು ಮಾತ್ರ ಸ್ತ್ರೀಯರು ತೆಂಗಿನಕಾಯಿಗಳನ್ನು ಒಡೆಯಬಹುದು.

೧೧) ಗರುಡ ಪಂಚಮಿ - ಗರುಡನು ದೇವಲೋಕದಿಂದಾ ಅಮೃತವನ್ನು ತಂದು ನಾಗಗಳಿಗೆ ಕೊಟ್ಟು ನಾಗಗಳ ಬಾಯಿಯಿಂದಲೇ "ನೀನು,ಮತ್ತು ನಿನ್ನ ತಾಯಿ ವಿನತೆಯು ದಾಸ್ಯದಿಂದಾ ಮುಕ್ತರಾಗಿರುವಿರಿ" ಎಂದು ಹೇಳಿದ ದಿವಸವಿದು.

೧೨) ಸಿರಿಯಾಳ ಷಷ್ಟೀ - ಇದಿವಸ ಮೂಸರನ್ನಕ್ಕೆ ವಿಶೇಷ ಪ್ರಾಧಾನ್ಯ. ಮನೆಯಲ್ಲಿರುವ ಕನ್ಯರಿಂದಾ ಮೂಸರನ್ನ, ಮೂಸರ ಅವಲ್ಲಕ್ಕಿ, ಉಪ್ಪಿನಕಯಿಗಳನ್ನು ಸಂಕ್ರಾಂತಿಯಲ್ಲಿ ಯಳ್ಳು ಬೆಲ್ಲಾ ಬೀರಿದಂತೆ ಮನೆ ಮನೆಗಳಿಗೆ ಬಿರಬೇಕು. ಅಂದು ಭಗವಂತನಿಗೆ ಕೂಡಾ ಶಾವಿಗೆ ಪಾಯಸ, ಮೂಸರನ್ನ, ಮೂಸರವಲಕ್ಕಿ, ಉಪ್ಪಿನಕಾಯಿಗಳನ್ನು ನಿವೇದಿಸಬೇಕು. ಹಾಗು ಇವೆಲ್ಲವುಗಳನ್ನು ಒಂದು ಬಾಳೆಯಲಿಯಲ್ಲಿ ಹಾಕಿ ಬುತ್ತಿ ಕಟ್ಟಿದಂತೆ ಕಟ್ಟಿ ದಾನ ಕೂಡಬೇಕು. ಹಾಗು ಸಂಜೆ ಸ್ಕಂದ ಜನ್ಮ ವೃತ್ತಾಂತವನ್ನು ಕೇಳಬೇಕು. ಇದರಿಂದಾ ಅವರ ಭಾವಿ ಜೀವನ ಹಸನಾಗಿರುತ್ತದೆ.

೧೩,೧೪) ಅವ್ಯಂಗವೃತ - ಶ್ರಾವಣ ಶುಧ ಸಪ್ತಮಿಯನ್ನು ಶೀತಲಾ ಸಪ್ತಮಿಯಂದು ಕರೆಯುವರು. ಸಪ್ತಮಿ ಹಸ್ತಾ ನಕ್ಷತ್ರದಿಂದಾ ಕೂಡಿದ್ದರೆ "ಪಾಪನಾಶಿನಿ" ಯಂದು ಕರೆಯಲ್ಪಡುವದು. ಇಂದು ಗೋಡೆಯ ಮೇಲೆ ಭಾವಿಯ ಚಿತ್ರ, ಏಳು ಜಲದೇವತೆಗಳು, ಇಬ್ಬರು ಬಾಲಕರು, ಮೂವರು ಸ್ತ್ರೀಯರು, ಅಶ್ವ, ವೃಷಭ, ನರವಾಹನ, ಪಲ್ಲಕ್ಕಿ ಇವುಗಳ ಚಿತ್ರ ಬರೆಯಬೇಕು. ಅದರ ಕೆಳಗಡೆ ಕಲಶ ಸ್ತಾಪನೆಮಾಡಬೇಕು. ಅದರಲ್ಲಿ ಸೂರ್ಯಾಂತರ್ಗತ ನಾರಾಯಣನನ್ನು ಆವಾಹಿಸಿ ಪೂಜಿಸಿ ಸೌತೆಕಾಯಿ, ಮೂಸರನ್ನ ನಿವೇದನೆ ಮಾಡಬೇಕು. ಹಾಗು ಕಲಶದ ಮೇಲೆ ಹೂದೆಸಿದ ವಸ್ತ್ರವನ್ನು ವಿಪ್ರರಿಗೆ ದಕ್ಷಿಣಿ ಸಹಿತ ದಾನ ಕೂಡಬೇಕು. ಈ ರೀತಿಯಾಗಿ ೭ ವರ್ಷ ಪರ್ಯಂತ ಮಾಡಬೇಕು. ಇದರಿಂದಾ ಜೀವನದಲ್ಲಿ ಬರುವ ತಾಪತ್ರಯಗಳು ಶಾಂತವಾಗುವವು.

೧೫) ಪುತ್ರದಾ ಏಕಾದಶಿವೃತ - ಶ್ರಾವಣ ಶುಕ್ಲ ಏಕಾದಶಿಗೆ ಪುತ್ರದಾ ಏಕಾದಶಿ ಎಂದು ಹೆಸರು. ಈ ದಿನ ವಿಧಿ ಪೂರ್ವಕವಾಗಿ ಉಪವಾಸವನ್ನು ಮಾಡಿ ದ್ವಾದಸಿ ದಿನದಂದು ಯೂಗ್ಯ ಬ್ರಾಹ್ಮಣನಿಗೆ ಭೂಜನ ಮಾಡಿಸಿ ದಕ್ಷಿಣಿ ಕೂಟ್ಟು ತಾನು ಪ್ರಸಾದ ಸ್ವೀಕರಿಸಬೇಕು. ಇದರಿಂದಾ ಸತ್ಪುತ್ರರು ಜನಿಸುವರು.

೧೬) ನ ಕರೋತಿ ವಿಧಾನೇನ ಪವಿತ್ರಾರೋಪಣಂ ತು ಯ:|

ತಸ್ಯ ಸಂವತ್ಸರೀಪೂಜಾ ನಿಷ್ಪಲಾ ಮುನಿಸತ್ತಮಂ ||

ಶ್ರಾವಣ ಶುಕ್ಲ ದ್ವಾದಶೀಯಂದು ಪವಿತ್ರಾರೋಪಣವೆಂಬ ಮಾಡಬೇಕು.ಇದರಿಂದಾ ತಾನು ಪ್ರತಿ ದಿನವು ಮಾಡುತ್ತಿರುವ ದೇವರ ಪೂಜೆಯು ಫಲವನ್ನು ಕೂಡುವದು. ಇಲ್ಲದಿದ್ದರೆ ಆ ವರ್ಷ ಪರ್ಯಂತರ ಮಾಡಿದ ಪೂಜೆಯು ನಿಷ್ಫಲವಾಗುವದು.

೧೭) ದುರ್ಗಾಷ್ಟಮಿ - ಇಂದು ದುರ್ಗಾ ದೇವಿಯನ್ನು ಪೂಜಿಸಿ ಏಂಟು ಬತ್ತಿಗಳುಳ್ಳ ದೀಪವನ್ನು ಬೆಳಗಿ ೧೦೮ ಪ್ರದಕ್ಷಿಣಿ ನಮಸ್ಕಾರವನ್ನು ಹಾಕಬೇಕು. ಹಾಗು ದೀಪವನ್ನು ಬ್ರಾಹ್ಮಣನಿಗೆ ದಾನ ಕೂಡಬೇಕು. ಇದರಿಂದಾ ಕನ್ನೆಯರಿಗೆ, ವರಗಳಿಗೆ ಯೋಗ್ಯವಾದ ಜೋಡಿಯೊಂದಿಗೆ ಶೀಘ್ರವಾಗಿ ಲಗ್ನವಾಗುವದು.
೧೮) ಕೃಷ್ಣಾಷ್ಟಮಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.೧೯) ವಾಮನ ಜಯಂತಿ - ವಿಶೆಷ ಲೇಖನ ಇಷ್ಟರಲ್ಲಿ ನೀರೀಕ್ಷಿಸಿರಿ.
 
 

Monday, August 19, 2013

ಉಪಾಕರ್ಮ


ಉಪಾಕರ್ಮ

ಉಪಾಕರ್ಮವನ್ನು ಶ್ರಾವಣಮಾಸದಲ್ಲಿರುವ ಬರುವ ಶ್ರವಣಾ ನಕ್ಷತ್ರದ ದಿನದಂದು ಋಗ್ವೇದಿಗಳು, ಶ್ರಾವಣ ಶುಕ್ಲದ ಪೂರ್ಣಿಮಾದಂದು ಯಜುರ್ವೇದಿಗಳು ಉಪಾಕರ್ಮ ವನ್ನು ಮಾಡಿಕೊಳ್ಳಬೇಕು. ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.
ಅಲ್ಲದೇ! ಯಜ್ಞೋಪವೀತವು ದೇವರು ನಮ್ಮ ಹೆಗಲಿಗೇರಿಸಿದ ಕರ್ತ್ಯವ್ಯದ ಸಂಕೇತವೂ ಆಗಿದೆ. ಕಾಲಪ್ರಜ್ಞೆ ಮತ್ತು ಕರ್ತ್ಯವ್ಯ ಪ್ರಜ್ಞೆಗಳ ಸಮಷ್ಟಿಯಾಗಿ ನಿಂತಿರುವ ಯಜ್ಞೋಪವೀತವು ಯಜ್ಞನಾಮಕ ಪರಮಾತ್ಮನು ನಮಗೆ ವಹಿಸಿರುವ ಕರ್ತ್ಯವ್ಯವನ್ನು ಸೂಚಿಸುತ್ತದೆ. ನಮ್ಮ ದೇಹದ ಮೇಲಿರುವ ಮೂರು ಎಳೆಗಳ ಯಜ್ಞೋಪವೀತವು ದೇವ ಋಣ, ಋಷಿ‌ಋಣ ಮತ್ತು ಪಿತೃ‌ಋಣವನ್ನು ಸೂಚಿಸುತ್ತದೆ. ಹಾಗೆಯೇ ಮೂರು ಎಳೆಗಳು ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳೆಂಬ ಮೂರು ವೇದಗಳ ಆವಾಹನೆ ಯಾಗಿದ್ದು ಬ್ರಹ್ಮಗಂಟು ಅಥರ್ವವೇದವನ್ನು ಪ್ರತಿನಿಧಿಸುತ್ತದೆ. ಸೊಂಟದ ತನಕ ಇಳಿ ಬಿದ್ದಿರುವ ಯಜ್ಞೋಪವೀತವು ಆಧ್ಯಾತ್ಮ ಸಾಧನೆಗಾಗಿ ನಾವು ಟೊಂಕ ಕಟ್ಟಿ ನಿಂತಿರ ಬೇಕೆಂದು ತಿಳಿ ಹೇಳುತ್ತದೆ. ಅದರ ಮೂರು ಎಳೆಗಳು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ತಿವಿದು ಹೇಳುವ ಹಾಗೆ ಕುತ್ತಿಗೆಯ ಮೇಲೆ ಬಂದಿದೆ. ನಮ್ಮ ಕೆಲಸವಾಗ ಬೇಕಾದಾಗ ಕುತ್ತಿಗೆಯ ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳುವಂತೆ ಏನೇ ಕೆಲಸವಿದ್ದರೂ ಬಿಡದೇ ತ್ರಿಕಾಲಸಂಧ್ಯಾವಂದನೆಯನ್ನು ಮಾಡಿಮುಗಿಸು ಎನ್ನುತ್ತಿದೆ ಈ ಯಜ್ಞೋಪವೀತವು. ಎಡಗಡೆಯಿಂದ ಬಲಗಡೆಗೆ ಬಂದಿರುವುದರಿಂದ ವಾಮಮಾರ್ಗ ವನ್ನು ಬಿಟ್ಟು ಸಂಪೂರ್ಣ ಬಲನೆನಿಸಿದ ಭಗವಂತನಿಗೆ ಪ್ರಿಯವಾದ ಮಾರ್ಗದಲ್ಲಿ ಚಲಿಸು ಎಂದು ಋಜುಮಾರ್ಗವನ್ನು ತೋರಿಸುತ್ತಿರುವ ಸಂಕೇತ.
ಹೀಗೆ ಅತ್ಯಂತ ಮಹತ್ವ ಮತ್ತು ಪರಮ ಪಾವಿತ್ರ್ಯವನ್ನು ಹೊಂದಿರುವ ಯಜ್ಞ ನಾಮಕ ಪರಮಾತ್ಮನ ಸೇವೆಗಾಗಿಯೇ ಪಣ ತೊಟ್ಟು ನಿಂತಿರುವ ಯಜ್ಞೋಪವೀತಕ್ಕೆ ಬಲ ಬೇಡವೇ? ಅದಕ್ಕಾಗಿ ಅಂದು ಕಶ್ಯಪಾದಿ ಸಪ್ತ‌ಋಷಿಗಳನ್ನು ಪೂಜಿಸಿ, ಹೋಮವನ್ನು ಮಾಡಿ ಪಂಚಗವ್ಯ ಹಾಗೂ ಸಕ್ತು (ಹಿಟ್ಟು) ಪ್ರಾಶನದಿಂದ ಸತ್ವಭರಿತರಾಗಿ ವೇದವ್ಯಾಸರ ಪೂಜೆಯನ್ನು ಮಾಡಿ ಯಜ್ಞೋಪವೀತ ದಾನ ಮತ್ತು ಧಾರಣೆಯನ್ನು ಮಾಡಬೇಕು. ಹೀಗೆ ಋಷಿಗಳ ಸನ್ನಿಧಾನದಿಂದ ಬಲಿಷ್ಟವಾದ ಯಜ್ಞೋಪವೀತವು ನಮ್ಮ ಸಂಕಲ್ಪ ಶಕ್ತಿಯನ್ನು, ಕ್ರಿಯಾ ಶಕ್ತಿಯನ್ನು ಬಲಿಷ್ಠಗೊಳಿಸುವದರಲ್ಲಿ ಸಂದೇಹವಿಲ್ಲ. ಈ ಉಪಾಕರ್ಮವನ್ನು ಮುಗಿಸಿ ಬಂದ ಯಜಮಾನ ಮತ್ತು ಮಕ್ಕಳಿಗೆ ಆರತಿ ಮಾಡಿ ಮನೆಯೊಳಗೆ ಕರೆತರುವ ಪದ್ಧತಿ ಇದೆ.
 




ಉತ್ಸರ್ಜನ - ಉಪಾಕರ್ಮ ಎಂದರೇನು?

ಉತ್ಸರ್ಜನ ಎಂದರೆ ಬಿಡುವುದು ಎಂದರ್ಥ. ಯಾವುದನ್ನು ಬಿಡುವುದು ಎಂದರೆ ವೇದ ಗಳನ್ನು ಬಿಡುವುದು ಎಂದರ್ಥ. ಇದೇನಿದು ವೇದಗಳನ್ನು ಬಿಡುವುದು ಎಂದರೆ ಎನ್ನುವ ಸಂಶಯ ಬಂದರೆ ಇದಕ್ಕೆ ಹಿನ್ನೆಲೆ ಹೀಗಿದೆ - ಹಿಂದೆ ವೇದಕಾಲದಲ್ಲಿ ಋಷಿ-ಮುನಿಗಳು ವರ್ಷಪೂರ್ತಿ ವೇದಾಭ್ಯಾಸವನ್ನು ಮಾಡುತ್ತಿರಲಿಲ್ಲ. ಅದರಲ್ಲಿ ಸ್ವಲ್ಪ ದಿನಗಳ ಕಾಲ ವೇದಾಭ್ಯಾಸವನ್ನು ಬಿಟ್ಟು ವೇದದ ಅಂಗಗಳಾದ ಇನ್ನಿತರೇ ಶಾಸ್ತ್ರಗಳ ಅಧ್ಯಯನದಲ್ಲಿ, ಕೃಷ್ಯಾದಿಗಳಿಂದ ತಮ್ಮ ಉಪಜೀವನ ಕ್ಕೆ ಬೇಕಾದ ಧಾನ್ಯಸಂಗ್ರಹದಲ್ಲಿ ತೊಡಗುತ್ತಿದ್ದರು. ಅಂತಹ ಸಮಯದಲ್ಲಿ ವೇದಾಧ್ಯಯನವು ಅವಿಚ್ಛಿನ್ನವಾಗಿ ನಡೆಯಲು ಅಸಾಧ್ಯವಾದುದರಿಂದ, ಅಲ್ಲದೇ

ಅಧ್ಯಾಯೋತ್ಸರ್ಜನಂ ಮಾಘ್ಯಾಂ ಪೌರ್ಣಮಾಸ್ಯಾಂ ವಿಧೀಯತೇ |
ಅತ ಆರಭ್ಯ ಷಣ್ಮಾಸಾನ್ ಷಡಂಗಾನಿ ವಿಧೀಯತೇ ||

ಎನ್ನುವ ಪ್ರಮಾಣ ಶ್ಲೋಕ ದಿಂದ ಮಾಘ ಶುಕ್ಲ ಪೂರ್ಣಿಮಾದಂದು ವೇದಾಧ್ಯಯನವನ್ನು ಉತ್ಸರ್ಜನೆ ಮಾಡಿ (ಬಿಟ್ಟು) ವೇದದ ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂಧಶ್ಶಾಸ್ತ್ರ, ನಿರುಕ್ತ, ಜ್ಯೋತಿಷ್ಯಶ್ಶಾಸ್ತ್ರ, ಕಲ್ಪ ಎನ್ನುವ ವಿದ್ಯೆಗಳನ್ನು ಕಲಿಯಲು ಪ್ರಾರಂಭಿಸುತ್ತಿದ್ದರು. ಈ ರೀತಿಯಾಗಿ ನಿರಂತರವಾಗಿ ವೇದದ ಅಧ್ಯಯನ ವನ್ನು ಬಿಡುವುದಕ್ಕೆ‘ಉತ್ಸರ್ಜನ‘ ಎಂದು ಕರೆಯುತ್ತಿದ್ದರು. ಅಂತಹ ಸಮಯದಲ್ಲಿ ವೇದ ಮಂತ್ರ ಗಳ ಅಧ್ಯಯನವು ಲೋಪವಾಗಿ ಆ ವೇದಮಂತ್ರಗಳಿಗೆ ಯಾತಯಾಮತಾ (ಒಂದು ಯಾಮ ದಷ್ಟು ಕಾಲ ಮೀರುವುದು) ದೋಷವು ಬರುತ್ತಿತ್ತು. ಅಂತಹ ದೋಷವು ಕಳೆದು ವರ್ಣಾಶ್ರಮೋಕ್ತ ಕರ್ಮಗಳು ವೀರ್ಯವತ್ತಾಗಿ ಫಲ ಕೊಡಬೇಕಾದರೆ ಆಯಾಯಾ ಶಾಖೆಯವರು ಸ್ವಶಾಖೋಕ್ತ ವಿಧಿಯಿಂದ ಶ್ರಾವಣ ಶುಕ್ಲ ಪೂರ್ಣಿಮಾ ಅಥವಾ ಶ್ರವಣ ನಕ್ಷತ್ರದ ದಿನದಂದು ವೇದದ್ರಷ್ಟಾರ ರಾದ ಋಷಿಗಳನ್ನು ಪೂಜಿಸಿ, ಅವರ ಅನುಗ್ರಹದಿಂದ ನೂತನ ಯಜ್ಞೋಪವೀತವನ್ನು ಧಾರಣೆ ಮಾಡಿ ಪುನಃ ವೇದಾಧ್ಯಯನ - ಅಧ್ಯಾಪನವನ್ನು ಸ್ವೀಕರಿಸುವುದಕ್ಕೆ ‘ಉಪಾಕರ್ಮ‘ ಎಂದು ಕರೆಯುತ್ತಿದ್ದರು. ಈ ರೀತಿಯಾಗಿ ಉಪಾಕರ್ಮವನ್ನು ಏಕೆ ಮಾಡಬೇಕೆಂದರೆ ’ಅಯಾತಯಾಮ ಛಂದೋಭಿಃ ಯತ್ಕರ್ಮಸಿದ್ಧಿಕಾರಣಮ್‘ ಎಂದು ಹೇಳಿರುವುದರಿಂದ ನಾವು ಮಾಡುವಂತಹ ಕರ್ಮಗಳು ಸಿದ್ಧಿಯಾಗಬೇಕಾದರೆ ಅಯಾತಯಾಮ (ಯಾತಯಾಮತಾ ದೋಷವಿಲ್ಲದಿರುವ) ಮಂತ್ರಗಳಿಂದ ಮಾತ್ರ ಸಾಧ್ಯ. ಆದುದರಿಂದ ಮಾಘ ಮಾಸದಲ್ಲಿ ಉತ್ಸರ್ಜನವನ್ನು, ಶ್ರಾವಣ ಮಾಸದಲ್ಲಿ ಉಪಾಕರ್ಮವನ್ನು
ಅವಶ್ಯವಾಗಿ ಮಾಡಲೇಬೇಕು.
ಆದರೆ ಪ್ರಕೃತದಲ್ಲಿ ಶ್ರಾವಣ ಮಾಸ ದಲ್ಲಿಯೇ ಉತ್ಸರ್ಜನ - ಉಪಾಕರ್ಮ ಎರಡನ್ನೂ ಮಾಡುವ ಸಂಪ್ರದಾಯವು ಬೆಳೆದು ಬಂದಿದೆ. ಆ ದಿನ ಋಗ್ವೇದಿಗಳು ಅರುಂಧತೀ ಸಹಿತರಾದ ಸಪ್ತರ್ಷಿಗಳನ್ನು, ಯಜುರ್ವೇದಿಗಳು ನವಕಾಂಡ ಋಷಿಗಳನ್ನು ಸ್ಥಾಪನೆ ಮಾಡಿ, ಷೋಡಶೋಪಚಾರ ಪೂಜೆಗಳಿಂದ, ಚರುವಿನಿಂದ ಹೋಮವನ್ನು ಮಾಡಿ, ಉತ್ಸೃಷ್ಟಾಃ ವೈ ವೇದಾಃ ಎಂದು ವೇದವನ್ನು ತ್ಯಾಗ ಮಾಡಿ, (ಮಂತ್ರ) ಸ್ನಾನವನ್ನು ಮಾಡಿ, ಉತ್ಸರ್ಜನಾಂಗವಾಗಿ ದೇವರ್ಷಿಪಿತೃ ತರ್ಪಣವನ್ನು ಕೊಟ್ಟು ಸ್ಥಾಪಿಸಿದ ಋಷಿಗಳನ್ನು ಉದ್ವಾಸನೆ ಮಾಡಿ ಕೃಷ್ಣಾರ್ಪಣವನ್ನು ಬಿಡಬೇಕು. ಆನಂತರ ಪುನಃ ಋಷಿಗಳನ್ನು ಆಹ್ವಾನಿಸಿ, ಪೂಜೆ, ಯಜ್ಞೋಪವೀತ ಸಹಿತವಾದ ಹೋಮವನ್ನು ಮುಗಿಸಿ, ಉಪಕೃತಾಃ ವೈ ವೇದಾಃ ಎಂದು ಉದ್ಘೋಷಿಸಿ, ಋಷಿಗಳ ಅಪ್ಪಣೆ ಪಡೆದು ವೇದಗಳನ್ನು ಸ್ವೀಕರಿಸಿ, ಹೋಮಶೇಷವಾದ ಸಕ್ತು (ಹಿಟ್ಟನ್ನು) ವನ್ನು ಭಕ್ಷಿಸಿ, ಯಜ್ಞೋಪವೀತ ದಾನ, ಧಾರಣೆ, ಬ್ರಹ್ಮಯಜ್ಞವನ್ನು ಮುಗಿಸಿ ಮಾಡಿದ ಕರ್ಮವನ್ನು ಭಗವಂತನಿಗೆ ಸಮರ್ಪಿಸಿ, ಭಗವಂತನ ಅನುಗ್ರಹವನ್ನು ಪಡೆಯುವುದೇ ಉಪಾಕರ್ಮದ ಉದ್ದೇಶ.

Sunday, August 11, 2013

ಶ್ರಾವಣ ಮಾಸ

                       
ಶ್ರಾವಣ ಮಾಸವು ಶ್ರೀಧರ ಹಾಗು ಶ್ರೀ ಧನ್ಯ ದೇವತೆಯುಳ್ಳದ್ದು. ಪೂರ್ಣಿಮಾದಲ್ಲಿ ಶ್ರವಣಾ ನಕ್ಷತ್ರದ ಯೋಗವಿರುವಾಗ ಶ್ರಾವಣ ಮಾಸವು ಬರುತ್ತದೆ. ಶ್ರಾವಣದಲ್ಲಿ ಮಾಡಿದ ಭಗವನ್ಮಹಿಮೆಯ ಮಂತ್ರಸಿದ್ಧಿಯನ್ನು ಕೊಡುವದರಿಂದಲೂ ಶ್ರಾವಣಮಾಸ ಯನಿಸಿದೆ. ಶ್ರಾವಣಮಾಸದ ಯಾವ ದಿನವೂ ವೃತರಹಿತವಾಗಿಲ್ಲಾ. ಒಂದು ದಿನವೂ ವೃತ ಮಾಡದೇ ಶ್ರಾವಣವನ್ನು ಯಾರು ಕಳೆಯುವರೋ ಅವರು ನರಕವನ್ನು ಹೊಂದುವರು.

ವೃತಗಳು-
೧) ಏಕ ಭುಕ್ತವೃತ.
೨) ಮಂಗಳ ಗೌರಿ ವೃತ.
೩) ಬುಧ,ಭ್ರಹಸ್ಪತಿ ವೃತ.
೪) ಜೀವಂತಿಕಾ ವೃತ.
೫) ಶನೇಶ್ವರ ವೃತ.
೬) ರೋಟಿಕಾ ವೃತ.
೭) ದೂರ್ವಾಗಣಪತಿ ವೃತ.
೮) ಅನಂತ ವೃತ.
೯) ನಾಗಚತುರ್ಥಿ
೧೦) ನಾಗ ಪಂಚಮಿ
೧೧) ಗರುಡ ಪಂಚಮಿ.
೧೨) ಸಿರಿಯಾಳ ಷಷ್ಟಿ.
೧೩) ಅವ್ಯಂಗ ವೃತ.
೧೪) ಶೀತಲಾಸಪ್ತಮಿ ವೃತ.
೧೫) ಪುತ್ರದಾ ಏಕಾದಶಿ ವೃತ.
೧೬) ಪವಿತ್ರಾರೋಪಣವೃತ
೧೭) ದುರ್ಗಾಷ್ಟಮಿ.
೧೮) ಕೃಷ್ಣಾಷ್ಟಮಿ.
೧೯) ವಾಮನ ಜಯಂತಿ.
೨೦) ಅಗಸ್ತ್ಯಾರ್ಘ್ಯ
೨೧) ಮಹಾಲಕ್ಷ್ಮೀವೃತ.

೧) ಏಕಭುಕ್ತ ವೃತ-
ದಿನಕ್ಕೆ ಒಂದುಬಾರಿ ಮಾತ್ರ ಊಟವನ್ನು ಮಾಡಬೇಕು. ಬೆಳಗಿನಿಂದಾ ಉಪವಾಸವಿದ್ದು ಸಂಜೆ ೪.೦೦ ಘಂಟೆಗೆ ಊಟವನ್ನು ಮಾಡಿ ಮತ್ತೆ ಫಲಹಾರಾದಿಗಳನ್ನು ಮಾಡದೇ ಶ್ರೀಧರನ ಪ್ರೀತಿಗಾಗಿ ತುಪ್ಪ, ಕ್ಷೀರ, ಹಣ್ಣು ಮೊದಲಾದವುಗಳನ್ನು ಬ್ರಾಹ್ಮಣನಿಗೆ ದಾನ ಮಾಡಬೇಕು.

೨) ಮಂಗಳ ಗೌರಿವೃತ -

ಮಾಸದಲ್ಲಿ ಬರುವ ೪/೫ ಮಂಗಳವಾರದಲ್ಲಿ ಈ ವೃತವನ್ನ ಮಾಡಬೇಕು. ನವ ವಿವಾಹಿತ ಸ್ತ್ರೀಯರು ವಿವಾಹ ವರ್ಷದಿಂದಾ ೫ ವರ್ಷ ಪರ್ಯಂತ ಈ ವ್ರುತವನ್ನು ಮಾಡಬೇಕು. ಮೂದಲ ವರ್ಷ ತಾಯಿಯ ಮನೆಯಲ್ಲಿಯೂ, ನಂತರದ ವರ್ಷಗಳಲ್ಲಿ ಪತಿಯ ಮನೆಯಲ್ಲಿಯೂ ಆಚರಿಸತಕ್ಕದ್ದು.

) ಬುಧ, ಬ್ರಹಸ್ಪತಿ ವೃತ -
ಶ್ರಾವಣ ಮಾಸದಲ್ಲಿ ಬರುವ ಬುಧ-ಗುರು ವಾರಗಳಲ್ಲಿ ಬುಧ,ಬ್ರಹಸ್ಪತಿಯರನ್ನು ಪೂಜಿಸಿದರೆ ಇಷ್ಟಾರ್ಥಗಳೆಲ್ಲಾ ಸಿದ್ದಿಸುವವು. ಮೊಸರನ್ನವನ್ನು ನಿವೇದನೆ ಮಾಡಿ ಬ್ರಾಹ್ಮಣನಿಗೆ ಭೋಜನ ಮಾಡಿಸಬೇಕು. ಸ್ತ್ರೀಯರು ತೊಟ್ಟಿಲ ಮೇಲ್ಬಾಗದಲ್ಲಿ ಬುಧ-ಗುರು ಚಿತ್ರ ಬರೆದು ಪೂಜಿಸಿದರೆ ಸತ್ಪುತ್ರರು ಜನಿಸುವರು. ಪಾಕ ಶಾಲೆಯಲ್ಲಿ ಪೂಜಿಸಿದರೆ, ಪಾಕ ಸಮೃದ್ಧಿಯಾಗುವದು. ಧನಾಗಾರದಲ್ಲಿ ಪೂಜಿಸಿದರೇ ಧನವು ಅಭಿವೃದ್ದಿ ಯಾಗುವದು. ಇದನ್ನು ಏಳು ವರ್ಷಗಳವರೆಗೆ ಮಾಡಬೆಕು.

೪) ಜಿವಂತಿಕಾ ವೃತ-
ಜಿವಂತಿಕಾ ದೇವಿ ಎಂದರೆ ಸಂತಾನ ಲಕ್ಷ್ಮೀ. ಶ್ರಾವಣ ಶುಕ್ಲ ಶುಕ್ರವಾರದಂದು ಅನೇಕ ಮಕ್ಕಳೂಡಗೂಡಿ ಜೀವಂತಿಕಾದೇವಿಯ ಚಿತ್ರವನ್ನು ಬರೆದು ಷೊಡಷೊಪಚಾರಗಳಿಂದ ಪೊಜಿಸಬೆಕು. ಗೊದಿ ಹಿಟ್ಟಿನಿಂದ ಐದು ಹಣತೆಗಳನ್ನು ಮಾಡಿ ತುಪ್ಪದ ಬತ್ತಿಯಿಂದಾ ಆರತಿ ಮಾಡಬೆಕು. ನಂತರ ಹಣತೆಗಳನ್ನು ತುಪ್ಪದಲ್ಲಿ ಕರೆದು ಸ್ವತ; ಭಕ್ಷಿಸಬೇಕು. ವೃತ ನಿರತರು ಹಸಿರು ಸೀರೆ, ಕುಪ್ಪುಸ, ಬಳೆಗಳನ್ನು ಧರಿಸಬಾರದು. ಹಸಿರು ಬಣ್ಣದ ಕಾಯಿಪಲ್ಯಗಳನ್ನೂ ಬಳಸಬಾರದು. ಅಕ್ಕಿ ತೊಳೆದ ನೀರನ್ನು ಎಂದೂ ದಾಟಬಾರದು. ವೃತಾಚರಣೆಯಿಂದಾ ಗರ್ಭದಲ್ಲಿ ಬದುಕಿ ಜೇವಂತವಾಗಿರುವ ಮಕ್ಕಳೇ ಹುಟ್ಟುವರು.

೫) ಶ್ರಾವಣ ಮಾಸದ ಪ್ರತಿ ಶನಿವಾರ ಶನೇಶ್ವರ, ವಾಯು,ಹಾಗು ನೃಸಿಂಹದೇವರ ಪೂಜೆಯನ್ನು ಷೂಡಶೂಪಚಾರಗಳಿಂದ ಮಾಡಬೇಕು ಯಜಮಾನನು ಅಂದು ಏಳ್ಳೆಣ್ಣೆಯಿಂದಾ ಅಭ್ಯಂಜನವನ್ನು ಮಾಡಬೆಕು. ಹಾಗು ಒಬ್ಬ ವಿಪ್ರರನ್ನು ಆಮಂತ್ರಿಸಿ ಅವರಿಗೂ ಏಳ್ಳೆಣ್ಣೆಯಿಂದಾ ಅಭ್ಯಂಜನ ಮಾಡಿಸಬೆಕು. ವಿಪ್ರನು ಕುಂಟನಾಗಿದ್ದರೆ ಉತ್ತಮ. ಏಕೆಂದರೆ ಶನಿದೇವರು ಕುಂಟನಾದ್ದರಿಂದಾ. ಶನಿದೇವರನ್ನು ಶನ್ನೂದೇವಿ ರಭಿಷ್ಟಯಾ... ಮಂತ್ರದಿಂದಾ, ಹನುಮಂತ ದೇವರನ್ನು ಬುದ್ದಿರ್ಭಲಂ.... ಮಂತ್ರದಿಂದಾ, ಹಾಗು ನೃಸಿಂಹ ದೇವರನ್ನು ಉಗ್ರಂ ವಿರಂ .... ಮಂತ್ರದಿಂದಾ ಆವ್ಹಾನಿಸಿ ಪೂಜಿಸಬೇಕು. ವಿಪ್ರರಿಗೆ ಭೋಜನ ಮಾಡಿಸಿ ಏಳ್ಳೆಣ್ಣೆ, ಕಬ್ಬಿಣಪಾತ್ರೆ, ಏಳ್ಳು, ಫಲ, ತಾಂಬೂಲಗಳೂಂದಿಗೆ ದಕ್ಷಿಣಾದಿಗಳನ್ನು ಕೂಟ್ಟು ಶನಿಯು ಪ್ರೀತನಾಗಲಿ ಎಂದು ಕೃಷ್ಣಾರ್ಪಣ ಬಿಡಬೇಕು. ಈ ವೃತದಿಂದಾ ಲಕ್ಷ್ಮೀ ಸ್ತಿರವಾಗಿ ನಿಲ್ಲುವಳು, ಪಂಚಮ, ಅಷ್ಟಮ, ಎಳುವರೆಶನಿಯ ಕಾಟಗಳು ಇರುವದಿಲ್ಲಾ.

) ರೋಟಿಕಾವೃತ- ರೋಟಿಕಾವೃತವು ಶ್ರಾವಣ ಮಾಸದ ಶುಕ್ಲ ಪ್ರತಿಪದಾ ಸೋಮವಾರ ಬಂದರೆ ಅಂದಿನಿಂದಾ ೫ ವಾರಗಳಕಾಲ ಆಚರಿಸಬೇಕು. ಈ ದಿನಗಳಲ್ಲಿ ರುದ್ರಾಂತರ್ಮಿಯಾದ ಸಂಕರ್ಷಣನನ್ನು "ತ್ರ್ಯಯಂಬಕಂ ಯಜಾಮಹೇ.... ಮಂತ್ರದಿಂದಾ ಆಹ್ವಾನಿಸಿ ಬಿಲ್ವ ಹಾಗು ನಾನಾ ತರದ ಪುಷ್ಪಗಳಿಂದಾ ಪೂಜಿಸಿ (೫) ಐದು ರೂಟ್ಟಿಗಳನ್ನು ನೇವೈದ್ಯವೆಂದು ಅರ್ಪಿಸಬೆಕು. ಅದರಲ್ಲಿ ೨ ನ್ನು ವಿಪ್ರರಿಗೆ, ೨ ನ್ನು ಪೂಜಕನಿಗೂ, ಒಂದನ್ನು ಭಗವಂತನಿಗೆ ಅರ್ಪಿಸಬೆಕು. ಭಗವಂತನಿಗೆ ಅರ್ಪಿಸಿದ ರೂಟ್ಟಿಯನ್ನು ಗೋವಿಗೆ ಕೂಡಬೇಕು. ಈ ವೃತಚರಣೆಯಿಂದಾ ಸಪ್ತದ್ವೀಪಸಹಿತ ಭೂಮಿಯನ್ನು ದಾನ ಮಾಡಿದರೆ ಬರುವ ಫಲ ದೂರಕುವದು. ಈರಿತಿಯಾಗಿ ೫ ವರ್ಷಗಳ ಪರ್ಯಂತರ ಮಾಡಿ ನಂತರ ಉದ್ಯಾಪನೆಯನ್ನು ಮಾಡಿ ವೃತ ಸಮಾಪ್ತಿ ಮಾಡಬೆಕು. 


ಸಶೇಷ...

ಸಂಗ್ರಹ -
ಶ್ರೀ ಗುರುರಾಜಾಚಾರ್ ಪುಣ್ಯವಂತ,
ಹುಬ್ಬಳ್ಳಿ

 


 

Friday, July 26, 2013

ಶುಕ್ಲ ಯಜುರ್ವೇದೀಯ ವೈಶ್ವದೇವ


                      // ಶ್ರೀಶಂ ವಂದೇ ಜಗದ್ಗುರುಂ //
                        ಶುಕ್ಲ ಯಜುರ್ವೇದೀಯ ವೈಶ್ವದೇವ

 ೧)  ಆಚಮನಂ -
ಓಂ ಕೇಶವಾಯ ಸ್ವಾಹಾ | ಓಂ ನಾರಾಯಣಾಯ ಸ್ವಾಹಾ | ಓಂ ಮಾಧವಾಯ ಸ್ವಾಹಾ | (ಎಂದು ಮೂರು ಸಲ ಒಂದು ಉದ್ಧರಣೆ ನೀರನ್ನು ಸ್ವೀಕರಿಸಬೇಕು.) ಓಂ ಗೋವಿಂದಾಯ ನಮಃ, ( ಇತಿ ದಕ್ಷಿಣ ಪಾಣಿಂ ಪ್ರಕ್ಷಾಲ್ಯ (ಎರಡೂ
ಕೈಗಳನ್ನು ತೊಳೆಯುವದು)) ಓಂ ವಿಷ್ಣವೇ ನಮಃ ಓಂ ಮಧುಸೂದನಾಯ ನಮಃ (ಮೇಲಿನ ತುಟಿಯ ಸ್ಪರ್ಶ), ಓಂ ತ್ರಿವಿಕ್ರಮಾಯ ನಮಃ (ಕೆಳ ತುಟಿ), ಓಂ ವಾಮನಾಯ ನಮಃ (ಬಲಗಲ್ಲ), ಓಂ ಶ್ರೀಧರಾಯ ನಮಃ (ಎಡಗಲ್ಲ), ಓಂ ಹೃಷೀಕೇಶಾಯ ನಮಃ (ಹಸ್ತ), ಓಂ ಪದ್ಮನಾಭಾಯ ನಮಃ (ಪಾದ), ಓಂ ದಾಮೋದರಾಯ ನಮಃ (ಶಿರಸ್ಸು), ಓಂ ಸಂಕರ್ಷಣಾಯ ನಮಃ (ಮುಖ), ಓಂ ವಾಸುದೇವಾಯ ನಮಃ (ಮೂಗಿನ ಬಲ ಹೊರಳೆ), ಓಂ ಪ್ರದ್ಯುಮ್ನಾಯ ನಮಃ (ಮೂಗಿನ ಎಡ ಹೊರಳೆ)  ಓಂ ಅನಿರುದ್ಧಾಯ ನಮಃ (ಬಲ ಕಣ್ಣು), ಓಂ ಪುರುಷೋತ್ತಮಾಯ ನಮಃ (ಎಡ ಕಣ್ಣು), ಓಂ ಅಧೋಕ್ಷಜಾಯ ನಮಃ (ಬಲ ಕಿವಿ), ಓಂ ನಾರಸಿಂಹಾಯ ನಮಃ (ಎಡ ಕಿವಿ), ಓಂ ಅಚ್ಯುತಾಯ ನಮಃ (ನಾಭಿ), ಓಂ ಜನಾರ್ದನಾಯ ನಮಃ (ಹೃದಯ), ಓಂ ಉಪೇಂದ್ರಾಯ ನಮಃ
(ಶಿರಸ್ಸು), ಓಂ ಹರಯೇ ನಮಃ (ಬಲಭುಜ), ಓಂ ಶ್ರೀ ಕೃಷ್ಣಾಯ ನಮಃ (ಎಡ ಭುಜ) 

೨) ಪ್ರಾಣಾಯಾಮಃ -
ಅಸ್ಯ ಶ್ರೀ ಪ್ರಣವ ಮಂತ್ರಸ್ಯ ಪರಬ್ರಹ್ಮ ಋಷಿಃ | ಗಾಯತ್ರೀ ಛಂದಃ | ಪರಮಾತ್ಮಾ ದೇವತಾ ಪ್ರಾಣಾಯಾಮೇ ವಿನಿಯೋಗಃ || ಒಂದು ಉದ್ಧರಣೆ ನೀರನ್ನು ಬಿಡಬೇಕು)
 ಮಂತ್ರ :
ಓಂ ಭೂಃ | ಓಂ ಭುವಃ | ಓಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಂ ಸತ್ಯಂ || ಓಂ ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ || ಧಿಯೋ ಯೋ ನಃ ಪ್ರಚೋದಯಾತ್ || ಓಂ ಆಪೋ ಜ್ಯೋತೀರಸೋಮೃತಂ ಬ್ರಹ್ಮ ಭೂರ್ಭುವಃಸ್ವರೋಂ || (ಇದೇ ರೀತಿಯಾಗಿ ಮೂರು ಸಾರಿ ಉಚ್ಛರಿಸಿ ಪ್ರಾಣಾಯಾಮ ಮಾಡಬೇಕು.)

೩)  ಸಂಕಲ್ಪ -
 ಶುಭೇ ಶೋಭನೇ ಮುಹೂರ್ತೇ ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮ ಚರಣೇ, ಭಾರತ ವರ್ಷೇ, ಭರತ ಖಂಡೇ, ಜಂಬೂ ದ್ವೀಪೇ, ಬ್ರಹ್ಮಣಃ ದ್ವಿತೀಯ ಪರಾರ್ಧೇ, ಪುಣ್ಯೋದಯೇ, ದಂಡಕಾರಣ್ಯೇ ದೇಶೇ, ಗೋದಾವರ್ಯಾಃ ದಕ್ಷಿಣೇ ತೀರೇ, ಶಾಲಿವಾಹನ ಶಕೇ, ಬೌದ್ಧಾವತಾರೇ, ರಾಮ ಕ್ಷೇತ್ರೇ, ಅಸ್ಮಿನ್ ವರ್ತಮಾನೇ  ಚಾಂದ್ರಮಾನೇನ ...... ಸಂವತ್ಸರೇ ..... ಅಯನೇ .... ಋತೌ ... ಮಾಸೇ .... ಪಕ್ಷೇ .... ತಿಥೌ .... ವಾಸರೇ .... ನಕ್ಷತ್ರೇ ಶುಭಯೋಗೇ, ಶುಭ ಕರಣೇ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಅಗ್ನ್ಯಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಹರಿಣೀಪತಿ ಪರಶುರಾಮಪ್ರೀತ್ಯರ್ಥಂ ಪಂಚಮಹಾಯಜ್ಞಾಂಗ ಪ್ರಾತಃ/ಸಾಯಂ ವೈಶ್ವದೇವಾಖ್ಯಂ ಕರ್ಮ ಕರಿಷ್ಯೇ | ತದಂಗ ಪಂಚಭೂಸಂಸ್ಕಾರಪೂರ್ವಕ ಅಗ್ನಿಪ್ರತಿಷ್ಠಾಪನಂ ಅಹಂ ಕರಿಷ್ಯೇ || ತತ್ರ ದರ್ಭೈಸ್ತುಲಸೀದಲೇನ ವಾ ಪ್ರದಕ್ಷಿಣೇನ ಪರಿಸಮುಹ್ಯ ಇತಿ ತ್ರಿವಾರಂ ಪರಿಸಮುಹ್ಯ | ಗೋಮಯೋದಕೇನ ಪಶ್ಚಿಮಾದಾರಭ್ಯ ಪ್ರಾಗಾಂತಂ ಉಪಲಿಪ್ಯ || ಯಜ್ಞಕಾಷ್ಠೇನ ತ್ರಿರುಲ್ಲಿಖ್ಯ | ಅಂಗುಷ್ಠ - ಅನಾಮಿಕಾಭ್ಯಾಂ ಪ್ರಾಂಚಃ ಪಾಂಸೂನುದ್ಧೃತ್ಯ || ಕುಶೋದಕೈಃ ತ್ರಿರಭ್ಯುಕ್ಷ್ಯ || ಆಗ್ನೇಯಕೋಣೇ ಅಗ್ನಿಂ ನಿಧಾಯ || ತತ್ರ ಲೌಕಿಕಾಗ್ನಿಂ ತಾಮ್ರಪಾತ್ರೇಣ ಮೃತ್ಪಾತ್ರೇಣ ವಾ ಆನೀಯ ||

೪)     ಅನ್ವಗ್ನಿರಿತ್ಯಸ್ಯ ಮಂತ್ರಸ್ಯ ಪುರೋಧಾಃ ಋಷಿಃ ತ್ರಿಷ್ಟುಪ್ ಛಂದಃ ಅಗ್ನಿಃ ದೇವತಾ, ಅಗ್ನ್ಯಾನಯನೇ ವಿನಿಯೋಗಃ
 ಓಮ್ ಅನ್ವಗ್ನಿರುಷಸಾಮಗ್ರಮಖ್ಯದನ್ವಹಾನಿ ಪ್ರಥಮೋ ಜಾತವೇದಾಃ | 
     ಅನುಸೂರ್ಯಸ್ಯ  ಪುರುತ್ರಾಚ ರಶ್ಮೀನನುದ್ಯಾವಾ ಪೃಥಿವೀ ಆತತಂಥ || ಇತ್ಯನೇನ ಪಾಕಶಾಲಾಯಾಃ ಲೌಕಿಕಾಗ್ನಿಮಾದಾಯ

೫)    ಅಗ್ನಿ ಪ್ರತಿಷ್ಠಾಪನಂ.
 ಪೃಷ್ಟೋದಿವೀತಿ ಮಂತ್ರಸ್ಯ ಕುತ್ಸಃ ಋಷಿಃ ತ್ರಿಷ್ಟುಪ್ ಛಂದಃ ವೈಶ್ವಾನರಃ ದೇವತಾ ಅಗ್ನಿಪ್ರತಿಷ್ಠಾಪನೇ ವಿನಿಯೋಗಃ.
 ಓಂ ಪೃಷ್ಟೋದಿವಿ ಪೃಷ್ಟೋ ಅಗ್ನಿಃ ಪೃಥಿವ್ಯಾಂ ಪೃಷ್ಟೋ ವಿಶ್ವಾ ಓಷಧೀರಾವಿವೇಶ |
 ವೈಶ್ವಾನರಃ ಸಹಸಾ ಪೃಷ್ಟೋ ಅಗ್ನಿಃ ಸನೋದಿವಾ ಸರಿಷಸ್ಪಾತು ನಕ್ತಂ || ಇತಿ ಪಾವಕ ನಾಮಾನಂ ಅಗ್ನಿಂ ಪ್ರತಿಷ್ಠಾಪ್ಯ || ಸುಪ್ರತಿಷ್ಟಿತಮಸ್ತು || ತ್ರಿಭಿಃ ಸಾವಿತ್ರೈಃ ಪ್ರಜ್ವಾಲ್ಯ ||

೬)  ಅಗ್ನಿ ಪ್ರಜ್ವಾಲನಂ -
ತತ್ಸವಿತುಃ ಇತ್ಯಸ್ಯ ಮಂತ್ರಸ್ಯ ವಿಶ್ವಾಮಿತ್ರ ಋಷಿಃ ಗಾಯತ್ರೀ ಛಂದಃ ಸವಿತಾ ದೇವತಾ | ತಾƒಸವಿತುರಿತ್ಯಸ್ಯ ಮಂತ್ರಸ್ಯ ಕಣ್ವಋಷಿಃ ತ್ರಿಷ್ಟುಪ್ ಛಂದಃ ಸವಿತಾ ದೇವತಾ || ವಿಶ್ವಾನಿ ದೇವ ಇತ್ಯಸ್ಯ ಮಂತ್ರಸ್ಯ ನಾರಾಯಣ ಋಷಿಃ ಗಾಯತ್ರೀ ಛಂದಃ ಸವಿತಾ ದೇವತಾ ಸರ್ವೇಷಾಂ ಅಗ್ನಿಪ್ರಜ್ವಾಲನೇ ವಿನಿಯೋಗಃ ||
     ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ || ಓಂ ತಾƒಸವಿತುರ್ವರೇಣ್ಯಸ್ಯ ಚಿತ್ರಾಮಾಹƒವ್ವೃಣೇ ಸುಮತಿಂ ವಿಶ್ವಜನ್ಯಾಂ|
     ಯಾಮಸ್ಯ ಕಣ್ವೋ ಅದುಹತ್ಪ್ರಪೀನಾƒ ಸಹಸ್ರಧಾರಾಂ ಪಯಸಾ ಮಹೀಂ ಗಾಂ ||
  ಓಂ ವಿಶ್ವಾನಿ ದೇವಸವಿತರ್ದುರಿತಾನಿ ಪರಾ ಸುವ | ಯದ್ಭದ್ರಂ ತನ್ನ ಆಸುವ || {ಏಭಿಃ ತ್ರಿಮಂತ್ರೈಃ ವೇಣುನಲಿಕಯಾ ಅಗ್ನಿಂ ಪ್ರಜ್ವಾಲ್ಯ}

೭)  ಅಗ್ನಿಪುರುಷ ಧ್ಯಾನಂ -
ಚತ್ವಾರಿಶೃಂಗ ಇತ್ಯಸ್ಯ ಮಂತ್ರಸ್ಯ ವಾಮದೇವ ಋಷಿಃ ತ್ರಿಷ್ಟುಪ್ ಛಂದಃ  ಯಜ್ಞಪುರುಷೋ ದೇವತಾ ಧ್ಯಾನೇ ವಿನಿಯೋಗಃ -
 ಓಂ ಚತ್ವಾರಿಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತಹಸ್ತಾಸೋ ಅಸ್ಯ | ತ್ರಿಧಾಬದ್ಧೋ ವೃಷಭೋ ರೋರವೀತಿ ಮಹೋದೇವೋ ಮƒರ್ತ್ಯಾಂ ಆವಿವೇಶ ||
     ಸ್ಮೃತಿಮಂತ್ರಾಶ್ಚ - ಸಪ್ತಜಿಹ್ವಂ ತ್ರಿಪಾದಂಚ ಸಪ್ತಹಸ್ತಂ ದ್ವಿನಾಸಿಕಂ |
     ಚತುರ್ವಕ್ತ್ರಂ ಷಳಕ್ಷಂ ಚ ಚತುಃಶೃಂಗಂ ದ್ವಿಶೀರ್ಷಕಂ ||
     ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ | 
     ಬಿಭ್ರಾಣಂ ದಕ್ಷಿಣೈಃ ಹಸ್ತೈಃ ಶಕ್ತಿಮಿಧ್ಮಂ ಸ್ರುವಂ ಸ್ರುಚಂ ||
     ತೋಮರಂ ವ್ಯಜನಂ ವಾಮೇ ಘೃತಪಾತ್ರಂ ತಥೈವ ಚ |
     ಮೇಷಾರೂಢಂ ಸುಖಾಸೀನಂ ಜಟಾಮುಕುಟಮಂಡಿತಂ ||
     ಸ್ವಾತ್ಮಾಭಿಮುಖಮಾಸೀನಂ ಧ್ಯಾಯೇದ್ದೇವಂ ಹುತಾಶನಂ ||

೮)  ಅಗ್ನಿ ಸಮ್ಮುಖೀಕರಣಂ -
ಏಷೋಹ ದೇವ ಇತ್ಯಸ್ಯ ಮಂತ್ರಸ್ಯ ಪ್ರಜಾಪತಿಃ ಋಷಿಃ ತ್ರಿಷ್ಟುಪ್ ಛಂದಃ ಪಮಾತ್ಮಾ ದೇವತಾ ಅಗ್ನಿ ಸಮ್ಮುಖೀಕರಣೇ ವಿನಿಯೋಗಃ ||
     ಓಂ ಏಷೋಹ ದೇವಃ ಪ್ರದಿಶೋನು ಸರ್ವಾಃ ಪೂರ್ವೋ ಹ ಜಾತಃ ಸ ಉ ಗರ್ಭೇ ಅಂತಃ |
     ಸ ಏವ ಜಾತಃ ಸಜನಿಷ್ಯಮಾಣಃ ಪ್ರತ್ಯಙ್ಜನಾಸ್ತಿಷ್ಠತಿ ಸರ್ವತೋ ಮುಖಃ ||
     ಭೋ ಅಗ್ನೇ ಶಾಂಡಿಲ್ಯ ಗೋತ್ರ ಮೇಷಾರೋಢ ಪ್ರಾಂಗ್ಮುಖ ದೇವ ಮಮ ಸಮ್ಮುಖೋ ಭವ | ಇತಿ ಸಾಕ್ಷತೋದಕಪಾಣಿಭ್ಯಾಂ ಅಗ್ನಿಂ ಅಭಿಮುಖೀ ಕೃತ್ಯ ಪರಿಷೇಚನಂ || ತತಃ ಗಂಧಪುಷ್ಪಾಕ್ಷತಾನ್ ಗೃಹೀತ್ವಾ ಪ್ರಾಗಾದಿ ದಿಕ್ಷು ಪೂಜಯೇತ್ ||

೯)  ಅಗ್ನ್ಯಲಂಕರಣಂ -
    ಓಂ ಅಗ್ನಯೇ ನಮಃ, ಓಂ ಹುತವಾಹನಾಯ ನಮಃ, ಓಂ ಹುತಾಶನಾಯ ನಮಃ, ಓಂ ಕೃಷ್ಣವರ್ತ್ಮನೇ ನಮಃ,
 ಓಂ ಸಪ್ತಜಿಹ್ವಾಯ ನಮಃ, ಓಂ ವೈಶ್ವಾನರಾಯ ನಮಃ, ಓಂ ಜಾತವೇದಸೇ ನಮಃ, ಓಂ ಯಜ್ಞಪುರುಷಾಯ ನಮಃ. - ಗಂಧಪುಷ್ಪಾಕ್ಷತಾನ್ ಸಮರ್ಪಯಾಮಿ || ತತಃ ಅಗ್ನಿಂ ಪ್ರಜ್ವಾಲ್ಯ | ಚರುಂ ಅಭಿಘಾರ್ಯ | ಗಾಯತ್ರ್ಯಾ ಅನ್ನಂ ಪ್ರೋಕ್ಷ್ಯ | ಮುಖಂ ಯಃ ಸರ್ವದೇವಾನಾಂ ಹವ್ಯಭುಕ್ಕವ್ಯಭುಕ್ತಥಾ |ಪಿತೄಣಾಂ ಚ ನಮಸ್ತಸ್ಮೈ ವಿಷ್ಣವೇ ಪಾವಕಾತ್ಮನೇ || ಇತಿ ಸ್ವಾಹಾಕಾರೇಣ ಜುಹುಯಾತ್ | ದಕ್ಷಿಣಜಾನ್ವಾ ಚ ಹೃದಿ ಸವ್ಯ ಹಸ್ತಂ ನಿಧಾಯ ಪ್ರದೀಪ್ತಾಗ್ನೌ ಬಾದರಿಕಪ್ರಮಾಣಮೋದನಂ ಆದಾಯ ದೇವತೀರ್ಥೇನ ಜುಹುಯಾತ್ |

೧೦)  ಆಹುತಯಃ
      ಓಂ ಓಂ ನಮೋ ನಾರಾಯಣಾಯ ಸ್ವಾಹಾ, ಓಂ ನಮೋ ನಾರಾಯಣಾಯ ಇದಂ ನ ಮಮ - ೧೨ ಆಹುತಿ
      ಓಂ ಕ್ಲೀಂ ಕೃಷ್ಣಾಯ ಸ್ವಾಹಾ, ಓಂ ಕ್ಲೀಂ ಕೃಷ್ಣಾಯ ಇದಂ ನ ಮಮ - ೦೬ ಆಹುತಿ
  ಓಂ ಬ್ರಹ್ಮಣೇ ಸ್ವಾಹಾ ಓಂ ಬ್ರಹ್ಮಣೆ ಇದಂ ನ ಮಮ -೧
      ಓಂ ಪ್ರಜಾಪತಯೇ ಸ್ವಾಹಾ, ಓಂ ಪ್ರಜಾಪತಯೇ ಇದಂ ನ ಮಮ -೧
      ಓಂ ಗೃಹ್ಯಾಭ್ಯಃ ಸ್ವಾಹಾ, ಓಂ ಗೃಹ್ಯಾಭ್ಯೋ ಇದಂ ನ ಮಮ -೧
      ಓಂ ಕಶ್ಯಪಾಯ ಸ್ವಾಹಾ, ಓಂ ಕಶ್ಯಪಾಯ ಇದಂ ನ ಮಮ -೧
      ಓಂ ಅನುಮತಯೇ ಸ್ವಾಹಾ, ಓಂ ಅನುಮತಯೇ ಇದಂ ನ ಮಮ -೧
      ಓಂ ವಿಶ್ವೇಭ್ಯೋ ದೇವೇಭ್ಯಃ ಸ್ವಾಹಾ ಓಂ ವಿಶ್ವೇಭ್ಯೋ ಇದಂ ನ ಮಮ -೧
      ಓಂ ಅಗ್ನಯೇ ಸ್ವಿಷ್ಟಕೃತೇ ಸ್ವಾಹಾ, ಓಂ ಅಗ್ನಯೇ ಸ್ವಿಷ್ಟಕೃತೇ ಇದಂ ನ ಮಮ -೧

೧೧)  ವ್ಯಾಹೃತಿ ಹೋಮಃ- (ಆಜ್ಯಹುತಿ)
      ಓಂ ಭೂಃ ಸ್ವಾಹಾ, -೧
      ಓಂ ಭುವಃ ಸ್ವಾಹಾ, -೧
      ಓಂ ಸ್ವಃ ಸ್ವಾಹಾಃ,  -೧
      (ಷೋಡಷೋಪಚಾರಪೂಜಾಃ ಸಮರ್ಪ್ಯ)

೧೨)  ಹುತಭಸ್ಮಧಾರಣಂ -
ಮಾನಸ್ತೋಕೇತ್ಯಸ್ಯ ಮಂತ್ರಸ್ಯ ಕುತ್ಸಃ ಋಷಿಃ ರುದ್ರೋ ದೇವತಾ ಜಗತಿ ಛಂದಃ ವಿಭೂತಿಗ್ರಹಣೇ ವಿನಿಯೋಗಃ 
      ಮಾನಸ್ತೋಕೇ ತನಯೇ ಮಾನ ಆಯೌ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ಮಾನೋ ವೀರಾನ್ರುದ್ರಭಾಮಿನೋ ವಧೀರ್ಹವಿಷ್ಮಂತಃ ಸದಮಿತ್ವಾ ಹವಾಮಹೇ ||
      ಓಂ ಕಶ್ಯಪಶ್ಯ ತ್ರ್ಯಾಯುಷಂ (ಇತಿ ಲಲಾಟೇ), ಓಂ ಜಮದಗ್ನೇಸ್ತ್ರ್ಯಾಯುಷಂ ( ಇತಿ ಕಂಠೇ),
      ಓಂ ಯದ್ದೇವಾನಾಂ ತ್ರ್ಯಾಯುಷಂ (ಇತಿ ಬಾಹ್ವೋಃ), ಓಂ ತನ್ಮೇ ಅಸ್ತು ತ್ರ್ಯಾಯುಷಂ (ಇತಿ ಹೃದಿ),
      ಓಂ ಶತಾಯುಷಂ ಬಲಾಯುಷಂ (ಇತಿ ಶಿರಸಿ), ಓಂ ಸ್ವಸ್ತಿ ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ | ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ || ಇತಿ ನಮಸ್ಕಾರಂ ಕೃತ್ವಾ |

೧೩)  ಗೋತ್ರಾಭಿವಾದನಂ -
 ..... ತ್ರಿ/ಪಂಚ/ಸಪ್ತ ಋಷಯಾನ್ವಿತ ....ಗೋತ್ರೋದ್ಭವ ಕಾತ್ಯಾಯನಸೂತ್ರೀಯ
      ಶುಕ್ಲಯರ್ವೇದಾಂತರ್ಗತ ಕಣ್ವಶಾಖಾಧ್ಯಾಯೀ ......ಶರ್ಮಾ ಅಹಂ ಭೋ ಅಗ್ನೇ ಅಭಿವಾದಯಾಮಿ,

೧೪)  ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ವೈಶ್ವದೇವ ಕ್ರಿಯಾದಿಷು |
      ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ||
      ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ |
      ಯತ್ಕಿಂಚಿತ್ ಕ್ರಿಯತೇ ಕರ್ಮ ತತ್ಕರ್ಮ ಸಫಲಂ ಕುರು ||

೧೫)  ಅನೇನ ಪ್ರಾತ/ಸಾಯಂ ಕಾಲೇ ಆಚರಿತ ವೈಶ್ವದೇವಾಖ್ಯೇನ ಕರ್ಮಣಾ ಅಗ್ನ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಹರಿಣೀಪತಿ ಪರಶುರಾಮಃ ಪ್ರೀಯತಾಂ |
      ಶ್ರೀಕೃಷ್ಣಾರ್ಪಣಮಸ್ತು.

೧೬)  ಅಚ್ಯುತ, ಅನಂತ, ಗೋವಿಂದ ಅಚ್ಯುತಾನಂತಗೋವಿಂದೇಭ್ಯೋ ನಮೋ ನಮಃ.           
   

 ಸಂಗ್ರಹಕಾರರು   
     ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ. ಹುಬ್ಬಳ್ಳ್.
     ಗೃಂಥ ಋಣ - ಶ್ರೀ ಕಾಣ್ವಾಚಾರ ದರ್ಶನ.
 

Sunday, July 7, 2013

ನಮಸ್ಕಾರ ಎಂದರೆ ಎನು? ಹೇಗೆ ? - Part 2

ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.  ಇಂತಹ ನಮಸ್ಕಾರದಲ್ಲಿ ಪುನಃ ನಾಲ್ಕುವಿಧಗಳಿವೆ. ಅವುಗಳೆಂದರೆ (1) ಭಕ್ತಿಪೂರ್ವಕ ನಮಸ್ಕಾರ (2) ಅಷ್ಟಾಂಗ ನಮಸ್ಕಾರ (3) ಪಂಚಾಂಗ ನಮಸ್ಕಾರ (4) ಅಭಿವಾದನ
ಎಂಬುದಾಗಿ.

 (1) ಭಕ್ತಿಪೂರ್ವಕ ನಮಸ್ಕಾರ :- ಗುರು ಹಿರಿಯರು, ದೇವಸ್ಥಾನ, ಹಸು, ಬ್ರಾಹ್ಮಣ ಮುಂತಾದವರು ಎದುರಾದಾಗ ಅವರಿಗೆ ಭಕ್ತಿಪೂರ್ವಕವಾಗಿ ನಮ್ಮ ಎರಡು ಕೈಗಳನ್ನು ಹೃದಯ ದಲ್ಲಿ ಜೋಡಿಸಿ ನಮಸ್ಕರಿಸಬೇಕೆ ಹೊರತು ಒಂದೇ ಕೈಯಿಂದ ಅಲ್ಲ. ಎಕೆಂದರೆ ಒಂದೇ ಕೈಯಿಂದ ನಮಸ್ಕರಿಸಿದವನಿಗೆ ಎನು ಮಾಡಬೇಕೆಂಬುದನ್ನು ಸ್ಮೃತಿ ಹೀಗೆ ಹೇಳುತ್ತಿದೆ
 ಎಕೇನ ಪಾಣಿನಾ ಯೇ ವೈ ಪ್ರಣಮೇತ್ ದೇವಮಚ್ಯುತಮ್|
 ತಸ್ಯ ದಂಡ ಕರಚ್ಛೇದಃ ಸ್ಮೃತಿಷು ಪ್ರತಿಪಾದಿತಃ||

ಎಂಬುದಾಗಿ. ಅಂದರೆ ಭಗವಂತ ನನ್ನು, ಗುರು-ಹಿರಿಯರನ್ನು ಒಂದೇ ಕೈಯಿಂದ ನಮಸ್ಕರಿಸಿದವನ ಕೈಯನ್ನು ಕತ್ತರಿಸುವುದೇ ವಿಧಿಸಬೇಕಾದ ದಂಡ ಎಂದು ಹೇಳುತ್ತದೆ. ಅಲ್ಲದೇ! ಒಂದೇ ಕೈಯಿಂದ ನಮಸ್ಕರಿಸುವುದು, ವಿಷ್ಣು ವಿಗೆ ಒಂದೇ ಪ್ರದಕ್ಷಿಣೆ ಹಾಕುವುದು ಹಾಗೂ ನಿಗದಿತ ಸಮಯ ಬಿಟ್ಟು, ಅಕಾಲದಲ್ಲಿ ವಿಷ್ಣುವಿನ ದರ್ಶನ ಮಾಡುವುದರಿಂದ ನಾವು ಹಿಂದೆ ಮಾಡಿದ ಪುಣ್ಯವು ನಾಶವಾಗುವುದು.

ಎಕಹಸ್ತಪ್ರಣಾಮಶ್ಚ ಎಕಾ ಚೈವ ಪ್ರದಕ್ಷಿಣಾ |
ಅಕಾಲದರ್ಶನಂ ವಿಷ್ಣೋಃ ಹಂತಿ ಪುಣ್ಯಂ ಪುರಾ ಕೃತಮ್ ||

ಎಂದು ವಿಷ್ಣುಸ್ಮೃತಿಯು ಹೇಳುತ್ತಿದೆ.
 ಆದುದರಿಂದ ನಮ್ಮ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುವುದೇ ಭಕ್ತಿಪೂರ್ವಕ ನಮಸ್ಕಾರ. ಅಲ್ಲದೇ! ಇದು ಒಂದು ಹಿಂದೂಧರ್ಮದ ಶ್ರೇಷ್ಟತೆಯನ್ನು ಸಾರುವ ಸಂಕೇತ. ಎಕೆಂದರೆ ನಮ್ಮ ದೇಹ ಒಂದು ಶಕ್ತಿಯ ಕೇಂದ್ರ. ಇಂತಹ ದೇಹದಲ್ಲಿ ಶಕ್ತಿಯು ಯಾವತ್ತೂ ಮೇಲ್ಮುಖವಾಗಿ ಹರಿಯುತ್ತಿರುತ್ತದೆ, ಬತ್ತಿಗೆ ಹಚ್ಚಿದ ಬೆಂಕಿಯಂತೆ. ಆ ಬತ್ತಿಯನ್ನು ಯಾವ ರೀತಿ ಹಿಡಿದರೂ ಅದರ ತುದಿಯಲ್ಲಿರುವ ಬೆಂಕಿಯು ಮೇಲ್ಮುಖವಾಗಿ ಹರಿಯುವಂತೆ, ನಮ್ಮ ದೇಹದಲ್ಲಿರುವ ಶಕ್ತಿಯು ಮೇಲ್ಮುಖವಾಗಿ ಹರಿಯುತ್ತಿರುತ್ತದೆ. ಅಂತಹ ಶಕ್ತಿಯು ಹೊರಬರುವ ಮಾರ್ಗವೆಂದರೆ ಕೈಗಳ ಬೆರಳು ಮತ್ತು ಕಣ್ಣುಗಳ ಮುಖಾಂತರ. ಆ ಶಕ್ತಿಯನ್ನು ಹೊರಹಾಯಿ ಸದೇ ನಮ್ಮ ದೇಹದಲ್ಲಿಯೇ ಇರಗೊಟ್ಟರೆ ನಮ್ಮಲ್ಲಿರುವ ಜ್ಞಾನವು ಅಭಿವೃದ್ಧಿಯಾಗುತ್ತದೆ. ಆದುದರಿಂದ ಆ ಶಕ್ತಿಯನ್ನು ನಾವು ಎರಡೂ ಕೈ ಜೋಡಿಸಿ ನಮಸ್ಕರಿಸುವುದರ ಮೂಲಕ ನಮ್ಮಲ್ಲಿಯೇ ಇಟ್ಟುಕೊಳ್ಳಬೇಕು. ಅದು ಬಿಟ್ಟು ಆಂಗ್ಲರ ಸಂಪ್ರದಾಯದಂತೆ ನಮಸ್ಕಾರ ಮಾಡಿದರೆ ನಮ್ಮ ದೇಹ ದಲ್ಲಿರುವ ಶಕ್ತಿಯು ನಾವು ನಮಸ್ಕಾರ ಮಾಡಿದವರ ದೇಹಕ್ಕೆ ಹರಿದು, ಅದರಿಂದ ಅವರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ. ಇದನ್ನು ಖ್ಟ್ಡ್ಛಿ  ಏಜಛಟ ಪದ್ಧತಿ ಎನ್ನುತ್ತಾರೆ. ಈ ಚಿಕಿತ್ಸೆಯಲ್ಲಿ ವೈದ್ಯನು ರೋಗಿಯ ಕೆಲವು ಅಂಗಗಳನ್ನು ಮುಟ್ಟಿ ತನ್ನ ಶಕ್ತಿಯನ್ನು ರೋಗಿಯ ದೇಹದೊಳಗೆ ಹರಿಸುವುದರ ಮೂಲಕ ರೋಗವನ್ನು ಗುಣಪಡಿಸು ತ್ತಾನೆ. ಇಂತಹ ಬಲವಾದ ಕಾರಣವಿರುವುದರಿಂದಲೇ ನಮ್ಮ ಪ್ರಾಚೀನರು ಯಾರಾದರೂ ಗುರು-ಹಿರಿಯರು ಎದುರಿಗೆ ಸಿಕ್ಕರೆ ಅವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸುತ್ತಿದ್ದರು. ಇಲ್ಲವೇ ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು. ಈ ಕ್ರಮದಲ್ಲಿ ಇನ್ನೂ ಒಂದು ವಿಶೇಷವಿದೆ, ಎನೆಂದರೆ - ಜ್ಞಾನವೃದ್ಧರು, ವಯೋವೃದ್ಧರು, ತಪಸ್ವಿಗಳು, ಸಾಧಕರಾದವರು ನಮ್ಮ ಹತ್ತಿರಕ್ಕೆ ಬಂದಾಗ ನಮ್ಮ ಪ್ರಾಣಶಕ್ತಿ ಮೇಲಕ್ಕೆ ಹಾರತೊಡಗುತ್ತದೆ. ಅಂತಹ ಸಮಯದಲ್ಲಿ ಬಂದಿರುವ ಸಾಧಕರಿಗೆ ಪಾದ ಮುಟ್ಟಿ ನಮಸ್ಕರಿಸುವುದರಿಂದ ನಮ್ಮ ಪ್ರಾಣಶಕ್ತಿಯನ್ನು ಹಿಂದಕ್ಕೆ ತರಬಹುದಾದ್ದರಿಂದ ನಾವು ಭಕ್ತಿಪೂರ್ವಕವಾಗಿ ಕೈ ಜೋಡಿಸಿ ಇಲ್ಲವೇ ಪಾದ ಮುಟ್ಟಿ ನಮಸ್ಕರಿಸಬೇಕು.

(2) ಅಷ್ಟಾಂಗ ನಮಸ್ಕಾರ :-

ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ |
ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋಡಷ್ಟಾಂಗ ಈರಿತಃ ||

ಎಂದು ಹೇಳಿ ಈ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹದ ಪ್ರಧಾನ ಅವಯವಗಳಾದ ಪಾದ, ಮಂಡಿ, ಭುಜಗಳು, ಕೈ, ಎದೆ ಮತ್ತು ಶಿರಸ್ಸು ಭೂಮಿಯಲ್ಲಿರಬೇಕು. ನಮ್ಮ ಕಣ್ಣು ಭಗವಂತನ ಮೂರ್ತಿಯನ್ನು ನೋಡುತ್ತಿರಬೇಕು. ಮನಸ್ಸು ಭಗವಂತನ ಧ್ಯಾನದಲ್ಲಿರ ಬೇಕು. ನಮ್ಮ ಬಾಯಿ ಭಗವಂತನ ಗುಣಗಾನ ಮಾಡುತ್ತಿರಬೇಕು. ಹೀಗೆ ಅಷ್ಟಾಂಗ ನಮಸ್ಕಾರ ಮಾಡಿದಾಗ ನಮ್ಮನ್ನು ಮತ್ತು ನಮ್ಮೆಲ್ಲ ಇಂದ್ರಿಯಗಳನ್ನು ಭಗವಂತನಿಗೆ ಸಂಪೂರ್ಣವಾಗಿ ಅರ್ಪಿಸಲು ಸಾಧ್ಯ.

(3) ಪಂಚಾಂಗ ನಮಸ್ಕಾರ :- ಸ್ತ್ರೀಯರು ದೇಹದಿಂದ, ಮಾತಿನಿಂದ, ಮನಃ ಪೂರ್ವಕವಾಗಿ, ಬುದ್ಧಿಪೂರ್ವಕವಾಗಿ, ಆತ್ಮಸಮರ್ಪಣ ಪೂರ್ವಕವಾಗಿ ಭಗವಂತನಿಗೆ ಅರ್ಪಿಸುವ ನಮಸ್ಕಾರ ಪಂಚಾಂಗ ನಮಸ್ಕಾರ ಎನಿಸುತ್ತದೆ.

 ಕಾಯೇನ ಮನಸಾ ವಾಚಾ ಬುದ್ಧ್ಯಾತ್ಮಾಭ್ಯಾಂ ತತಃ ಪರಂ |
 ಪಂಚಾಂಗೇನ ಕೃತಂ ಭಕ್ತ್ಯಾ ಪ್ರಣಾಮೋ ಪಂಚಾಂಗ ಈರಿತಃ ||
 

 ಇದು ಹಿಂದೆ ಹೇಳಿದಂತೆ ಸ್ತ್ರೀಯರು ಮಾಡಬೇಕಾದ ನಮಸ್ಕಾರವು.
(4) ಅಭಿವಾದನ :- ಶಿಷ್ಯನು ಗುರುವಿನ ಪಾದವನ್ನು ಮುಟ್ಟಿ ತನ್ನ ಗೋತ್ರವನ್ನು ಹೇಳಿ ಕೊಂಡು ಮಾಡುವ ನಮಸ್ಕಾರವೇ ಅಭಿವಾದನ. ಈ ನಮಸ್ಕಾರವನ್ನು ಮಾಡುವಾಗ ನಮ್ಮ ಎಡ-ಬಲ ಕೈಗಳಿಂದ ಕ್ರಮವಾಗಿ ಎಡ-ಬಲ ಕಿವಿಗಳನ್ನು ಮುಟ್ಟಿ ಸ್ವಗೋತ್ರವನ್ನು ಹೇಳಿ ಗುರುಗಳ ಪಾದವನ್ನು ಮುಟ್ಟುವಾಗ ಬಲಕೈಯಿಂದ ಬಲಪಾದವನ್ನು, ಎಡಕೈಯಿಂದ ಎಡಪಾದವನ್ನು ಮುಟ್ಟಿ ನಮಸ್ಕರಿಸಬೇಕು.  ಹೀಗೆ ಗುರುಗಳು ಎದುರಾದಾಗ ಅವಶ್ಯವಾಗಿ ಅಭಿವಾದನವನ್ನು ಮಾಡಲೇಬೇಕು. ಒಂದು ವೇಳೆ ಗುರುಗಳು, ದೇವಸ್ಥಾನ, ಬ್ರಾಹ್ಮಣ ಇವರನ್ನು ನೋಡಿಯೂ ನಮಸ್ಕರಿಸ ದವನು ಚಂದ್ರ-ಸೂರ್ಯರಿರುವ ತನಕ `ಕಾಲಸೂತ್ರ` ಎನ್ನುವ ನರಕವನ್ನು ಹೊಂದು ತ್ತಾನೆ ಎನ್ನುತ್ತದೆ ಒಂದು ಪ್ರಮಾಣ.


 ಆದುದರಿಂದ ಬ್ರಾಹ್ಮಣನೇ ಮೊದಲಾದ ಶ್ರೇಷ್ಠರು ಎದುರಾದಾಗ ಅವಶ್ಯವಾಗಿ ನಮಸ್ಕರಿಸಲೇಬೇಕು. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣನೇ ಮೊದಲಾದ ಗುರು-ಹಿರಿಯರಿಗೆ ನಮಸ್ಕಾರ ಮಾಡಬಾರದು. ಇದು ಯಾವ ಸಂದರ್ಭದಲ್ಲಿ ಎಂದರೆ

 ವಿಪ್ರಂ ಸ್ನಾನಂ ಪ್ರಕುರ್ವಂತಂ ಸಮಿತ್ಕುಶಕರಂ ತಥಾ |
 ಉದಪಾತ್ರಂಧರಂ ಚೈವ ಭುಂಜಂತಂ ನಾಭಿವಾದಯೇತ್ || 
 ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಮದಗರ್ವಿತಂ |
 ಕ್ರೋಧವಂತಂ ವಿಜಾನೀಯಾತ್ ನಮಸ್ಕಾರಂ ಚ ವರ್ಜಯೇತ್ ||

 ಅಂದರೆ ಬ್ರಾಹ್ಮಣನು ಸ್ನಾನ ಮಾಡುತ್ತಿರುವಾಗ, ಶ್ರಾದ್ಧ ಮಾಡುತ್ತಿರುವಾಗ, ನೀರನ್ನು ಹೊತ್ತು ತರು ತ್ತಿರುವಾಗ, ಊಟ ಮಾಡುತ್ತಿರುವಾಗ, ದೂರದಲ್ಲಿರುವಾಗ, ನೀರಿನ ಮಧ್ಯದಲ್ಲಿರುವಾಗ, ಅವಸರದ ಕಾರ್ಯದಲ್ಲಿರುವಾಗ, ಕೋಪಾವಿಷ್ಟನಾಗಿರುವಾಗ ನಮಸ್ಕರಿಸಬಾರದು. ಅದರ ಲ್ಲೂ ಕೋಪಾವಿಷ್ಟನಾಗಿರುವಾಗ ಮಾತ್ರ ಅವಶ್ಯವಾಗಿ ನಮಸ್ಕರಿಸಲೇಬಾರದು. ಎಕೆಂದರೆ ಆಗ ಅನುಗ್ರಹಕ್ಕಿಂತ ಅವಗ್ರಹದ ಫಲವೇ ದೊರಕುವ ಸಾಧ್ಯತೆಯಿರುತ್ತದೆ. ಆದುದರಿಂದ ಇಂತಹ ಸಂದರ್ಭದಲ್ಲಿ ಯಾರೇ ಇರಲಿ ನಮಸ್ಕರಿಸಬಾರದು. ಇಷ್ಟೇ ಅಲ್ಲದೇ!

 ಸಭಾಯಾಂ ಯಜ್ಞಶಾಲಾಯಾಂ ದೇವಾಯತನೇಷು ಚ |
 ಪ್ರತ್ಯೇಕಂ ತು ನಮಸ್ಕಾರೇ ಹಂತಿ ಪುಣ್ಯಂ ಪುರಾಕೃತಂ ||

 ಸಭೆಯಲ್ಲಿ, ಯಜ್ಞ ಶಾಲೆಯಲ್ಲಿ, ದೇವಾಲಯಗಳಲ್ಲಿ ಪ್ರತ್ಯೇಕವಾಗಿ ನಮ್ಮ ಗುರುಗಳಿಗೆ ನಮಸ್ಕಾರ ಮಾಡ ಬಾರದು. ಎಕೆಂದರೆ ಸಭೆಯಲ್ಲಿ ಅನೇಕ ಪಂಡಿತರು, ಜ್ಞಾನಿಗಳು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಧ್ಯೆಯಿರುವ ನಮ್ಮ ಗುರುಗಳಿಗೆ ಮಾತ್ರ ನಮಸ್ಕರಿಸಿದರೆ ಉಳಿದ ಗುರುಗಳನ್ನು, ಜ್ಞಾನಿಗಳನ್ನು ತಿರಸ್ಕರಿಸಿದಂತಾಗುತ್ತದೆ. ಆಗ ನಮ್ಮ ಗುರುಗಳಿಗೆ ನಮಸ್ಕರಿಸುವ ರಭಸದಲ್ಲಿ ನಾವು ಗಳಿಸುವ ಪುಣ್ಯ ಸಂಪಾದನೆಗಿಂತ ಪಾಪದ ಸಂಗ್ರಹವೇ ಹೆಚ್ಚಾದೀತು. ಆದುದರಿಂದ ಸಭಾ ಮಧ್ಯದಲ್ಲಿರುವ ಗುರುಗಳಿಗೆ ಆಗಲೇ ನಮಸ್ಕರಿಸದೇ ಸಭೆ ಮುಗಿದ ನಂತರ ಏಕಾಂತದಲ್ಲಿ ನಮಸ್ಕರಿಸಬೇಕು. ಇದರಿಂದ ಯಾವುದೇ ರೀತಿಯ ಪ್ರಮಾದಕ್ಕೆ ಅವಕಾಶವಿಲ್ಲ.

ನಮಸ್ಕರಿಸಿದಾಗ ಆಶೀರ್ವಾದ ಮಾಡಲೇಬೇಕು
 ಶಿಷ್ಯನು ಗುರುಗಳಿಗೆ ನಮಸ್ಕರಿಸಿದಾಗ ಅವಶ್ಯವಾಗಿ ಅವನ ಯೋಗ್ಯತೆಗೆ ತಕ್ಕಂತೆ ಆಶೀವರ್ಾದವನ್ನು ಮಾಡಲೇಬೇಕು. ಒಂದು ವೇಳೆ ಆಶೀರ್ವಾದವನ್ನು ಮಾಡದಿದ್ದರೆ ಯಾರು ನಮಸ್ಕಾರವನ್ನು ಮಾಡಿರುತ್ತಾರೆಯೋ ಅವರ ಪಾಪದ ಫಲಕ್ಕೆ ನಮಸ್ಕರಿಸಿ ಕೊಂಡ ವ್ಯಕ್ತಿಯು ಪಾಲುಗಾರನಾಗುತ್ತಾನೆ. ಮತ್ತು ಆಶೀರ್ವಾದ ಮಾಡದವನ ಆಯುಷ್ಯ ನಮಸ್ಕರಿಸಿದವನಿಗೆ ಸೇರುತ್ತದೆ. ಆದುದರಿಂದ ಆಶೀರ್ವಾದ ಮಾಡಲೇಬೇಕು. ಅಷ್ಟೇ ಅಲ್ಲ! ನಮಸ್ಕಾರ ಮಾಡುವುದಕ್ಕಿಂತ ಮೊದಲೇ ಆಶೀರ್ವಾದವನ್ನು ಮಾಡಲು ಪ್ರಾರಂಭಿ ಸಿರಬೇಕು. ಇದರಿಂದ ಉತ್ತಮ ಫಲವಿದೆ. ಈ ರೀತಿಯಾಗಿ ಉತ್ತಮ ಫಲ ಪಡೆದವರಲ್ಲಿ ಸಾವಿತ್ರಿ, ಮಾರ್ಕಂಡೇಯ ಋಷಿ ಮೊದಲಾದವರು ಸೇರಿದ್ದಾರೆ.

ನಮಸ್ಕಾರದ ಫಲ:

 ನಾವು ಹಿರಿಯರಿಗೆ ನಮಸ್ಕರಿಸಿದರೆ ನಮಗೆ ಧೀರ್ಘಾಯುಷ್ಯ, ವಿದ್ಯೆ, ಕೀರ್ತಿ, ಶಾರೀರಿಕ ಬಲಗಳು ಪ್ರಾಪ್ತವಾಗುತ್ತವೆ ಎಂದು ಈ ಶ್ಲೋಕ ಈ ರೀತಿ ಹೇಳುತ್ತಿದೆ.

 ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |
 ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್ ||

  ಎಂಬುದಾಗಿ. ಇಂತಹ ನಮಸ್ಕಾರಕ್ಕೆ ಧರ್ಮರಾಜನು ಮಾದರಿಯಾಗಿದ್ದ. ಮಹಾಭಾರತ ಯುದ್ಧ ಪ್ರಾರಂಭವಾಗುವುದಕ್ಕಿಂತ ಮುಂಚೆ ಪಿತಾಮಹರಾದ ಭೀಷ್ಮಾಚಾರ್ಯ, ದ್ರೋಣ, ಕೃಪ, ಶಲ್ಯ ಮೊದಲಾದವರಿಗೆ ನಮಸ್ಕರಿಸಿ `ಆಯುಷ್ಮಾನ್ ಭವ` `ವಿಜಯೀ ಭವ` ಎಂದು ಆಶೀರ್ವಾದ ಪಡೆದ. ಯುದ್ಧದಲ್ಲಿ ವಿಜಯಿಯೂ ಆದ ಘಟನೆ ನಮಗೆಲ್ಲರಿಗೂ ಗೊತ್ತೇ ಇದೆ. ಇಂತಹ ಉತ್ಕೃಷ್ಟ ಫಲವಿರುವುದರಿಂದಲೇ ಅವಶ್ಯವಾಗಿ ಗುರು-ಹಿರಿಯರು ಕಂಡಾಗ ಅವಶ್ಯವಾಗಿ ನಮಸ್ಕರಿಸಲೇಬೇಕು.
ಭಗವಂತನಿಗೆ ನಮಸ್ಕರಿಸುವ ಕ್ರಮ.   ವರಾಹಪುರಾಣ ನಾವು ಭಗವಂತನಿಗೆ ಹೇಗೆ ನಮಸ್ಕರಿಸಬೇಕೆಂಬುದನ್ನು ಹೀಗೆ ಹೇಳುತ್ತದೆ.  ಭಗವಂತನಿಗೆ ನಮಸ್ಕರಿಸಬೇಕಾದಾಗ ಮೊದಲು ಎಡಗಾಲಿನ ಮಂಡಿಯನ್ನು ಊರ ಬೇಕು. ಆನಂತರ ಎರಡೂ ಕೈಗಳನ್ನು ನೆಲದ ಮೇಲಿಟ್ಟು ಬಲಗಾಲಿನ ಮಂಡಿಯನ್ನು ಊರಬೇಕು. ಆನಂತರ ಹಣೆಯನ್ನು ಭೂಮಿಗೆ ತಾಗಿಸಿ ತಲೆ ಮೇಲುಗಡೆ ಕೈಗಳನ್ನು ಗುಣಾ ಕಾರದ ಚಿಹ್ನೆಯಂತೆ ಜೋಡಿಸಿ ಅಂದರೆ ನಮ್ಮ ಬಲ ಕೈ ದೇವರ ಬಲಪಾದವನ್ನು, ಎಡ ಕೈ ದೇವರ ಎಡಪಾದವನ್ನು ತಾಕುತ್ತಿರುವಂತೆ ಮಾಡಿ ಮಸ್ಕರಿಸಬೇಕು.

 ಈ ರೀತಿ ಭಕ್ತನು ಭಗವಂತನಿಗೆ ದಂಡ ಪ್ರಣಾಮವನ್ನು ಮಾಡಿದರೆ ಅವನೊಂದಿಗೆ ಪಾಪಗಳು ಮೇಲೆಳುವುದಿಲ್ಲ. ಆದುದರಿಂದ ಪುರುಷರು ಸಾಷ್ಟಾಂಗ ಕ್ರಮದಿಂದ, ಸ್ತ್ರೀ ಯರು ಪಂಚಾಂಗಕ್ರಮದಿಂದ ಈ ರೀತಿಯಾಗಿ ನಮಸ್ಕರಿಸಬೇಕು. ಅಷ್ಟೇ ಅಲ್ಲದೇ! ಶನಿ ದೇವರ ದೇವಸ್ಥಾನಕ್ಕೆ ಹೋದಾಗ ಪುರುಷರು ಸಾಷ್ಟಾಂಗ ಕ್ರಮದಿಂದ, ಸ್ತ್ರೀಯರು ಪಂಚಾಂಗಕ್ರಮದಿಂದ ನಮಸ್ಕರಿಸಬಾರದು. ಅಲ್ಲಿ ಮಾತ್ರ ನಿಂತುಕೊಂಡೇ ನಮಸ್ಕರಿಸ ಬೇಕು. ಏಕೆಂದರೆ ಶನಿದೇವನು ವಕ್ರದೃಷ್ಟಿಯುಳ್ಳವನಾದ್ದರಿಂದ ಅವನ ದೃಷ್ಟಿಯು ಯಾವಾಗಲೂ ನೇರವಾಗಿ ಇರದೇ ಭೂಮಿಯ ಕಡೆಗೆ ಇರುತ್ತದೆ. ನಾವು ಒಂದು ವೇಳೆ ಸಾಷ್ಟಾಂಗ, ಪಂಚಾಂಗಕ್ರಮದಿಂದ ನಮಸ್ಕರಿಸಿದರೆ ಶನಿದೇವನ ವಕ್ರದೃಷ್ಟಿ ನಮ್ಮ ಮೇಲೆ ಬೀಳುವುದು. ಶನಿದೇವನ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅಲ್ಲಿ ನಿಂತುಕೊಂಡೇ ನಮಸ್ಕರಿಸಬೇಕು.

ನಮಸ್ಕಾರ ಎಲ್ಲಿ, ಹೇಗೆ ಮಾಡಬೇಕು

 ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು. ಏಕೆಂದರೆ
  ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ |
  ಜಪಹೋಮನಮಸ್ಕಾರಾನ್ ನ ಕುರ್ಯಾತ್ ಕೇಶವಾಲಯೇ ||

 ಅಂದರೆ ವಿಷ್ಣುವಿನ ದೇವಾಲಯಗಳಲ್ಲಿ ದೇವರ ಎದುರುಗಡೆ, ಹಿಂಭಾಗದಲ್ಲಿ, ದೇವರ ಎಡಭಾಗದಲ್ಲಿ, ದೇವರ ಸಮೀಪದಲ್ಲಿ, ಗರ್ಭಗೃಹದಲ್ಲಿ ನಮಸ್ಕಾರ, ಜಪ, ಹೋಮಗಳನ್ನು ಮಾಡ ಬಾರದು. ಏಕೆಂದರೆ ವಿಷ್ಣು, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿ ದಂತಾಗುತ್ತದೆ. ಇದರಿಂದ ಪಾಪದ ಲೇಪವಾಗುವುದು. ಏಕೆಂದರೆ `ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ.` ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. `ಅಗ್ರೇ ಮೃತ್ಯುಮವಾಪ್ನೋತಿ` ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು.

 ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆ ಗಳಿಗೆ ಪಾದ ತೋರಿಸಿದಂತಾಗುವುದರಿಂದ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದರಲ್ಲಿ ಅಪಜಯ (ಸೋಲು) ವುಂಟಾಗುವುದು. ಆದುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು.
 ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ `ವಾಮಭಾಗೇ ಭವೇನ್ನಾಶಃ` ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು. ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಒಂದು ವೇಳೆ ನಾವು ದೇವರ ಎಡಭಾಗದಲ್ಲಿ ನಮಸ್ಕರಿಸುವುದರಿಂದ ಭಗವಂತನ ಆಯುಧ ಗಳಿಂದ ನಮ್ಮ ಶರೀರದ ನಾಶವಾಗುವ ಸಂಭವವಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು ಎಂದು ಹೇಳಿ ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸ ಬೇಕೆಂದು ಹೇಳುತ್ತಿದ್ದಾರೆ. `ದಕ್ಷಿಣೇ ಸರ್ವಕಾಮದಃ` ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು.

To be continued...

Tuesday, June 25, 2013

ಉಡುಪಿ ಯಾತ್ರೆ-೩

ಉಡುಪಿ ಯಾತ್ರೆ-೩

ನೀವುಆಜ್ನೆ ಕೂಟ್ಟರೆ ಇಲ್ಲೇ ಎಲ್ಲರಿಗೂ ಮುದ್ರಾಕೂಡುತ್ತೇವೆ ಇಲ್ಲೇ ಹಾಕಲು ಆತಂಕವಾದಲ್ಲಿ ಇಲ್ಲೇ ಸಮೀಪದ ಹಳ್ಳಿಗೆ ಹೋಗಿ ಎಲ್ಲರಿಗೂ ಮುದ್ರಾ ಕೂಟ್ಟು ಪೂಜಾ ತೀರ್ಥ ಪ್ರಸಾದ ಮುಗಿಸಿಕೂಂಡು ಸಾಯಂಕಾಲಕ್ಕೆ ಪರತ ಬರುತ್ತೇವೆ ಅಂತಾ ವಿಚಾರ ಮಾಡಿಕೂಂಡು ಬರಲು ಸನ್ನಿಧಾನಕ್ಕೆ ಕಳಿಸಿರುತ್ತಾರೆ. ತಾವು ಆಜ್ನಾಮಾಡಿದ ಪ್ರಕಾರ ಅಲ್ಲಿ ಅರಿಕೆಮಾಡಿಕೂಳ್ಳುತ್ತೇವೆ. ಅದರಂತೆ ಮುಂದಿನ ಕಾರ್ಯ ಕೈಕೂಳ್ಳಲಾಗುವದು. ಎಂದು ಸದರವಕೀಲರು ವಗೈರೆ ಜನರು ಬಿನ್ನಹ ಮಾಡಿಕೂಳ್ಳಲು ಇವರ ಪ್ರಾರ್ಥನೆಗೆ ಕೃಪಾಶಿರ್ವಾದದಿಂದಾ ನಾನು ಪರ್ಯಾಯ ಪೀಠದಲ್ಲಿ ಇರುವವರೆಗೂ ನಮ್ಮ ಕಣ್ವ ಶಾಖೆಯ ಪೀಠದ ಶ್ರೀಗಳವರಿಗೆ ಪೂರ್ಣ ಅಧಿಕಾರವಿದೆ. ಇನ್ನುಮೇಲೆ ಯಾವುದೇ ಕಾರ್ಯಮಾಡಲು ನಮ್ಮ ಆಜ್ನೆಯ ಅವಶ್ಯವೇ ಇಲ್ಲಾ ಅಂತಾ ತಮ್ಮಕಡೆಗೆ ಬಂದಶಿಷ್ಯರ ಕಡಿಂದಾ ಈಪ್ರಕಾರ ತಮ್ಮ ಸೂಚನೆಯನ್ನು ಮಾಡಿದರು. ಇದೇನು ಸಣ್ಣವಿಷಯವಲ್ಲ. ಆದರೂ ಪರಮಾತ್ಮನ ಸಂಕಲ್ಪಕ್ಕೆ ಎಂತಹ ಮಹತ್ವದ ವಿಷಯವಾದರೂ ಸರಳವಾಗಿ ಹೂಗುತ್ತದೆ. ಶ್ರೀಗಳ ನಿರೂಪ ಬಂದಮೇಲೆ ಎಲ್ಲ ಶಿಷ್ಯರಿಗೂ ಇಲ್ಲಿ ಮುದ್ರಾ ಹಾಕುವದಾಗಿ ತಿಳಿಸಲು ಎಲ್ಲಕಡೆಗೂ ಮುದ್ರಾದ ಗೂಂದಲವೇ ಗೂಂದಲ. ಅಲ್ಲೇ ಕನಕನ ಖಿಂಡಿಯ ಹತ್ತಿರ ಎಡಭಾಗದಲ್ಲಿ ವಿಠಲಕೃಷ್ಣ ಮಂಟಪದ ಮುಂದೆ ಮುದ್ರಾ ಪ್ರಾರಂಬವಾಗಿ ಅಜಮಾಸ ೭-೮ನೂರು ಮಂದಿಗೆ ಮುದ್ರಾ ಕೂಡಲಾಯಿತು. ಇನ್ನು ಶಿರೂರ ಮಠದ ಶ್ರೀಗಳ ದರ್ಶನ ಕಾರ್ಯ ಒಂದು ಉಳಿಯಿತು. ಇದನ್ನೂಂದು ಕಾರ್ಯ ಮುಗಿಸಬೇಕೆಂಬ ವಿಚಾರ ನಡೆಯಿತು. ಇದರ ಬಗ್ಗೆ ವಿಚಾರ ಮಾಡಿಕೂಂಡು ಬರುವದಕ್ಕೂಸ್ಕರ ವೇ|| ಗೋಪಾಲಾಚಾರ್ಯ ಕನಕಗಿರಿ ಮತ್ತು ಪಟ್ವಾಲ ಇವರನ್ನು ಕಣ್ವ ಮಠದ ಶ್ರೀಗಳು ತಮ್ಮ ದರ್ಶನಕ್ಕೆ ಬರುತ್ತಾರೆ ಎಂದು ತಿಳಿಸಲು ಶಿರೂರ ಮಠದ ಶ್ರೀಗಳವರಕಡೆಗೆ ಕಳಿಸಲಾಯಿತು. ಸದರಿಯವರು ಶಿರೂರ ಮಠಕ್ಕೆ ಹೋಗಿ ಶ್ರೀಗಳವರಿಗೆ ಭೇಟಿಯಾಗಿ ಶ್ರೀಕಣ್ವ ಮಠದ ಶ್ರೀಗಳವರು ತಮ್ಮ ದರ್ಶನಕ್ಕೆ ಬರುತ್ತೇವೆಂದು ತಿಳಿಸಲು ನಮ್ಮನ್ನು ಕಳಿಸಿದ್ದಾರೆ. ಆ ಪ್ರಕಾರ ನಾವು ಸನ್ನಿಧಾನದಲ್ಲಿ ಅರಿಕೆ ಮಾಡಿಕೂಂಡಿದ್ದೇವೆ. ಮಹಾದಾಜ್ನೆ ಪ್ರಕಾರ ನಡೆದುಕೂಳ್ಳುತ್ತೇವೆ. ಅಂತಾ ತಿಳೀಸಲಾಗಿ ಅದರಗೋಸ್ಕರ, ಶ್ರೀಗಳವರು ಈಗ ಕಣ್ವಮಠದ ಶ್ರೀಗಳವರು ಅಥಿತಿ ಆಗಿ ಬಂದಿದ್ದಾರೆ. ಅವರನ್ನು ಸ್ವಾಗತ ಪೂರ್ವಕವಾಗಿ ಬರಮಾಡಿಕೂಳ್ಳೂವವರಿದ್ದೇವೆ.
ಸಂಜೆ ೦೪-೦೦ಘಂಟೆಗೆ ನಮ್ಮ ಪರಿವಾರದವರನ್ನು ಶ್ರೀಗಾಲನ್ನು ಆಮಂತ್ರಿಸಿಕೂಂಡು ಬರಲು ಕಳಿಸುತ್ತೆವೆ. ಆಗ್ಗೆ ತಾವೆಲ್ಲರೂ ಕೂಡಿಕೂಂಡು ಬರುವದಾಗಿ ತಿಳಿಸಿದರು. ಅದೇ ಪ್ರಕಾರ ಮುಂದಿನ ಸಿದ್ದತೆ ಮಾಡಲಾಯಿತು. ಇಷ್ಟೆಲ್ಲಾಕಾರ್ಯ ಮುಗಿಯುವದರೂಳಗಾಗಿ ಮದ್ಯಾನ್ಹವಾದದ್ದರಿಂದಾ ಸ್ನಾನ,ಪೂಜಾದಿ ಎಲ್ಲ ಕಾರ್ಯಗಳನ್ನು ಮುಗಿಸಿ ಶ್ರೀಪರ್ಯಾಯ ಪೀಠಾಲಂಕ್ರತ ಶ್ರೀಗಳಿಂದಾ ಕರೆ ಬರಲು ಶ್ರೀಕೃಷ್ಣದೇವರ ಸನ್ನಿಧಾನಕ್ಕೆ ಹೋಗಿ ನೇವೈದ್ಯ ಮಂಗಳಾರತಿ ಮುಗಿಸಿಕೂಂಡು ಎಲ್ಲಶಿಷ್ಯರಿಂದಾ ಚೌಕಿಗೆ ಹೋಗಿ ಎಲ್ಲ ಶ್ರೀಗಳ ಸಹಪಂಕ್ತಿಯಲ್ಲಿ ಭೋಜನ ಮುಗಿಸಿಕೂಂಡು ಬಂದು ನಮ್ಮ ವಾಸಸ್ಥಾನದಲ್ಲಿ ವಿಶ್ರಾಂತಿ ತೆಗೆದುಕೂಳ್ಳಲಾಯಿತು. ಮೂದಲೇ ತಿಳೀಸಿದ ಪ್ರಕಾರ ೦೪-೦೦ಘಂಟೆಗೆ ಶಿರೂರ ಮಠದ ಶ್ರೀಗಳವರು ತಮ್ಮ ದಿವಾನ ಮತ್ತು ಪರಿವಾರದೂಂದಿಗೆ ನಮ್ಮನ್ನುಕರೆಯಬಂದರು. ಸದರಿಯವರ ಸಂಗಡ ನಮ್ಮ ಶಿಷ್ಯ ಸಮೋಹದೂಡನೆ ಶಿರೂರ ಮಠಕ್ಕೆ ಹೋಗಲಾಯಿತು. ಅಲ್ಲಿ ಸ್ವಾಗತ ಸಮಾರಂಭ ಮುಗಿದಮೇಲೆ ಶಿರೂರ ಶ್ರೀಗಳವರ ಸನ್ನಿಹಿತವಾಗಿ ಸಿದ್ದಮಾಡಲ್ಪಟ್ಟ ಪೀಠಾರೋಹಣ ಮಾಡಲಾಯಿತು. ಆಮೇಲೆ ಶಿರೂರ ಶ್ರೀಗಳು ತಮ್ಮಶಿಷ್ಯರದ್ವಾರಾ ನಮಗೆ ಫಲಪುಷ್ಪತಾ ಮತ್ತು ಪೀತಾಂಬರ, ರೂ೫೧-೦೦ ಗಳು ಕಾಣಿಕೆಯಾಗಿ ಕೂಟ್ಟರು. ಅವುಗಳನ್ನು ಸ್ವೀಕರಿಸಲಾಯಿತು. ನಮ್ಮ ಸಿಷ್ಯ ವೇ|| ಶಿನಪ್ಪಯ್ಯ ದೇವರು ದ್ವಾರಾ ಫಲ ಪುಷ್ಪ ಅಕ್ಷತಾ ರೂ೧೦೧-೦೦ ಗಳನ್ನು ಕಾಣಿಕೆಯಾಗಿ ಕೂಡಲಾಯಿತು. ಮತ್ತು ಸ್ವಲ್ಪ ಮಟ್ಟಿಗೆ ಮಠದ ವಿಷಯವನ್ನು ಪರಿಚಯ ಮಾಡಿಕೂಡಲಾಯಿತು. ನಿಮ್ಮ ಪೀಠಸ್ಥರಾದ ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರಿಂದಾ ನಮ್ಮ ಮೂಲ ಪಿಠಸ್ಥರಾದ ಶ್ರೀ ಮನ್ ಮಾಧವತೀರ್ಥರಿಗೆ ಆಶ್ರಮ ಕೂಟ್ಟು ಮಠ ಸ್ಥಾಪನಮಾಡಿಸಿರುತ್ತಾರೆ. ಹಿಂದೆ ಶ್ರೀ ಮಾಧವತೀರ್ಥರು ಬರೆದುಕೂಟ್ಟ ಶರ್ತುಗಳು ಏನು ಇರುವವೂ ಏನು ಏಂದು ಅವುಗಳನ್ನು ನಮಗೆ ಸರಿಪಡಿಸಲು ಸಾದ್ಯವೋ, ಅಸಾಧ್ಯವೋ ಏಂಬಭಯದಿಂದಾ ಇಲ್ಲಿಯವರೆಗೂ ನಮ್ಮ ಪೀಠದ ಯಾವ ಶ್ರೀಗಳವರು ಇಲ್ಲಿಗೆ ಬಂದಿರುವದಿಲ್ಲಾ. ಈಗಮಾತ್ರ ನಾವು ಶ್ರೀವಿಠಲಕೃಷ್ಣನ ಮೂಲ ರಜತಪೀಠವನ್ನು, ಮೂಲಸ್ಥಾನದ್ಲ್ಲಿ ಇರುವ ಶ್ರೀ ಕೃಷ್ಣನ ದರ್ಶನ ಮತ್ತು ನಮ್ಮ ಪೀಠವನ್ನುಸ್ತಾಪಿಸಲು ಆಧಾರಸ್ಥಂಬವಾದ ನಮಗೆ ಗುರುಪೀಠವಾದ ನಿಮ್ಮಪೀಠವನ್ನು ಅವಲೋಕನ ಮಾಡಲು ಶ್ರೀಕೃಷ್ಣನ ಪ್ರೇರಣೆಯಿಂದಾ ಅತೀ ಆತುರರಾದೆವು. ಇಲ್ಲಿಗೆ ಈಗ ೨೦೦ವರ್ಷಗಳ ಹಿಂದೆ ರಜತಪೀಠ ಬಿಟ್ಟು ಕಣ್ವಪೀಠಕ್ಕೆ ಬಂದ ಶ್ರೀ ಹರಿಗೂ ತನ್ನ ಪೀಠಕ್ಕೆ ಹೋಗಬೇಕೆಂಬ ಆತುರ.
ಆದರೆ ಭಕ್ತಾಭಿಮಾನಿಯಾದ ಶ್ರೀಹರಿಯು ಭಕ್ತರಬಿಟ್ಟು ಹೋಗಲು ಸಾಧ್ಯವೇಇಲ್ಲವೆಂಬ ಚರ್ಚಯಗೋಸ್ಕರವಾಗಿ ಸ್ವಲ್ಪವಿಷಯಗಳನ್ನು ಬೆಳೆಸಬಯಸುವೆವು. ಈಗ ನಮ್ಮದೇ ಒಂದು ವಿಷಯ ನಾವು ವಿಜಾಪೂರ ಜಿಲ್ಲೆಯ ಬಾಗೆವಾಡಿತಾಲ್ಲೂಕದ ಬಳೂತಿ ಎಂಬ ಗ್ರಾಮದ ಜೋಯ್ಸರ ಮನೆಯಲ್ಲಿ ಹಿಟ್ಟಿದವನು ಕಣ್ವಪೀಠದ ಅತೀ ಅಪರಿಚಿತನು. ಸುಖ ದುಖ:ದ ತೋಳಲಾಟದಲ್ಲಿ ಅಜ್ನಾಂಧಕಾರದಲ್ಲಿ ಬಿದ್ದು ಯಾವಮಾರ್ಗ ತೋಚದಂಥಾ ಅಧಮನು. ಪ್ರಚಾರಗಳಿಗೆ ಉಪಯುಕ್ತವಾದಂತಾ ಒಂದು ಕಿಂಚಿತ್ ಶಕ್ತಿಯು ನನ್ನಲ್ಲಿರುವದಿಲ್ಲಾ. ಇಂತಹ ಸ್ತಿತಿಯಲ್ಲಿ ಕರುಣಾಸಾಗರನಾದ ಶ್ರೀ ಹರಿಯು ಕಣ್ವ ಮಠದ ಶಿಷ್ಯಂತರ್ಗತನಾಗಿ ನನ್ನನ್ನು ಹುಡುಕುಬಂದ ತನ್ನ ಸೇವೆಗೋಸ್ಕರ ಎಳೆತಂದ ಶ್ರೀಹರಿಯುನಮ್ಮನ್ನು ಬಿಟ್ಟು ಉಡುಪಿಗೆ ಹೋಗಲು ಸಾಧ್ಯವೇ. ಎಂದಿಗೂ ಆಗಲಾರದು, ಶ್ರೀಹರಿಯು ಹೇಗಾದರೂ ಭಕ್ತರಬಿಟ್ಟು ಅಗಲಲಾರಾ. ನಾವು ಅಪರಿಚಿತರಾದ್ದರಿಂದಾ ಯಾವ ಕಾರ್ಯವನ್ನು ಯಾವ ಶಿಷ್ಯರಿಗೆ ವಹಿಸಬೆಕೆಂಬುದರ ವಿಷಯದಲ್ಲಿ ನಮ್ಮ ಬುದ್ದಿಯು ಕುಂಠಿತವಾದದ್ದು ಸಹಜವದೆ. ಅದಕ್ಕೂಸ್ಕರವಾಗಿ ಶ್ರೀಹರಿಯು ಎಲ್ಲಭಾರವನ್ನು ತಾನೇ ಸಹಿಸಬೇಕಾಯಿತು. ಏಲ್ಲಶಿಷ್ಯರಿಗೆ ಯಾವಯಾವ ಪ್ರೇರಣೆ ಮಾಡಬೇಕು ಮಾಡಿ ಆ ಪ್ರೇರಣೆಯ ಪ್ರಕಾರ ಅವರು ಮಾಡುವ ಕಾರ್ಯಗಳಿಗೆ ಅನಕೂಲ ಮಾಡಿಕೂಟ್ಟು ಎಲ್ಲರನ್ನು ತನ್ನ ಪೀಠಕ್ಕೆ ಕರೆದುಕೂಂಡು ಬಂದನು. ಇರಲಿ ನಾವು ಸ್ವಲ್ಪದರಲ್ಲಿಯೇ ನಮ್ಮ ಮಠದ ವಿಷಯವನ್ನು ತಿಳಿಸಲಾಯಿತು. ಎಲ್ಲ ವಿಷಯಗಳಳನ್ನು ತಿಳಿದುಕೂಂಡ ಮೇಲೆ ಒಳ್ಳೆ ಹರ್ಷೂದ್ಗಾರಗಳಿಂದಾ ಶಿರೂರ ಮಠದ ಶ್ರೀಗಳು ನುಡಿದ ಎರಡು ಮಾತುಗಳು ಹಿಂದಿನ ವಿಷಯ ಹಿಂದೆ ಆಯಿತು ಮುಂದೆ ಆ ವಿಷಯಗಳನ್ನು ಎತ್ತುವಕಾರಣವಿಲ್ಲಾ. ನಮ್ಮಪೀಠದಿಂದಾ ಕಣ್ವಪೀಠ ಸ್ತಾಪಿತವಾಗಿದೆ ಎಂಬಗೌರವವೇ ಸಾಕು. ಹೆಚ್ಚಿನದೇನೂ ಬೇಡಾ. ಇನ್ನುಮೇಲೆ ಎಲ್ಲಪೀಠಗಳೂ ಒಕ್ಕಟ್ಟಾಗಿನಡೆದರೆ ಎಲ್ಲಾ ಕಾರ್ಯಗಳು ಅನಕೂಲವಾಗಿ ಮಠಗಳ ಗೌರವವು ಉಳಿಯುತ್ತವೆ. ಸಮಾಜ ಸುಧಾರಣೆಯಗೂಸ್ಕರ ಹೆಚ್ಚು ಪ್ರಯತ್ನ ಮಾಡಲುಸಾದ್ಯ ವಾಗುತ್ತದೆ. ಇನ್ನು ಮೇಲೆ ನೀವುಯಾವ ಸಂಕೂಚ ತಕ್ಕೂಳ್ಳುವ ಕಾರಣವಿಲ್ಲಾ. ನೀವು ಇನ್ನು ಮೇಲೆ ಬೇಕಾದಾಗ್ಗೆ ಬರಬಹುದು. ನೀವು ಯಾವಾಗ್ಗೆ ಬಂದರೂ ನಿಮ್ಮ ಪೀಠಕ್ಕೆ ಗೌರವವಿದೆ. ಮತ್ತು ಯಾವ ಅನುಮಾನವಿಲ್ಲದೆ ನಿಮ್ಮ ಕೂಡಾ ಸಹಕರಿಸಿ ನೀವು ಬಂದಕಾರ್ಯಗಳನ್ನು ಮುಗಿಸಿ ನಿಮ್ಮನ್ನು ಪರತ ಕಳಿಸುವದು ನಮ್ಮದಿರುತ್ತದೆ. ಅಂತಾ ಹೇಳಿಬಿಟ್ಟರು.
ಆಮೇಲೆ ಫೋಟೋ ವಗೈರೆ ತೆಗೆಯುವ ಕಾರ್ಯಕ್ರಮಗಳು ಮುಗಿದ ನಂತರ ಪರತ ನಮ್ಮ ಸ್ತಾನಕ್ಕೆ ಬಂದೆವು. ಆಮೆಲೆ ಕೃಷ್ಣಾಪುರ ಮಠಕ್ಕೆ ಹೂಗಿ ಮೂದಲಿನಂತೆ ಕಾರ್ಯಕ್ರಮ ಮುಗಿಸಿಕೂಂಡು ಬಂದೆವು. ಆಮೇಲೆ ಮಠದ ನಿಮಿತ್ಯವಾಗಿ ಒಂದು ಸೇವಾ ಮಾಡಿಸಬೇಕು ಅಂತಾ ಎಲ್ಲ ಶಿಷ್ಯರು ಕೂಡಿಕೂಂಡು ವಿಚಾರ ಪ್ರಾರಂಭಮಾಡಿದರು. ಎಲ್ಲರೂ ತಮ್ಮ ಮನಸ್ಸಿನ ವಿಚಾರಗಳನ್ನು ತಿಳಿಸಲು ಪ್ರಾರಂಭ ಮಾಡಿದರು. ಎಲ್ಲರವಿಚಾರಗಳ ಸಮ್ಮಿಲನ ಮಾಡಿ ರಜತ ರಥೋತ್ಸವ ಮಾಡಿಸಬೇಕೆಂದು ನಿಶ್ಚಯಿಸಲಾಯಿತು. ಎಲ್ಲಶಿಷ್ಯರು ತಮ್ಮ ಯೂಗ್ಯತೆಯ ಮೇರೆಗೆ ವರ್ಗಣಿಕೂಡಿಸಿಕೂಂಡು ರೂ ೫೦೧/ ಕೂಟ್ಟು ಅವತ್ತಿನ ದಿವಸ ರಥೂತ್ಸವ ಮಾಡಿಸಲಾಯಿತು. ನಂತರ ಸಾಯಂಕಾಲದ ಸ್ನಾನ ಮಂಗಳಾರತಿ ಎಲ್ಲ ಕಾರ್ಯಕ್ರಮ ಮುಗಿಸಿ ಆಮಂತ್ರಿಸಿದ ಪ್ರಕಾರ ಸಭಾಸ್ಥಾನಕ್ಕೆ ಬರಲಾಯಿತು. ಅಲ್ಲಿ ಪ್ರೇಕ್ಷಕರು, ಭಾಷಣಕಾರರು, ಗಾಯಕರು, ಮಾನಪತ್ರಾರ್ಪಣ ಮಾಡುಅವವರಿಂದಾ ಅಸಂಖ್ಯಾತ ಜನ ಗುಂಪುಗೂಡಿದ್ದಾಗಿತ್ತು. ಸಭಾವೇದಿಕೆಯಮೇಲೆ ನಾಲ್ಕು ಜನ ಶ್ರೀಗಳವರು ಉಪಸ್ಥಿತರಾಗಿದ್ದರು. ೧) ವಿದ್ಯಮಾನ್ಯ ತೀರ್ಥ ಭಂಡಾರಕೇರ ಶ್ರೀಗಳು, ೨) ವಿಶ್ವೇಶತೀರ್ಥ ಪೇಜಾವರಶ್ರೀಗಳು, ೩) ಶ್ರೀ ವಿದ್ಯಾತಪೋನಿಧಿ ತೀರ್ಥ ಕಣ್ವ ಮಥದ ಶ್ರೀಗಳು, ೪) ಚಿತ್ತಾಪೂರದ ಶ್ರೀಗಳವರು. ಈಪ್ರಕಾರ ಶ್ರೀಗಳವರು ಪೀಠಾರೋಹಣ ಮಾಡಿರಲು ಎಲ್ಲಕಾರ್ಯಗಳು ಇವರ ಅಧಿಕಾರ ಕ್ಷೇತ್ರದಲ್ಲಿಯೇ ನಡೆಯುವವು ಎಂಬ ಭಾವನೆಯಾಗಿ ಎಲ್ಲರ ಭಿತ್ತಿವೃತ್ತಿಯು ಇವರಲ್ಲಿಯೇ ತಲ್ಲೀನವಾಗಿದ್ದವು. ಮೂದಲಿಗೆ ಮಾನಪತ್ರ ವಂದನಾರ್ಪಣೆ, ಗಾಯನ, ಭಾಷಣ, ಈ ಪ್ರಕಾರ ಕರ್ಯಕ್ರಮಗಳು ಮೂದಲೇ ಠರಾಯಿಸಿ ಒಂದೂಂದು ಕಾರ್ಯದಲ್ಲಿ ಒಬ್ಬವ್ಯಕ್ತಿಗೆ ಇಂತಿಷ್ಟು ವೇಳೆ ಎಂಬ ನಿರ್ಭಂದ ಮಾಡಿ ಅದರಂತೆ ಒಂದು ಬೋರ್ಡಮೇಲೆ ಹಚ್ಚಲಾಯಿತು. ಆ ಮೇಲೆ ಕಾರ್ಯಕ್ರಮಗಳು ಪ್ರಾರಂಭ ಮಾಡಲ್ಪಟ್ಟವು. ಅಲ್ಲಿಯ ಶಾಂತತೆ, ಒತ್ಸಾಹ ವಿದ್ವನ್ಮಣಿಗಳ ಸಮೂಹ ಇದರಗೂಸ್ಕರವಾಗಿ ಎಲ್ಲರೂ ತಮ್ಮಕ್ರಮದಲ್ಲಿ ವೇಳೆಯ ಆಕ್ರಮಣ ಮಾಡಲಾರಂಭಿಸಿದರು. ಹಿಗಾಗಿ ವೇಳೆಯು ಸಾಲದಾಯಿತು. 
ವಂದಾನರ್ಪಣೆ, ಗಾಯನ ಮುಗಿದಮೇಲೆ ಭಾಷಣದ ವೇಳೆತೀರಾ ಸ್ವಲ್ಪ ಒಳಿಯಿತು. ಭಾಷಣಕಾರರು ತಮ್ಮ ಭಾಷಣಗಳ ಮೂಲಕ ಎಲ್ಲ ಜನರ ಮೇಲೆ ಪರಿಣಾಮವಾಗಹತ್ತಿದ್ದರಿಂದಾ ಭಾಷಣಕಾರರಿಗೆ ನಿಮ್ಮ ವೇಳೆ ಮುಗಿಯಿತು ಅಂತಾ ಸೂಚನೆ ಕೂಡಲಾಯಿತು. ಆಮೇಲೆ ಪೇಜಾವರ ಶ್ರೀಗಳವರು ಪ್ರವಚನ ಪ್ರಾರಂಭವಾಯಿತು. ಈಗನಡೆದ ಪರ್ಯಾಯದ ಉತ್ಸವಕ್ಕೆ ಸದ್ಭಕ್ತರು, ಜ್ನಾನಿಗಳು, ವಿದ್ವಾನಜನರು, ತಮ್ಮ ತನು ಮನ ಧನುಗಳೀಂದಲೂ ಸೇವೆಸಲ್ಲಿಸತಕ್ಕ ಕಾರ್ಯಕರ್ತರು ಇಲ್ಲಿಗೆ ಆಗಮಿಸಿ ಭಗವಹಿಸಲಾಗಿತ್ತು. ಎಲ್ಲ ಕಾರ್ಯಗಳು ಒಳ್ಳೆವಿಜ್ರಂಭಣೆಯಿಂದಾ ಜರುಗಿದವು. ಅದರಲ್ಲಿ ಕಣ್ವಮಠದ ಶ್ರೀಗಳ ಆಗಮನದಿಂದಾ ವಿಶೇಷವಾದ ಕಳೆಬಂದಿರುತ್ತದೆ. ಈಗ ಕಣ್ವಪೀಠದಲ್ಲಿರುವ ಶ್ರೀವಿದ್ಯಾತಪೂನಿಧಿ ತೀರ್ಥ ಶ್ರೀಪಾದಂಗಳವರು ತಪಸ್ವಿಗಳು, ಒಳ್ಳೆವರ್ಚಸ್ವಿಗಳು, ಸತ್ವಸ್ತರು, ಸಮಾಜಊದ್ಧರಕ್ಕೋಸ್ಕರ ಒಳ್ಳೆ ಕಳೆಕಳೆಯುಳ್ಳವರು. ಮತ್ತು ಭಗವತ್ಕೃಪೆಗೆ ಪಾತ್ರರಾಧವರೆಂಬ ಬಗ್ಗೆ ನಮಗೆ ಮನವರಕೆಯಾಗಿದೆ. ಆಶ್ರಮ ತೆಗೆದುಕೂಂಡ ೬ ತಿಂಗಳಲ್ಲಿ ಹಿಂದೆ ಪಿಠಾದ್ಯಂತ ಇಲ್ಲಿಗೆ ಬರಲು ಪ್ರಯತ್ನಮಾಡಿ ಯಾವಶ್ರೀಗಳಿಗೂ ಸಾದ್ಯವಾಗದ ರಜತಪೀಠಕ್ಕೆ ಸರಳವಾಗಿ ಬಂದುಬಿಟ್ಟರು. ಇರಲಿ ಈಕಣ್ವ ಮಠವು ನಮ್ಮ ಉಡುಪಿಯ ಶಿರೂರ ಮಠದ ಶ್ರೀ ಲಕ್ಷ್ಮೀಮನೂಹರತೀರ್ಥರಿಂದಾ ಆಶ್ರಮ ಪಡೆದ ಶ್ರೀಮನ್ಮಾಧವತೀರ್ಥ ಶ್ರೀಗಳವರಿಂದಾ ಸ್ಥಾಪಿಸಲ್ಪತ್ತಿರುವದು. ಅಂದಮೇಲೆ ನಮ್ಮದೇ ಆಯಿತು. ಅಂತುಒತ್ತಿನಲ್ಲಿ ಹೇಳುವದೆಂದರೆ ಉಡುಪಿಯ ಎಂಟುಮಠದ ಪೈಕಿ ಕಣ್ವಮಠ ಒಂಬತ್ತನೇಯ ಮಠವೆಂದು ಎಲ್ಲರೂ ಸಹಕರಿಸಿ ಗೌರವಯುಕ್ತವಾಗಿ ನಡೆದುಕೂಳ್ಳಬೇಕೆಂದು ನಾವು ನಿ:ಸ್ಸಂಡೆಹವಾಗಿ ಹೇಳುತ್ತೇವೆ. ಮತ್ತು ಎಲ್ಲ ಜನರು ಈಕಾರ್ಯದಲ್ಲಿ ಭಾಗವಹಿಸಿದ್ದರಿಂದಾ ನಿಮ್ಮೆಲ್ಲರಿಗೂ ಆಯು, ಆರೂಗ್ಯ ಐಶ್ವರ್ಯ, ಅಭಿರ್ವದ್ದಿಯಾಗಲೆಂದು ಕೋರಿ ವೇಳೆ ಸಂಕುಚಿತ ಮೂಲಕವಾಗಿ ನಮ್ಮ ಪ್ರವಚನ ಮುಗಿಸುತ್ತೇವೆ.
ನಮಗೆ ನಿಕಟ ಸಂಬಂಧ ಶಿಷ್ಯರಾದ ದೇವರು ವಕೀಲರೇ ಮೂದಲಾದ ಎಲ್ಲರೂ ಈಗ ಇಲ್ಲಿ ನಮ್ಮ ಶ್ರೀಗಳು ತಾವು ಸ್ವಲ್ಪ ಮಟ್ಟಿಗೆ ಭಾಷಣ ಮಾಡಿದರೆ ನೆಟ್ಟಗಾಗುತ್ತಿತ್ತು. ಅಂತಾ ಕೇಳಿಕೂಳ್ಳಲು ಧೈರ್ಯವಾಗದೇ ಯಲ್ಲರಿಗೂ ಪ್ರವಚನ ಹೇಳಲು ಧೈರ್ಯ ಬರಲಿಲ್ಲಾಯಂದು ತಿಳಿದುಕೂಂಡು ಉಪಾಯವಿಲ್ಲಾ ಅಂತಾ ಉದಸೀನರಾಗಿಬಿಟ್ಟರು. ಆದರೆ ಶ್ರೀವಿಠಲಕೃಷ್ಣನ ಪ್ರೇರಣೆಯಿಂದಾ ನಾವುಇಲ್ಲಿ ಪ್ರವಚನರೂಪವಾಗಿ ಎರಡು ಮಾತಾಡುವ ಕುತುಹಲ. ಆದರೆ ಬೋರ್ಡಿನಲ್ಲಿ ನಮಗೆ ಮಾತನಾಡಲು ವೇಳೆಇಲ್ಲಾ ಇದರಿಂದಾ ನಾವು ಪೇಜಾವರ ಶ್ರೀಗಳವರಿಗೆ ನಮಗೆ ಪ್ರವಚನೆಗೂಸ್ಕರವಾಗಿ ಸ್ವಲ್ಪ ವೇಳೆ ತೆರು ಮಾಡಿಕೂಡಲು ವಿಚಾರಿಸಿದೆವು. ಆಗೆ ಶ್ರೀಗಳವರು ನೀವು ಬೇಕಾದಷ್ಟು ವೇಳೆ ತೆಗೆದುಕೂಳ್ಳಬಹುದು ಅಂತಾ ಹೇಳಿ ಇನ್ನುಮುಂದಿನ ವೇಳೆಯನ್ನು ಶ್ರೀಕಣ್ವಮಠದ ಶ್ರೀಗಳ ಪ್ರವಚನದಗೂಸ್ಕರ ಕೂಟ್ಟಿದೆ. ಅವರದು ಮುಗಿದಮೇಲೆ ಮುಂದಿನವರು ಪ್ರಾರಂಭ ಮಾಡಬೇಕು ಅಂತಾ ಎಲ್ಲರಿಗೂ ಸೂಚನೆ ಮಾಡಿದರು. ಆಮೇಲೆ ನಮ್ಮ ಪ್ರವಚನ ಪೂರ್ವದಲ್ಲಿ ಮೂದಲು ಶುಕ್ಲಾಂಭರಧರಂ ಇದರಿಂದಾ ವಿಠಲಕೃಷ್ಣನಿಗೆ ಮತ್ತು ವಂದೇಹಂ ಮಂಗಲಾತ್ಮಾನಾಂ ಇದರಿಂದಾ ಯೂಗೀಶ್ವರ ಯಾಜ್ನ್ಯವಲ್ಕ್ಯರಿಗೂ ಮತ್ತು ಮಾಧವಾರ್ಯರಿಂದಾ ಎಲ್ಲ ಗುರುಗಳಿಗೂ ವಂದನಾರ್ಪಣೆ ಮಾಡಿ ನಮ್ಮ ಪ್ರವಚನ ಪ್ರಾರಂಭ ಮಾಡಿದೆವು. ಈಗಿನ ವೇಳೆಯಲ್ಲಿ ನಮಗೆ ಇಲ್ಲಿಗೆ ಬರಲು ಸಾದ್ಯವೇ ಇದ್ದಿಲ್ಲಾ. ಆದರೆ ರಜತ ಪೀಠಸ್ಥನಾದ ಕೃಷ್ಣದೇವರು ತಮ್ಮ ಪ್ರೇರಣೆಯಿಂದಾ ಪೇಜಾವರ ಶ್ರೀಗಳು ಅನಾನುಕೂಲತೆಯನ್ನೆಲ್ಲ ಬದಿಗೆ ಸರಿಸಿ ಕಣ್ವ ಪೀಠದಿಂದಾ ರಜತಪೀಠದವರೆಗೆ ಅನಕೂಲದಸಿದ್ದಾಂತ ಸೂಚನೆ ಮಾಡಿಕೂಟ್ಟುಬಿಟ್ಟರು. ಈಪರ್ಯಾಯದ ನಿಮಿತ್ಯಗೂಸ್ಕರ ರಜತಪೀಠಕ್ಕೆ ಬಂದಶ್ರೇಯಸ್ಸಿಗೆ ಪೇಜಾವರಶ್ರೀಗಳೇ ಎಂದು ನಿಸ್ಸಂದೇಹವಾಗಿ ಹೇಳುತ್ತೆವೆ. ಮತ್ತು ಈಗ ತಮ್ಮಪ್ರವಚನದಲ್ಲಿ ಕಣ್ವಮಠದ ಬಗ್ಗೆ ತೂರ್ಪಡಿಸಿದ ಕಳಕಳಿಯಬಗ್ಗೆ ನಮಗೆ ಬಹಳೇ ಆನಂದವಾಗಿದೆ.ಈಗಿನ ವೇಳೆಯಲ್ಲಿ ನಮಗೆ ಇಲ್ಲಿಗೆ ಬರಲು ಸಾದ್ಯವೇ ಇದ್ದಿಲ್ಲಾ. ಆದರೆ ರಜತ ಪೀಠಸ್ಥನಾದ ಕೃಷ್ಣದೇವರು ತಮ್ಮ ಪ್ರೇರಣೆಯಿಂದಾ ಪೇಜಾವರ ಶ್ರೀಗಳು ಅನಾನುಕೂಲತೆಯನ್ನೆಲ್ಲ ಬದಿಗೆ ಸರಿಸಿ ಕಣ್ವ ಪೀಠದಿಂದಾ ರಜತಪೀಠದವರೆಗೆ ಅನಕೂಲದಸಿದ್ದಾಂತ ಸೂಚನೆ ಮಾಡಿಕೂಟ್ಟುಬಿಟ್ಟರು. ಈಪರ್ಯಾಯದ ನಿಮಿತ್ಯಗೂಸ್ಕರ ರಜತಪೀಠಕ್ಕೆ ಬಂದಶ್ರೇಯಸ್ಸಿಗೆ ಪೇಜಾವರಶ್ರೀಗಳೇ ಎಂದು ನಿಸ್ಸಂದೇಹವಾಗಿ ಹೇಳುತ್ತೆವೆ. ಮತ್ತು ಈಗ ತಮ್ಮಪ್ರವಚನದಲ್ಲಿ ಕಣ್ವಮಠದ ಬಗ್ಗೆ ತೂರ್ಪಡಿಸಿದ ಕಳಕಳಿಯಬಗ್ಗೆ ನಮಗೆ ಬಹಳೇ ಆನಂದವಾಗಿದೆ. ಮತ್ತು ಅವರು ಹೇಳಿದ ಪ್ರಕಾರ ಕಣ್ವಮಠ ಉಡುಪಿಗೆ ೯ನೇ ಮಠವಾದ ಮೇಲೆ ಕಣ್ವಮಠವಾದರೂ ಉಡುಪಿಪೀಠದ ಶ್ರೀಗಳವರು ಯಾವುದೇಕಾರ್ಯಕ್ರಮ ಕೈಗೂಳ್ಳಲು ಸದರ ಕಾರ್ಯಕ್ಕೆ ಹೆಗಲಿಗೆ ಹೆಗಲುಕೂಟ್ಟು ಸಹಕಾರ ನೀಡುವದರಲ್ಲಿ ತನ್ನ ಯೂಗ್ಯತೆಯ ಮಟ್ಟಿಗೆ ಕಣ್ವಮಠವು ಸದಾ ಸಿದ್ದವಾಗಿದೆ ಎಂದು ನಿಸ್ಸಂದೇಹವಾಗಿ ಹೇಳುವೆವು. ಮತ್ತು ಈವೇಳೆಯನ್ನು ನಮಗೆ ಮೀಸಲಾಗಿ ಕೂಟ್ಟ ಪೇಜಾವರ ಶ್ರೀಗಳವರಿಗೆ ಧನ್ಯವಾದಗಳನ್ನು ಅರ್ಪಿಸುವೆವು ಮತ್ತು ನಿಮ್ಮೆಲ್ಲರಿಗೂ ತನ್ನ ಕೃಪಾಬಲದಿಂದಾನಿಮ್ಮೆಲ್ಲರನ್ನು ಕಾಪಾಡಲೆಂದು ಶ್ರೀ ವಿಠಲಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ ನಮ್ಮಪ್ರವಚನ ಮುಗಿಸುವೆವು.) ಮತ್ತು ಮುಂದೆ ಮತ್ತೇ ಭಾಷಣಗಳಾದವು. ಅವರ ಪರಿಚಯವಿಲ್ಲದ ಮೂಲಕವಾಗಿ ಬರೆಯಲು ಸಾಧ್ಯವಾಗಲಿಲ್ಲಾ. ಸಭಾ ವಿಸರ್ಜನಾ ನಂತರ ಎಲ್ಲರೂ ತಮ್ಮ ಸ್ಥಾನಗಳಿಗೆ ಹೋದರು. ದಿ||೨೧-೦೧-೧೯೬೮ರಂದು ಮುಂಜಾನೆ ಸ್ನಾನಾನ್ಹೇಕಗಳು ಮುಉಗಿದಮೇಲೆ ಉಳಿದ ಜನರಿಗೆ ಮುದ್ರಾ ಹಾಕಲಾಯಿತು. ಮತ್ತು ಕರೆಯ ಬಂದ ಪ್ರಕಾರ ಎಲ್ಲಮಠಗಳಿಗೆ ಹೋಗಿಬರಲಾಯಿತು. ಕಾಣಿಕೆ ಕೂಡುವದು ಮರ್ಯಾದಾ ಮಾಡುವದು ಮುಗಿದಮೇಲೆ .ಎಲ್ಲ ಶ್ರೀಗಳ ಸನ್ನಿಧಾನದಲ್ಲಿ ಚೌಕಿಯಲ್ಲಿ ಭೋಜನ ಸಮಾರಂಭ ಮುಗಿದಮೇಲೆ ಪರತ ಹೂರಡುವ ತಯಾರು ಪ್ರಾರಂಭವಾಯಿತು. ಮತ್ತು ೪-೦೦ಘಂಟೆಗೆ ಪೇಜಾವರಶ್ರೀಗಳನ್ನು, ಭಂಡಾರಕೇರಿ ಶ್ರೀಗಳನ್ನು ಕರೆಸಲಾಯಿತು. ಸದರಿಯವರಿಗೆ ಫಲ ಪುಷ್ಪ ಕಾಣಿಕೆಯನ್ನು ಕೂಡಲಾಯಿತು. ಇಬ್ಬರಿಗೂ ರೂ೧೦೦/ ಕೂಡಲಾಯಿತು. ಮತ್ತು ಪುನ: ಪೇಜಾವರ ಶ್ರೀಗಳು ಒಂದು ಪೀತಾಂಬರ ರೂ೨೦೦/ ಫಲಪುಷ್ಪಗಳನ್ನು ನಮಗೆ ಕೂಟ್ಟರು. ಅಲ್ಲಿ ಬಂದ ಬ್ರಾಹ್ಮಣರಿಗೆ ಕಿಂಚಿತ ಸಂಭಾವನಾ ಕೂಡಲಾಯಿತು.
ಎಲ್ಲಕಾರ್ಯಗಳನ್ನು ಮುಗಿಸಿಕೂಂಡು ಶ್ರೀಗಳಿಂದಾ ನೀರೂಪ ತೆಗೆದುಕೂಂಡು ವಾದ್ಯವೈಭವಗಳಿಂದಾ ಬಂದು ಜೀಪಿನಲ್ಲಿ ಕುಳಿತುಕೂಂಡು ಎಲ್ಲರಿಗೂ ಮಂತ್ರಾಕ್ಷತೆ ಕೂಟ್ಟು ರೂ೧೦/ ಬಾಜಿವಗೈರೆಯವರಿಗೆ ಖುಷಿ ಕೂಟ್ಟು ಹೂರಟೆವು.

ಉಡುಪಿ ಯಾತ್ರೆ-೨

ಉಡುಪಿ ಯಾತ್ರೆ-೨
~~~~~~~~~~~~
ಉಡುಪಿಗೆ ಹೂರಡುವದು ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ (೧) ಮಂಗಳವಾರ ದಿ|| ೧೬-೦೧-೧೯೬೮ನೇ ದಿವಸ ಅಂತಾ ಠರಾವು ಆಯಿತು. ಎಲ್ಲಾ ರಾಯಚೂರ ಜಿಲ್ಹೆಯ ಶಿಷ್ಯರ ಸಹಾಯದಿಂದಾ ಒಂದು ಜೀಪು ಖರೀದಿ ಮಾಡಲಾಯಿತು. ಮತ್ತು ವೇ|| ದೇವರು ಡಾಕ್ಟರ ಒಂದು ಕಾರು ತೆಗೆದುಕೂಂಡು (೪೦) ಜನರಿಂದಾ ಕೂಡಿಕೊಂಡು ಹೋಗುವದು ತಯ್ಯಾರ ಮಾಡಲಾಯಿತು. ಉಳಿದ ಶಿಷ್ಯರು ತಮ್ಮ ಅನಕೂಲ ಪ್ರಕಾರ ಪರಭಾರೆ ಬರುವದಾಗಿ ತಿಳಿಸಿದರು. ನಮ್ಮ ಸಂಗಡ ಉಡುಪಿಗೆ ಬರಲು ಆತುರರಾದ ಶಿಷ್ಯರು (೫೦೦) ಆಗಬಹುದೆಂದು ಅಂದಾಜು ಮಾಡಲಾಯಿತು. ನಾವು ಉಡುಪಿಗೆ ಹೋಗುವದನ್ನು ಎಲ್ಲಾ ಪ್ರಮುಖ ಸ್ತಳಗಳಿಗೆ ಟಪಾಲುದ್ವಾರಾ ತಿಳಿಸಲಾಯಿತು. ನಮ್ಮ ಸಂಗಡ ಬರುವ ಎಲ್ಲರೂ ಪುಷ್ಯ ಶುದ್ಧ ೧೫ ಸೋಮವಾರ ದಿವಸ ಸಾಯಂಕಾಲಕ್ಕೆ ದೇವದುರ್ಗಕ್ಕೆ ಬರಬೇಕು ಅಂತಾ ತಿಳಿಸಲಾಯಿತು. ಆ ಪ್ರಕಾರ ಎಲ್ಲರೂ ಪೌರ್ಣಿಮಾ ಸಾಯಂಕಾಲಕ್ಕೆ ದೇವದುರ್ಗಕ್ಕೆ ಬಂದುಬಿಟ್ಟರು. ಪ್ರತಿಪದಾ ದಿವಸ ಮುಂಜಾನೆ ಪೊಜಾ, ತೀರ್ಥ, ಪ್ರಸಾದ ಮುಗಿಸಿಕೊಂಡು ಹಗಲು ೦೪-೦೦ ಘಂಟೆಗೆ ತನ್ನ ಮೊಲ ಪೀಠಕ್ಕೆ ಹೊಗಬೆಕೆಂಬ ಸತ್ಯ ಸಂಕಲ್ಪದ ಶ್ರೀ ಹರಿಯು ತನ್ನ ಭಕ್ತವ್ರಂದದೊಡನೆ ದೇವದುರ್ಗದಿಂದಾ ಹೊರಟುಬಿಟ್ಟನು. ಮೊದಲೇ ನಿಶ್ಚ್ಯಯ ಮಾಡಿದ ಪ್ರಕಾರ ಅವತ್ತು ಸಾಯಂಕಾಲಕ್ಕೆ ದೇಸಾಯಿ ಕ್ಯಾಂಪಿಗೆ ರಾತ್ರಿ ೦೯-೦೦ ಘಂಟೆಗೆ ಹೋಗಿ ಸಾಯಂಕಾಲದ ಮಂಗಳಾರತಿ ಫಲಹಾರ ವಗೈರೆ ಮುಗಿಸಿ ವಿಶ್ರಾಂತಿ ತೆಗೆದುಕೊಂಡು ಬೆಳಗಮುಂಜಾನೆ ೦೪-೦೦ ಘಂಟೆಗೆ ಎದ್ದು ಬುಧವಾರ ದಿವಸ ಮುಂಜಾನೆ ೦೯-೦೦ ಘಂಟೆಗೆ ಮುನಿರಾಬಾದಕ್ಕೆ ಬಂದೆವು. ಮುನಿರಾಬಾದನಲ್ಲಿ ಪಾದ ಪೊಜಾ,ಮತ್ತು ಸಂಜಾತಭಿಕ್ಷೆ ಮುಗಿಸಿಕೂಂಡು ೦೪-೦೦ಘಂಟೆಗೆ ಹೂರಟು ರಾತ್ರಿ ಹತ್ತು(೧೦-೦೦)ಘಂಟೆಗೆ ಹರಿಹರಕ್ಕೆ ಬಂದೆವು. ಅಲ್ಲಿ ಹರಿಹರ ದೇವರ ದರ್ಶನ ತೆಗೆದುಕೊಂಡು, ಮುಂದೆ ಸ್ವಲ್ಪದೂರ ಹೂಗಲು ಕಾರು ಕೆಟ್ಟು ನಿಂತಿತು. ಒಂದು ಜೀಪು,ಕಾರು ಅಲ್ಲೆ ಬಿಟ್ಟು ಶ್ರೀಗಳು, ಶೀನಪ್ಪಯ್ಯಾ, ವೇ||ವೆಂಕಪ್ಪಯ್ಯನವರು ಹಾಗೆ ಹೂರಟು ದಿ||೧೮-೦೧-೧೯೬೮ನೆ ಮುಂಜಾನೆ ಎಂಟು ಘಂಟೆಗೆ ಭಂಡಾರಕೇರಿಗೆ ಹೂದೆವು. ಅಲ್ಲಿಯ ವಿದ್ಯಮಾನ್ಯ ಶ್ರೀಗಳವರಿಂದಾ ಸ್ವಾಗತ ಸ್ವೀಕಾರಮಾಡಿಕೂಂಡು ಸ್ವಲ್ಪವೇಳೆ ವಿಶ್ರಾಂತಿ ತೆಗೆದುಕೂಂಡು, ಮುಂದೆ ಪೂಜಾ, ನೇವೇದ್ಯ, ತೀರ್ಥ, ಪ್ರಸಾದ ವಗೈರೆ ಎಲ್ಲ ಕಾರ್ಯಗಳನ್ನು ಮುಂದಿನ ಪ್ರಯಾಣ ನಿಮಿತ್ಯ ಗಡಿಬಿಡಿಯಿಂದಾ ಮುಗಿಸಲಾಯಿತು.
ಎಲ್ಲವೂ ಮುಗಿದಮೇಲೆ ಭಂಡಾರಕೇರಿ ಶ್ರೀಗಳವರು ಫಲ ಪುಷ್ಪದೂಂದಿಗೆ ರೂ೨೦೧=೦೦ ಕಾಣಿಕೆ ಸಲ್ಲಿಸಿದರು. ಅವರು ನಾವು ಕೂಡಿಕೂಂಡು ನಾಲ್ಕು ಘಂಟೆಗೆ ಉಡುಪಿಗೆ ಹೂಗಲು ಹೂರಟೆವು. ಹಗಲು ೦೫-೩೦ಘಂಟೆಗೆ ಉಡುಪಿಗೆ ಹೂದೆವು. ಅಲ್ಲಿ ಒಂದು ಗುಡಿಯಲ್ಲಿ ಇಳಿಯಲು ಸ್ಥಳಮಾಡಿದ್ದರು ಗುಡಿಯ ಮಹಡಿಯಲ್ಲಿ ವಿಶ್ರಾಂತಿ ಆಯಿತು. ಪೇಜಾವರ ದಿವಾನ ಸುಬ್ಬರಾಯಭಟ್ಟರು ಇನ್ನು ಸ್ವಲ್ಪ ವೇಳೆಯಲ್ಲಿ ಕರೆದುಕೂಂಡು ಹೋಗುವದಾಗಿ ಹೇಳಿಹೋದರು. ಮತ್ತು ಚಿತ್ತಪೂರ ಶ್ರೀಗಳವರು ಅಲ್ಲಿಗೆ ಬಂದರು. ಅಂತೂ ಮೂವರು ಶ್ರೀಗಳವರ ಸಂಗಮವಾಯಿತು. ತ್ರೀ ಸನ್ಯಾಸಿಗಳು ಒಳ್ಳೆ ಹರ್ಷೂದ್ಗಾರಗಳಿಂದಾ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುತ್ತ ತಮ್ಮ ತಮ್ಮ ಮಠಗಳ ಆಡಳಿತ, ಕೇಳುತ್ತ ಹೇಳುತ್ತಾ ಒಳ್ಳೆ ಆನಂದದಲ್ಲಿ ಕಾಲಕ್ರಮೇಣ ಮಾಡಲಾಯಿತು. ನಾವು ಅಂದರೆ ಕಣ್ವ ಮಠದ ಶ್ರೀಗಳವರು ಬಂದ ವರ್ತಮಾನ ಎಲ್ಲಾಕಡೆಗೂ ಪಸರಿಸಿದ್ದರಿಂದಾ ನಮ್ಮ ಕಡಿಂದಾ ಮೂದಲೇ ನೀರೂಪತೆಗೆದುಕೂಂಡು ಬಂದ ಎಲ್ಲ ಶಿಷ್ಯ ಸಮೂಹವು ಬಂದು ನಮ್ಮನ್ನು ಕುಡಿಕೂಂಡಿತು. ರಾತ್ರಿ ಎಂಟು ಘಂಟೆ ಕಾಲಾವಧಿಯಲ್ಲಿ ಶ್ರೀಪೆಜಾವರ ಶ್ರೀಗಳಿಂದಾ ಮೆರವಣೆಗೆಗೋಸ್ಕರವಾಗಿ ವಿದ್ಯುದ್ವೀಪಗಳಿಂದ ಅಲಂಕರಿಸಿದ ಜೀಪು ಅಸಂಖ್ಯಲೈಟುಗಳು ವಾದ್ಯ ವೈಭವ ದ್ವಜಪತಾಕಗಳಿಂದಲು ಮತ್ತು ತಮ್ಮ ಪ್ರಮುಖ ಶಿಷ್ಯರನ್ನು ಕರೆಯಲು ಕಳಿಸಿಕೂಟ್ಟರು. ಸದರಿಯವರು ಫಲಪುಷ್ಪಗಳನ್ನು ಅರ್ಪಿಸಿ ನಮಸ್ಕಾರವಗೈರೆ ವಿಧಾನಗಳು ಮುಗಿದಮೇಲೆ ಮೂವರು ಶ್ರೀಗಳನ್ನು ಜೀಪದಲ್ಲಿ ಕೂಡ್ರಿಸಿ ಮೆರವಣಿಗೆಯು ಪ್ರಾರಂಭವಾಯಿತು. ವೈಕುಂಠದಲ್ಲಿ ನಮ್ಮ ಸ್ವಾಗತ, ಪೇಜಾವರ ಶ್ರೀಗಳವರು ಮಾಡುವರೆಂಬುದು ಎಲ್ಲವೂ ಮಿಥ್ಯವಾದದ್ದು. ರಜತ ಪೀಠಸ್ಥನಾದ ಶ್ರೀ ಹರಿಯು ತಾನೆ ವಿಠಲಕ್ರಿಷ್ಣನ ನಮಾಂಕಿತದಿಂದಾ ಕಣ್ವಪೀಠಕ್ಕೆಹೋಗಿದ್ದು ಎರಡುನೂರು ವರುಷದವರೆಗೂ ಇಲ್ಲಿಗೆ ಬರದೇ ಇದ್ದ ಮೂಲಕವಾಗಿ ಈಗ ತನ್ನ ಮೂಲಪಿಠಕ್ಕೆ ಬರಬೇಕೆಂಬ ಆತುರವಾಗಿ ವಿಠಲಕ್ರಿಷ್ಣನು ಇಲ್ಲಿಗೆ ಬರಲು ಪೀಠದಲ್ಲಿಯ ಕ್ರಿಷ್ಣನು ಸ್ವಾಗತಮಾಡುವದುಸಹಜವದೆ ಇಲ್ಲಿ ನಮಗೆ ಸ್ವಾಗತ ಮಾಡಿಸಿಕೂಳ್ಳಲು ಶಕ್ತರೇಅಲ್ಲ.
ಮುಂದೆ ಮಾರ್ಗದಲ್ಲಿ ಫಲಪುಷ್ಪ ಮಾಲಾರ್ಪಣೆ ಮತ್ತು ಮಂಗಳಾರತೆಗಳು ಆಗತಾಇದ್ದು ಅವುಗಳನ್ನೆಲ್ಲಾ ಅಂತರ್ಗತನಾದ ವಿಠಲಕ್ರಿಷ್ಣನ ಆಜ್ನಧಾರಕರಾಗಿ ಅವನಗೂಸಗ ಅವನ ಸೇವಕಭಾವದಲ್ಲಿ ಸ್ವೀಕರಿಸುತ್ತ ೧೦-೦೦ಘಂಟೆಗೆ ಸ್ವಾಗತ ಮಂಟಪಕ್ಕೆ ಹೂದೆವು ಅಲ್ಲಿ ಶ್ರೀ ಪೇಜಾವರ ಶ್ರೀಗಳವರು ಹಸ್ತಲಾಘವದಿಂದಾ ಮೂರು ಮಂದಿ ಶ್ರೀಗಳ ಸ್ವಾಗತ ಮಾಡಿದ ನಂತರ ಎಲ್ಲರೂ ಪಿಠಾರೋಹಣ ಮಾಡಿದರು. ಆಮೇಲೆ ಸ್ವಾಗತ ಭಾಷಣಗಳು ಮುಗಿದವು. ಎಲ್ಲರೂ ಶ್ರೀಪೇಜಾವರ ಶ್ರೀಗಳವರ ನಿರೂಪ ತೆಗೆದುಕೂಂಡು ತಮ್ಮ ತಮ್ಮಗೂಸ್ಕರ ಏರ್ಪಾಟು ಮಾಡಿದ ಸ್ಥಳಗಳಿಗೆ ಹೂಗಲಾಯಿತು. ತನ್ನ ಪೀಠದಿಂದಾ ೨೦೦ನೂರು ವರ್ಷಗಳ ಹಿಂದೆ ಕಣ್ವ ಪೀಠಕ್ಕೆ ಹೋದ ವಿಠ್ಠಲಕ್ರಿಷ್ಣನು ಒಳ್ಳೆ ವೈಭವದಿಂದಾ ಬಂದು ತನ್ನ ರಜತ ಪೀಠವನ್ನು ಅಲಂಕರಿಸಿ ತನ್ನ ಎಲ್ಲ ಭಕ್ತರನ್ನು ಪುನೀತರನ್ನಾಗಿ ಮಾಡಿದನು. ಇದು ಒಂದು ದೂಡ್ಡಸುಯೋಗವು. ಈ ಯೋಗಕ್ಕೆ ಸರ್ವೋತ್ತಮ ಯೋಗವೆಂದು ನಾಮ ರಹಸ್ಯದಿಂದಾ ಕರೆದೆವು. ನಮ್,ಅಗೆ ಕ್ರಿಷ್ಣದೇವರ ಒಳಬಾಗಿಲ ಮುಂದೆ ಮಹಡಿಯಮೇಲೆ ಇಳಿದುಕೋಳ್ಳಲು ಸ್ಥಾನ ಕಾಯ್ದಿರಿಸಾಲಾಗಿತ್ತು. ಮತ್ತು ಕನಕನ ಕಿಂಡಿಯ ಎಡಬಾಗದಲ್ಲಿ ದೇವತಾರ್ಚನೆ ವಗೈರೆ ಕಾರ್ಯಗಳಿಗೆ ಸ್ಥಳ ಮಾಡಲಾಗಿತ್ತು. ಆಪ್ರಕಾರ ಎಲ್ಲಾ ವ್ಯವಸ್ತೆ ಮಾಡಿಕೊಂಡು ರಾತ್ರಿ ಸ್ನಾನಾನ್ಹೇಕ ಮಂಗಳಾರತಿ ಫಲಹಾರ ವಗೈರೆ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿಗೂಸ್ಕರ ಎಲ್ಲರೂ ನಿದ್ರಾವಶರಾದರು. ದಿ|| ೧೯-೦೧-೧೯೬೮ನೇ ದಿವಸ ಭೋಜನ ಆದ ನಂತರ ಎಲ್ಲರೂ ವಿಶ್ರಾಂತಿ ತೆಗೆದುಕೂಂಡು ಉಡುಪಿಯಲ್ಲಿಯ ಪ್ರೇಕ್ಷಣೀಯ ಸ್ಥಾನವನ್ನು ದ್ರಿಗ್ಗೋಚರ ಮಾಡಲು ಎಲ್ಲರೂ ಹೋದರು. ನಾವು ಮಾತ್ರ ಎಲ್ಲಕಡೆಯಿಂದಾ ಬಂದ ಶಿಷ್ಯರು ದರ್ಶನಕ್ಕೆ ಬರುವದು ಅವರ ಕ್ಷೇಮಸಮಾಚಾರದಲ್ಲಿಯೇ ಅವತ್ತಿನ ದಿವಸ ಕಳೆಯಿತು. ಮತ್ತೆ ಸಾಯಂಕಾಲ ಸ್ನಾನ ಆನ್ಹೇಕ ಮಂಗಳಾರತಿ ವಿಶ್ರಾಂತಿಯಲ್ಲಿ ಈದಿನ ಉರುಳಿ ಹೋಯಿತು ದಿ||೨೦-೦೬-೧೯೬೮ನೇ ದಿವಸ ಪ್ರಾತ:ಸ್ನಾನ ವಗೈರೆ ಮುಗಿದಮೆಲೆ ಎಲ್ಲಕಡೆಯಿಂದಾ ಬಂದ ಕಣ್ವ ಶಾಖೆಯ ಶಿಷ್ಯರು ತಮಗೆ ಮುದ್ರಾಧಾರಣ ಬೇಕೆಂಬ ಸೂಚನೆ ಮಾಡಲು ಪ್ರಾರಂಭ ಮಾಡಿದರು.
ಅಲ್ಲಿ ಮುದ್ರಾದವಿಷಯವೇ ಇಲ್ಲದ್ದರಿಂದಾ ಈಗ ಪರ್ಯಾಯದ ಪೀಠಸ್ಥರಾದ ಶ್ರೀ ಪೇಜಾವರ ಶ್ರೀಗಳನ್ನು ವಿಚಾರ ಮಾಡಬೆಕೆಂಬ ನಿರ್ಣಯವಾಯಿತು. ಸದರ ವಿಚಾರಕ್ಕೂಸ್ಕರವಾಗಿ ವೇ||ಶೀನಪ್ಪಯ್ಯ ದೇವರು ಮತ್ತು ಪರೀಕ್ಷಿತರಾಜ ವೇ||ಗೋಪಾಲಾಚರ್ಯ ಇವರನ್ನು ಶ್ರೀಪೇಜಾವರ ಶ್ರೀಗಳ ಸನ್ನಿಧಾನಕ್ಕೆ ಕಳಿಸಲಾಯಿತು. ಆಕಾಲಕ್ಕೆ ಅಲ್ಲಿ ವಿಚಾರ ಮಾಡಿದ ವಿಷಯ ಈಗ ಕಣ್ವ ಶಾಖೆಯ ದ್ವೈತಸಿದ್ದಾಂತಕ್ಕೆ ಹೂಂದಿಕೂಂಡ ಶಿಷ್ಯರು ತಮಗೆ ನಮ್ಮ ಮಠದ ಶ್ರೀಗಳಿಂದಾ ತಪ್ತಮುದ್ರಾ ಧಾರಣ ಆಗಬೇಕೆಂಬ ಆತುರದ ಸೂಚನೆಯನ್ನು ಮಾಡಹತ್ತಿದ್ದರೆ. ಮತ್ತು ಐವತ್ತು ವರ್ಷದಲಾಗಾಯ್ತ ನಮಗೆ ನಮ್ಮ ಶ್ರೀಗಳ ದರ್ಶನವೇಇಲ್ಲಾ ತಪ್ತಮುದ್ರಾ ಧಾರಣವಿಲ್ಲದೇ ನಾವು ಬಳಲುತ್ತಿದ್ದೆವೆ, ಈಗ ಆ ಯೋಗವನ್ನು ಶ್ರೀವಿಠಲಕ್ರಿಷ್ಣನು ನಮಗೆ ತಂದುಕೂಟ್ಟಿದ್ದಾನೆ. ಎನಾದರೂ ಮಾಡಿ ನಮಗೆ ಮುದ್ರಾಧಾರಣ ಆಗಲೇಬೆಕೆಂದು ಎಲ್ಲಾ ಶಿಷ್ಯರು ಆತುರಪಡಹತ್ತಿದ್ದರೆ. ಅದಕ್ಕೂಸ್ಕರ ಶ್ರೀಗಳು ನಿಮ್ಮ ಕಡೆಗೆ ನಮ್ಮನ್ನು ಕಳಿಸಿದ್ದಾರೆ. 

Last part to be continued...