Monday, September 9, 2013

ಋಷಿ ಪಂಚಮಿ ಪೂಜಾ ವಿಧಾನ

ಋಷಿ ಪಂಚಮಿ ಪೂಜಾ ವಿಧಾನ

ಭಾದ್ರಪದ ಶುಕ್ಲ ಪಂಚಮಿ ಋಷಿಪಂಚಮಿ ವೃತವು. ಅಂದು ವೃತಮಾಡುವ ಸ್ತ್ರೀಯು ಪ್ರಾತಕ್ಕಾಲದಲ್ಲಿ ಸ್ನಾನ ನಿತ್ಯ ಕ್ರಿಯಾಗಳನ್ನೆಲ್ಲಾ ನೆರವೇರಿಸಿ ನದಿ ಮೊದಲಾದ ಜಲಕ್ಕೆ ೧೦೮ ಉತ್ತರಾಣಿ ಕಡ್ಡಿಗಳು, ಭಸ್ಮ, ಗೋಮಯ, ಮೃತ್ತಿಕೆ, ಎಳ್ಳು, ನೆಲ್ಲಿಯಕಲ್ಕ ಗಳನ್ನು ತೆಗೆದುಕೂಂಡು ಹೂಗಬೆಕು. ಅಲ್ಲಿ ಆದ್ಯಪೂರ್ವೋಚ್ಚಿತ ಏವಂ ಗುಣವಿಶೇಷಣ ವಿಶಿಷ್ಟಾಯಂ ಮಮ ಇಹಜನ್ಮನಿ ಜನ್ಮಾಂತರ ಜ್ಞಾತಾಜ್ಞಾತ ಸ್ಪರ್ಶಜನಿತ ದೋಷಕ್ಷಯದ್ವಾರಾ ಅರುಂಧತಿ ಸಹಿತ ಕಶ್ಯಪಾದಿಸಪ್ತರ್ಷಿ ಪ್ರಿತ್ಯರ್ಥಂ ಋಷಿಪಂಚಮಿ ವೃತಾಂಗತ್ವೇನ ದಂತಧಾವನ ಭಸ್ಮ, ಮೃತಿಕಾ, ಗೋಮಯ, ತಿಲಾಮುಲಕ, ಕಲ್ಕ ಲೇಪನ ಪೂರ್ವಕ ಸಂಗಮಾದಿ ತೀರ್ಥಸ್ನಾನಮಹಂ ಕರಿಷ್ಯೆ. ಎಂದು ಸಂಕಲ್ಪ ಪೂರ್ವಕ ಸ್ನಾನ ಮಾಡಬೇಕು.

ವನಸ್ಪತಿ ಪ್ರಾರ್ಥನೆ -
ಆಯುರ್ಬಲಂ ಯಶೋವರ್ಚ: ಪ್ರಜಾ: ಪಶುವಸೂನಿ ಚ:| ಬ್ರಹ್ಮಪ್ರಜ್ಞಾ ಚ ಮೇಧಾಂ ಚತ್ವನ್ನೂ ದೇಹವನಸ್ಪತೆ|| (ವನಸ್ಪತಿಯನ್ನು ಪ್ರಾರ್ಥಿಸಬೇಕು)

ದಂತಧಾವನ ಮಂತ್ರ -
ಮುಖ ದುರ್ಗಂಧಿನಾಶಾಯ ದಂತಾನಾಂ ಚ ವಿಶುಧಯೇ| ಷ್ಠೀವನಾಯ ಚ ಗಾತ್ರಾಣಾಂ ಕರ್ವೇಹಂ ದಂತದಾವನಂ|| (೧೦೮ ಉತ್ತರಾಣಿ ಕಡ್ಡಿಗಳಿಂದಾ ಹಲ್ಲುಜ್ಜಬೇಕು.)

ಗೋಮಯಮಾದಾಯ -
ಅಗ್ರೇಮಗ್ರಂ ಚರಂತೀನಾಮೋಂಷಧೀನಾಂ ವನೇವನೇ| ತಾಸಾ ಮೃಷಭಪತ್ನಿನಾಂ ಪವಿತ್ರಂ ಕಾಯಶೋಧನಂ| ತನ್ಮೇರೋಗಾಂಶ್ಚ ಶೋಕಾಂಶ್ಚನುದ ಗೋಮಯ ಸರ್ವದಾ|| (ಮೈಗೆ ಹಚ್ಚಿಕೂಂಡು ಸ್ನಾನ ಮಾಡಬೇಕು)

ಮೃತ್ತಿಕಾಮಾದಾಯ -
ಅಶ್ವಕ್ರಾಂತೆ ರಥಕ್ರಾಂತೆ ವಿಷ್ಣುಕ್ರಾಂತೆ ವಸುಂಧರೇ | ಶಿರಸಾಧಾರಾಷ್ಯಾಮಿ ರಕ್ಷಸ್ವಮಾಂ ಪದೆ ಪದೆ|| (ಮೃತಿಕಾ,ಎಳ್ಳು,ನೆಲ್ಲಿ ಹಚ್ಚಿಕೂಂಡು ಸ್ನಾನ ಮಾಡಬೇಕು)

ಗಂಗಾ ಗಂಗೇತಿ ಯೋ ಭ್ರೂಯಾತ ಯೋಜನಾನಾಂ ಶತೈರಪಿ | ಮುಚ್ಚ್ಯತೆ ಸರ್ವ ಪಾಪೃಸ್ಚ ವಿಷ್ಣುಲೋಕಂ ಸ ಗಚ್ಚತಿ||

ಹೀಗೆ ಗಂಗೆಯನ್ನು ಪ್ರಾರ್ಥಿಸಿ ಗಂಧಾದಿಗಳಿಂದಾ ಪೂಜಿಸಿ ಅರ್ಘ್ಯವನ್ನು ಕೂಡಬೇಕು.

ಕಶ್ಯಪಾಯ ನಮ: ಇದಮರ್ಘ್ಯಂ ಸಮರ್ಪಯಾಮಿ.
ಅತ್ರೆಯೇ ನಮ: " "
ವಿಶ್ವಾಮಿತ್ರಾಯನಮ: " "
ಗೌತಮಾಯನಮ: " "
ಜಮದಗ್ನಯೇನಮ; " "
ವಶಿಷ್ಟಾಯನಮ: " "
ಅರುಂಧತ್ತೈಯೇನಮ" " "

ಎಲ್ಲ ವರ್ಣದ ಸ್ತ್ರೀಯರು ಪವಿತ್ರ್ ಜಲದಲ್ಲಿ ಮೇಲಿನ ವಿಧಿಯಿಂದಾ ಸ್ನಾನ ಮಾಡಿ ಮನೆಗೆ ಬರಬೇಕು. ಗೋಮಯದಿಂದಾ ಸಾರಿಸಿ ರಂಗವಲ್ಲಿಯನ್ನು ಹಾಕಿ ಮಂಡಲ ಮಾಡಿ ಮಂಟಪವನ್ನು ತಯ್ಯಾರಿಸಬೇಕು. ತಾಮ್ರದ/ಮಣ್ಣಿನ ಕೂಡದಲ್ಲಿ ನೀರು ತುಂಬಿ ಕಲಶ ಸ್ತಾಪನೆ ಮಾಡಬೆಕು ಅದರಲ್ಲಿ ಸಪ್ತಋಷಿಗಳನ್ನು ಆವಾಹಿಸಿ, ವಸ್ತ್ರ,ಹಾರ, ಗಂಧ, ಪುಷ್ಪ, ಧೂಪ ದೀಪ,ನೇವೈದ್ಯಗಳೂಂದಿಗೆ ಷೂಡಷೂಪಚಾರಗಳಿಂದಾ ಪೂಜಿಸಬೇಕು.
ನಂತರ ಆಚಾರ್ಯರಿಗೆ ತಾಂಬೂಲ ವಸ್ತ್ರ ದಕ್ಷೀಣಾದಿಗಳೂಂದಿಗೆ ವಾಯನದಾನವನ್ನು ಕೂಡಬೇಕು.ಹಾಗು ವೃತಕತೆಯನ್ನು ಕೇಳಬೇಕು. ಅಂದು ಸ್ತ್ರೀಯರು ಉಪವಾಸವಿರಬೇಕು.
 
 

No comments:

Post a Comment