Monday, November 19, 2012

ಶ್ರೀ ಮಧ್ವ ಮತದ ವೈಶಿಷ್ಟ್ಯ


ಶ್ರೀ ಮಧ್ವ ಮತದ ವೈಶಿಷ್ಟ್ಯ

 ಶ್ರೀ ಮಧ್ವಮತವು ಅತ್ಯಂತ ಶ್ರೇಷ್ಠವಾದುದು. ಅದಕ್ಕೆ ಸಮನಾದ ಇನ್ನೊಂದು ಮತವಿಲ್ಲ. ಮೊದಲ ಬಾರಿ ಬದರಿಕಾಶ್ರಮಕ್ಕೆ ತೆರಳುವಾಗ ಶ್ರೀ ಮಧ್ವಾಚಾರ್ಯರು ಶಿಷ್ಯರಿಗೆ ಇತ್ತ ಸಂದೇಶದಲ್ಲಿ ಈ ಮಾತು ಬಂದಿದೆ - `ನಾಸ್ಮದುಕ್ತಿ ಸದೃಶಂ ಹಿತರೂಪಂ` ನಮ್ಮ ಮಾತಿನಂತಹ ಹಿತನುಡಿ ಬೇರೊಂದಿಲ್ಲ ಎಂಬುದಾಗಿ. ಇದನ್ನು ಸಮಥರ್ಿಸಲು ಅನಂತ ಸಾಧಕಗಳನ್ನು ಹೇಳಬಹುದು.
 ಲೋಕದಲ್ಲಿ ಪ್ರಚಲಿತವಿರುವ ಅನೇಕ ಮತಗಳು ಕೇವಲ ಒಂದು ಬಗೆಯ ನಂಬಿಕೆಯ - ಶ್ರದ್ಧೆಯ-ಆಧಾರದ ಮೇಲೆ ನಿಂತಿವೆ. ಅವಕ್ಕೆ ಯಾವ ಭದ್ರ ತಳಹದಿಯೂ ಇಲ್ಲ. ವಿಚಾರದ ಒರೆಗಲ್ಲಿಗೆ ಅವು ನಿಲ್ಲುವುದಿಲ್ಲ. ಆಗಮದ ಮೂಲವಿಲ್ಲ. ಪ್ರತ್ಯಕ್ಷದ ಬಲವಿಲ್ಲ. ಆದುದರಿಂದ ಅಂತಹ ಮತಗಳಿಗೆ ಪಾಷಂಡ ಮತಗಳೆಂದು ಶಾಸ್ತ್ರಗಳಲ್ಲಿ ನಾಮಕರಣ ಮಾಡಲಾಗಿದೆ. ಶ್ರೀ ಮಧ್ವಮತವು ಹಾಗಲ್ಲ. ಅಂಧಶ್ರದ್ಧೆಯ ಮೇಲೆ ಕೇವಲ ಮೂಲ ಪುರುಷನ ಮೇಲಿನ ಮಮತೆಯ ಮೇಲೆ ನೆಲೆ ನಿಂತುದಲ್ಲ. ಅದಕ್ಕೆ ವೇದಗಳ ಮೂಲವಿದೆ. ಯುಕ್ತಿಗಳ ಶಕ್ತಿಯಿದೆ. ಪ್ರತ್ಯಕ್ಷದ ಪಕ್ಷಪಾತವಿದೆ. ಹೀಗೆ ಯುಕ್ತಿ, ಪ್ರತ್ಯಕ್ಷ ಮತ್ತು ವೇದ ಇವುಗಳಿಗೆ ಸಮ್ಮತವಾದ ಮತವು ಶ್ರೀಮಧ್ವಮತ ಬಿಟ್ಟರೆ ಬೇರೊಂದಿಲ್ಲ. ಇದೇ ಮಧ್ವಮತದ ವೈಶಿಷ್ಟ್ಯ.
 ಶ್ರೀಮಧ್ವಮತವು ಕೇವಲ ಸಾಮಾನ್ಯರ ಮತವಲ್ಲ. ಸಮಸ್ತ ಜೀವರಾಶಿಗಳಲ್ಲಿ ಶ್ರೇಷ್ಠರಾದ ಋಜುಜೀವರ ಜೀವೋತ್ತಮರ ಮತವಿದು. ಬ್ರಹ್ಮಸೂತ್ರಗಳಲ್ಲಿ `ಶ್ರೇಷ್ಠಶ್ಚ` `ಅನ್ಯತ್ರ ಶ್ರೇಷ್ಠಾತ್` ಎಂದು ಮುಖ್ಯಪ್ರಾಣದೇವರಿಗೆ ಶ್ರೇಷ್ಠ ಎಂಬ ನಿದರ್ೇಶವಿದೆ. ಈ ಶ್ರೇಷ್ಠರ ಮತವು ಶ್ರೇಷ್ಠವೇ ಆಗಬೇಕಲ್ಲವೇ? ಆದುದರಿಂದಲೇ ಮಹನೀಯರಾದ ಶ್ರೀ ವಾದಿರಾಜ ಸ್ವಾಮಿಗಳು ` ಏನು ಶಪಥವ ಮಾಡಲೀ ಮತವು ಹಿರಿಯದೆಂದು` ಎಂದು ಆಹ್ವಾನಿಸಿದ್ದಾರೆ. ಜೀವೋತ್ತಮರ ಮಾತು ಎಂದೂ ಸುಳ್ಳಲ್ಲ. ಅವರ ಮನಸ್ಸು ಎಂದೂ ಅಡ್ಡಡ್ಡ ಹೋಗುವುದಿಲ್ಲ. ಕಾರಣವೇನು ಗೊತ್ತೇ? ಯಾವಾಗಲೂ ಸಂಭ್ರಮದಿಂದ ತುಂಬಿದ ಮನದಿಂದ ಮಂಗಳಮಯನಾದ ಶ್ರೀಹರಿಯನ್ನು ತಮ್ಮ ಹೃದಯದಲ್ಲಿ ಧರಿಸಿಕೊಂಡಿರುತ್ತಾರೆ ಆ ಜೀವೋತ್ತಮರು.
 ` ನಭಾರತಿಮಂಗಮೃಷೋಪಲಕ್ಷ್ಯತೇ ನ ಕಹರ್ಿಚಿನ್ಮೇ ಮನಸೋಮೃಷಾಗತಿಃ |
 ನ ಮೇ ಹೃಷಿಕಾಣಿ ಪತಂತ್ಸ ಸತ್ ಯನ್ನೇ ಹೃದೌತ್ಕಂಠ್ಯವತಾ ಧೃತೇ ಹರಿಃ` (ಶ್ರೀ ಭಾಗವತ)

ಅಂದ ಮೇಲೆ ಈ ಜೀವೋತ್ತಮರ, ಶ್ರೀ ಮಧ್ವಮುನಿಗಳ ಮತವು ಹೇಗೆ ಹುಸಿಯಾದೀತು? ಜೊಳ್ಳಾದೀತು? ಪೊಳ್ಳಾದೀತು? ಇಷ್ಟು ಮಾತ್ರವಲ್ಲ ಇವರ ಮತವೇ ಶ್ರೀಹರಿಯ ಮತವು. ಆದುದರಿಂದಲೇ ದೊಡ್ಡವರಾದ ದಾಸರಾಯರು `ಹನುಮನ ಮತವೇ ಹರಿಯ ಮತವು. ಹರಿಯ ಮತವೇ ಹನುಮನ ಮತವು` ಎಂದು ಹಾಡಿರುವರು. ಹರಿಯ ಮತವೇ ಇದಾದ ಮೇಲೆ ಇನ್ನೇನು ಬೇಕು ಇದು ಶ್ರೇಷ್ಠವೆಂಬುದಕ್ಕೆ?

 ಈ ಮತದಂತೆ ಆಚರಿಸಬೇಕಾದ ಸಾಧನಗಳೂ ಶುದ್ಧ. ದೊರೆಯುವ ಫಲಗಳು ಶುದ್ಧ. ಇನ್ನು ಸಾಧನಗಳ ಸಂಗ್ರಹ ನೋಡಿದರೆ ಅವುಗಳೂ ಇನ್ನೂ ಶುದ್ಧ. ಅವುಗಳೆಂದೆರೆ ವೈರಾಗ್ಯ, ಶಮ, ದಮಾದಿಗಳು, ಗುರುಸೇವೆ, ಅಧ್ಯಯನ, ಶ್ರವಣ, ಮನನಗಳು, ಯಥಾ ಯೋಗ್ಯ ಗುರುಭಕ್ತಿ, ಉಚ್ಚ ಹರಿಭಕ್ತಿ, ಅಧಮರಲ್ಲಿ ದಯೆ, ಸಮರಲ್ಲಿ ಸ್ನೇಹ, ಉತ್ತಮರಲ್ಲಿ ಭಕ್ತಿ. ನಿಷ್ಕಾಮಕಮರ್ಾನುಷ್ಠಾನ, ನಿಷಿದ್ಧ ವರ್ಜನ, ಪಂಚಭೇದಜ್ಞಾನ, ತಾರತಮ್ಯ ಜ್ಞಾನ, ಅಯೋಗ್ಯರ ಸಂಗತ್ಯಾಗ, ಶ್ರೀಹರಿಯ ಉಪಾಸನೆ, ಸರ್ವ ಸಮರ್ಪಣೆ ಮತ್ತು ಶರಣಾಗತಿ ಈ ಸಾಧನಗಳು ಎಷ್ಟು ಶುದ್ಧವಾಗಿವೆ. ಪ್ರತಿಯೊಂದು ಪರಮ ಪವಿತ್ರ ಮಂಗಳಕರ. ಇನ್ನೂ ಫಲವೂ ಹಾಗೆಯೇ. ಭಗವಂತನ ಅನುಗ್ರಹ, ಸಾಕ್ಷಾತ್ಕಾರ, ಪರಮ ಪ್ರಸಾದ, ಪರಂಧಾಮವಾದ ವೈಕುಂಠಾದಿಗಳ ಪ್ರಾಪ್ತಿ, ಯಾವುದರಲ್ಲಿ ಜರಾ, ಮರಣ, ಹಸಿವು, ನೀರಡಿಕೆ, ಚಿಂತೆ, ಸಂತಾಪ, ಹೆಚ್ಚೇನು ಹಿಗ್ಗು, ಕುಗ್ಗುಗಳು (ವೃದ್ಧಿ, ಹ್ರಾಸ) ಕೂಡಾ ಇಲ್ಲವೋ ಅಂತಹ ಉತ್ತಮ ಸ್ಥಿತಿ, ಆಮೋದ, ಪ್ರಮೋದ, ವಿನೋದ, ಉತ್ಸಾಹ, ಉಲ್ಲಾಸ, ಸಂಕಲ್ಪ ಮಾತ್ರದಿಂದ ಲಭ್ಯವಾಗುವ ಸವರ್ಾರ್ಥಸಿದ್ಧಿ, ನಿರಂತರ ಆನಂದಭೋಗ, ಎಂದಿಗೂ ಅಲ್ಲಿಂದ ಮರಳದಂತಹ ಶಾಶ್ವತಸ್ಥಾನ. ಇನ್ನೂ ಈ ಫಲಗಳ ವರ್ಣನೆ ಬೇಕಾದಷ್ಟು ಮಾಡಬಹುದು. ಈ ಫಲಗಳ ಬಗ್ಗೆ ಶ್ರೀ ವಾದಿರಾಜ ಸ್ವಾಮಿಗಳವರು ವೈಕುಂಠವರ್ಣನೆ ಎಂಬ ಗ್ರಂಥವನ್ನೇ ಬರೆದಿರುವರು.

 ಶ್ರೀಮಧ್ವಮತದಲ್ಲಿ ಹೀಗಿದ್ದರೆ ಇತರ ಮತಗಳಲ್ಲಿ ನೋಡಿ. ಸಾಧನಗಳು ಪ್ರಾಯಃ ದುರಾಚಾರ, ವಾಮಾಚಾರಗಳೇ. ಶಾಕ್ತ, ಶಾಂಭವ ಮುಂತಾದ ಮತಗಳಲ್ಲಿಯ ಸಾಧನಗಳನ್ನು ನೆನೆದರೆ ಒಮ್ಮೆ ಜುಗುಪ್ಸೆಯುಂಟಾದರೆ, ಇನ್ನೊಮ್ಮೆ ರೋಮಾಂಚನವಾಗುತ್ತದೆ. ಇತರ ಮತಗಳಲ್ಲಿಯ ಫಲಗಳೂ ಅರ್ಥಕ್ಕಿಂತ ಅನರ್ಥಗಳೇ. ಯಾವುದಕ್ಕೂ ಸದ್ಗತಿ ಯಿಲ್ಲ. ಈ ಕಾರಣದಿಂದಲೂ ಶ್ರೀ ಮಧ್ವಮತವು ವಿಶಿಷ್ಟವಾಗಿದೆ.

 ಶ್ರೀಮಧ್ವಮತವು ಒಂದು ಸಮಗ್ರ ದರ್ಶನ(ಶಾಸ್ತ್ರ)ವಾಗಿದೆ. ಏಕದೇಶೀಯ, ಏಕಪಕ್ಷೀಯ ದೃಷ್ಟಿಯದಲ್ಲ. ಕರ್ಮ, ಜ್ಞಾನ, ವೈರಾಗ್ಯ, ಭಕ್ತಿ ಹೀಗೆ ಅಗ್ರಸ್ಥಾನ ಪಡೆದಿರುವ ಸಾಧನಗಳಲ್ಲಿ ಒಂದೊಂದನ್ನೇ ಅವಲಂಬಿಸಿ ಮತಗಳೂ, ಪಂಥಗಳೂ ಹೊರಟಿವೆ. ತಮ್ಮ ತಮ್ಮದೇ ಹೆಚ್ಚಿನದೆನ್ನುವ ಘರ್ಷಣೆ ಬೇರೆ. ಹೀಗಿರುವಾಗ ಮೇಲೆ ಹೇಳಿದ ಸಾಧನಗಳೆಲ್ಲವನ್ನೂ ಒಂದು ಸೂತ್ರದಲ್ಲಿ ಹೊಂದಿಸಿ ಸಮನ್ವಯ ಸಾಧಿಸಿದ ಹೆಗ್ಗಳಿಕೆ ಶ್ರೀಮಧ್ವಮತಕ್ಕಿದೆ. ಇವುಗಳಲ್ಲಿ ಯಾವುದನ್ನೂ ಬಿಟ್ಟರೂ ನಡೆಯುವುದಿಲ್ಲ. ಜೀವನದ ಸಾಫಲ್ಯಕ್ಕೆ ಎಲ್ಲಾ ಸಾಧನಗಳೂ ಅವಶ್ಯ ವಾಗಿವೆ. ಯಥೋಚಿತವಾಗಿ ಅವುಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ಸಮಗ್ರದೃಷ್ಟಿ, ಈ ಮತದಲ್ಲಿ ಇದೆ. ಇದೇ ಈ ಮತದ ವೈಶಿಷ್ಟ್ಯ

 ದೇವತೆಗಳ ವಿಷಯದಲ್ಲಿಯೂ ಹೀಗೆ ಅನೇಕಾನೇಕ ದೇವತೆಗಳನ್ನು ನಂಬಿರುವ ಭಾರತೀಯರಲ್ಲಿ ಆಯಾ ಆಯಾ ದೇವತೆಗಳನ್ನು ಅವಲಂಬಿಸಿ ಪ್ರವೃತ್ತವಾಗಿರುವ ಅನೇಕ ಮತಗಳಿವೆ. ಹೀಗಾಗಿ ದೇವತೆಗಳ ವಿಚಾರದಲ್ಲಿ ಗೊಂದಲ, ತಾಕಲಾಟ ಬಹಳ. ಎಲ್ಲರೂ ಏಕದೇಶದೃಷ್ಟಿಯುಳ್ಳವರೇ. ಇನ್ನೊಂದು ದೇವತೆಗೆ ಸರಿಯಾದ ಸ್ಥಾನ ಗೊತ್ತುಪಡಿಸಿ ಎಲ್ಲವನ್ನೂ ಸರಿಹೊಂದಿಸಿ ಸಮಾಧಾನಪಡಿಸುವವರೇ ಇಲ್ಲ. ಹೀಗಿರುವಾಗ ಎಲ್ಲಾ ದೇವತೆಗಳ ವಿಷಯದಲ್ಲಿಯೂ ಪ್ರಮಾಣಪುರಸ್ಸರವಾಗಿ ಅಸಂದಿಗ್ಧರೀತಿಯಲ್ಲಿ ಸ್ಥಾನಮಾನಗಳನ್ನು ಖಚಿತಗೊಳಿಸಿ ಸರ್ವದೇವತಾಸಮನ್ವಯವನ್ನು ಸಮರಸರೀತಿಯಲ್ಲಿ ಸಾಧಿಸಿದ ಘನತೆಯು ಸಮಗ್ರದೃಷ್ಟಿಯ ಶ್ರೀಮಧ್ವಮತಕ್ಕೆ ಮಾತ್ರ ಇದೆ. ಇಲ್ಲಿ ಯಾವ ದೇವತೆಗಳನ್ನೂ ಕೈಬಿಡಲಾಗಿಲ್ಲ. ಎಲ್ಲರಿಗೂ ಯಥೋಚಿತ ಮಾನ ಮಯರ್ಾದೆ ವ್ಯವಸ್ಥಿತವಾಗಿದೆ. ಇದರಿಂದಲೂ ಶ್ರೀ ಮಧ್ವಮತಕ್ಕೆ ವೈಶಿಷ್ಟ್ಯವಿದೆ.

 ವೇದಗಳ ವಿಷಯದಲ್ಲಿಯೂ ದರ್ಶನಕಾರರ ಅಭಿಪ್ರಾಯ ಒಂದೇ ಆಗಿಲ್ಲ. ವಿವಿಧ ವಿಷಯಗಳನ್ನು ನಿರೂಪಿಸುವ ವೇದಗಳಲ್ಲಿ ಏಕವಾಕ್ಯತೆಯನ್ನು ಕಾಣುವುದು ದುಷ್ಕರವಾಯಿತು. ಅಪರಿಹಾರ್ಯವೇನೋ ಎಂಬಂತೆ ವೇದಗಳನ್ನು ಭಾಗ ಮಾಡಲಾಯಿತು. ಕರ್ಮಕಾಂಡ, ಬ್ರಹ್ಮಕಾಂಡ, ಉಪನಿಷತ್ತು ಎಂಬ ಭೇದವನ್ನು ಕಲ್ಪಿಸಲಾಯಿತು. ಆದರೆ ಸಮಗ್ರ ದೃಷ್ಟಿಯಿಂದ ಶ್ರೀಮಧ್ವಮತವು ಇದನ್ನು ಒಪ್ಪಲಿಲ್ಲ. ಇಡೀ ವೇದವು ಬ್ರಹ್ಮನಿಷ್ಠ - ಪರಮಾತ್ಮ ವಿಷಯಕ ಎಂದು ಅದು ಸಾರಿತು. ವೇದಗಳು ಪರಮ ಮುಖ್ಯವಾಗಿ ಪರಮಾತ್ಮನನ್ನೇ ಹೇಳುತ್ತವೆ. ಮುಖ್ಯವಾಗಿ ಕಮರ್ಾದಿಗಳನ್ನು ಹೇಳಿದರೂ ಪರಬ್ರಹ್ಮನ ಪ್ರೀತ್ಯರ್ಥವಾಗಿ ಅವುಗಳನ್ನು ಹೇಳಿರುವುದರಿಂದ ಪರಮಾತ್ಮನಲ್ಲಿಯೇ ಪರಮ ತಾತ್ಪರ್ಯವನ್ನು ಹೊಂದಿರುತ್ತವೆ. ಹೀಗೆ ಸಕಲ ವೇದಗಳಿಗೂ ಒಂದೇ ಉದ್ದೇಶ, ಒಂದೇ ವಿಷಯ, ಒಂದೇ ಮುಖ್ಯಾರ್ಥ. ಆದುದರಿಂದ ಎಲ್ಲಾ ವೇದಗಳಲ್ಲಿಯೂ ಧೃಡವಾದ ಏಕವಾಕ್ಯತೆ ಇದೆ. ಇದನ್ನು ಘೋಷಿಸಿದ ಪರಮ ವೈದಿಕ ಶಿಖಾಮಣಿ ಶ್ರೀ ಮಧ್ವಮುನಿಗಳ ಮತವು ಶ್ರೇಷ್ಠವಾಗದೇ ಇರುವುದು ಹೇಗೆ?

 ದೇವರ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಬಗೆಯಾಗಿ ವರ್ಣನೆ ಮಾಡುವುದನ್ನೂ ನೀವು ಕೇಳಿರಬಹುದು, ದೇವರಿಲ್ಲ ಎಂದು ವಾದಿಸುವ ನಾಸ್ತಿಕರನ್ನು ಬಿಡಿರಿ. ದೇವರ ಅಸ್ಥಿತ್ವವನ್ನು ಒಪ್ಪಿರುವ ಮತಗಳಲ್ಲಿಯೂ ದೇವರ ಕಲ್ಪನೆ ವಿಧ-ವಿಧವಾಗಿದೆ. ದೇವರು ಜಗತ್ತಿಗೆ ಕಾರಣನೇ ಅಲ್ಲ. ಅವನು ಉದಾಸೀನನೆಂದು ಕೆಲವರು ಹೇಳುವರು. ಕಾರಣವೆಂದು ಹೇಳುವ ಬೇರೊಬ್ಬರು ದೇವರಿಗೆ ಜಗತ್ತಿನ ರೂಪದಲ್ಲಿ ಪರಿಣಾಮವಾಗುವನೆಂದು ತಿಳಿಸುವರು. ನಿಮಿತ್ತ ಕಾರಣನೆಂದು ಹೇಳುವ ಮತ್ತೊಬ್ಬರು. ದೇವರಿಗೆ ಕೆಲವೇ ಗುಣಗಳಿವೆಯೆಂದು ವಾದಿಸುವರು. ದೇವರಿಗೆ ವಿಗ್ರಹವಿದೆಯಂದು ಕೆಲವರು, ಇಲ್ಲವೆಂದು ಕೆಲವರು, ಇನ್ನಬ್ಬರಂತೂ ಬೇರೆ ರೀತಿಯ ಕಲ್ಪನೆ ಮಾಡಿರುವರು. ಅವರಂತೆ ದೇವರು ನಿಗರ್ುಣ, ನಿರಾಕಾರ, ವೇದಗಳಲ್ಲಿ ಅಸಂಖ್ಯವಾದ ವಣರ್ಿತವಾದ ಗುಣಗಳ ಬಗ್ಗೆ ಏನು ಮಾಡುವುದು ಎಂದು ಯೋಚಿಸಿ ಅವರುಗಳು ಅದಕ್ಕಾಗಿಯೇ ಒಬ್ಬ ಸಗುಣಬ್ರಹ್ಮನನ್ನು ಸೃಷ್ಟಿಮಾಡಿರುವರು. ಹೀಗೆ ಅವರ ಪ್ರಕಾರ `ಸಗುಣಬ್ರಹ್ಮ ನಿಗರ್ುಣಬ್ರಹ್ಮ ಎಂದು ಎರಡು ದೇವರುಗಳು. ಅದರಲ್ಲಿಯೂ ಸಗುಣ ಬ್ರಹ್ಮ ಮಾಯಾಮಯವಾದುದರಿಂದ ಮಿಥ್ಯಾ, ಅವಾಚ್ಯ, ಅಜ್ಞೇಯ. ಆದರೆ ನಿಗರ್ುಣ ಬ್ರಹ್ಮ ಮಾತ್ರ ಸತ್ಯ` ಎಂಬುದಾಗಿ ಹೇಳುವರು ಅವರು. ಇತರ ಮತೀಯರೂ ಹೀಗೆ ನಿರಾಕಾರ, ನಿರೀಹ ದೇವರ ಕಲ್ಪನೆಯಲ್ಲಿರುವರು. ಅಂತೂ ಯಾರೂ ಸಮಂಜಸವಾಗಿ ನಿದರ್ುಷ್ಟವಾದ ಸವರ್ೋತ್ತಮನಾದ ದೇವರ ಪರಿಚಯ ಮಾಡಿಕೊಟ್ಟಿಲ್ಲವೆಂಬುದು ಸೂಕ್ಷ್ಮವಾಗಿ ಪರಿಶೀಲಿಸುವವರಿಗೆ ಗೊತ್ತಾಗದಿರದು. ಶ್ರೀಮಧ್ವಮತವೊಂದು ಮಾತ್ರ ದೋಷಲೇಶವಿಲ್ಲದ ಸವರ್ೋತ್ಕೃಷ್ಟನಾದ ದೇವರ ಯಥಾರ್ಥ ಚಿತ್ರವನ್ನು ತೋರಿಸಿ ಸುಜನರ ಉದ್ಧಾರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಮತದಲ್ಲಿ ಬ್ರಹ್ಮದ್ವೈವಿಧ್ಯವಿಲ್ಲ. ವೇದಗಳಲ್ಲಿ ಎಷ್ಟು ಸಮಂಜಸತೆ ಬೇಕೋ ಅಷ್ಟನ್ನೆಲ್ಲ ಶ್ರೀಮಧ್ವಮತವು ಸಾರುತ್ತದೆ. ಇದು ಈ ಮತದ ವೈಶಿಷ್ಟ್ಯ.

 ಇದರಂತೆಯೇ ಇದ್ದುದನ್ನು ಇದ್ದಂತೆಯೇ ಹೇಳುವ ಪ್ರಾಮಾಣಿಕತನದ ಮತವಾಗಿದೆ ಈ ಮಧ್ವಮತ. ಇಲ್ಲ ಯಾವ ಸಂಕೋಚಕ್ಕೆ ಅಥವಾ ಅಭಿರುಚಿಗೆ ಎಡೆ ಇಲ್ಲ. ಪ್ರತಿಯೊಂದು ವಿಷಯದಲ್ಲಿಯೂ ಯಥಾರ್ಥವಾದ ವಿವೇಚನೆ ಕೊಡುವುದರಲ್ಲಿಯೇ ಆಸಕ್ತಿ ಈ ಮತಕ್ಕೆ. ಜೀವರಲ್ಲಿಯ ಅನಾದಿ ಯೋಗ್ಯತೆ, ತಾರತಮ್ಯ ಮುಂತಾದ ವಿಷಯಗಳು ಈ ಮಾತಿಗೆ ಸಾಕ್ಷಿಯಾಗಿವೆ. ಈ ಕಾರಣದಿಂದ ದರ್ಶನಗಳಲ್ಲಿ ಈ ಮತಕ್ಕೆ ವಿಶಿಷ್ಟವಾದ ಸ್ಥಾನವಿದೆ.
 ` ತೇನ ವಿನಾ ತೃಣಮಪಿ ನ ಚಲತಿ ` ಎಂಬ ಸಿದ್ಧಾಂತದ ಬಲವಾದ ಸಮರ್ಥಕವಾಗಿದೆ ಶ್ರೀಮಧ್ವಮತ. ಪರಮಾತ್ಮನ ಅನುಗ್ರಹವಿಲ್ಲದೇ ಯಾವುದೂ ಸಾಧ್ಯವಿಲ್ಲ. ಎನು ಮಾಡಲಿಕ್ಕೂ ಆಗುವುದಿಲ್ಲ. ಆದುದರಿಂದ ಭಗವದನುಗ್ರಹ ಸರ್ವತ್ರ ಬೇಕೇ ಬೇಕು ಎಂದು ಅದು ಸಾರುತ್ತದೆ. ಇತರ ಮತಗಳಲ್ಲಿ ಮಹಾಫಲವಾದ ಮೋಕ್ಷ ಕೂಡಾ ತಂತಾನೇ ಆಗಿಬಿಡುವುದು. ಅಲ್ಲಿ ಪರಮಾತ್ಮನ ಪ್ರಸಾದದ ಅಪೇಕ್ಷೆ ಇಲ್ಲ ಎಂದು ಭಗವಂತನನ್ನೇ ಕಡೆಗಣಿಸಲಾಗಿದೆ. ಆದರೆ ಶ್ರೀ ಮಧ್ವಮತದ ಪ್ರಕಾರ ಅಜ್ಞಾನಿಗಳಿಗೆ ಜ್ಞಾನ ಬರುವುದು ಶ್ರೀಹರಿಯ ಕೃಪೆಯಿಂದ. ಜ್ಞಾನಿಗಳಾದವರು ಮೋಕ್ಷವನ್ನು ಪಡೆಯುವುದು ಅವನ ಪ್ರಸಾದದಿಂದಲೇ. ಮುಕ್ತರಾದವರು ಮಹಾ ಮಹಾ ಆನಂದಾದಿ ಭೋಗಗಳನ್ನು ಅನುಭವಿಸುವುದು ಆ ಶ್ರೀಶನ ಪರಮಾನುಗ್ರಹದಿಂದಲೇ. ಹೀಗೆ ಭಗವದನುಗ್ರಹವು ಸಕಲಕ್ಕೂ ಮೂಲ. ಇದು ಎಲ್ಲರಿಗೂ ಸಂಬಂಧಿಸಿದಂತೆ ಆಯಿತು. ವಿಶೇಷವಾಗಿ ಹೇಳುವುದಾದರೆ ವಿಶೇಷಜ್ಞರಿಗೆ ಈ ಭಗವತ್ಪೀತಿಯೇ ಮಹಾಫಲ, ಅದುವೇ ಗುರಿ, ಅದುವೇ ಸರ್ವಸ್ವ, ಅಂತಹವರಿಗೆ ಮೋಕ್ಷಾದಿಗಳು ಕೂಡಾ ಆ ಭಗವಂತನ ಸನ್ನಿಧಿಯಲ್ಲಿ ಇರಲು ಅವನ ನಿರಂತರ ಪ್ರಸಾದ ಅನುಭವಿಸಲು ಉಪಾಯವಾಗಿವೆ ಅಷ್ಟೇ. ಆದುದರಿಂದಲೇ ಸರ್ವತ್ರ `ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯಥ್ರ್ಯಂ` ಎಂಬುದು ಮಾಧ್ವ ವೃಂದದ ಮನೆ ಮಾತಾಗಿಬಿಟ್ಟಿದೆ. ಇದು ಈ ಮತದ ಸ್ಪಷ್ಟವಾದ ವೈಶಿಷ್ಟ್ಯ.

 ಇಂತಹ ಪರಮಾತ್ಮನ ಪ್ರಸಾದದಿಂದ ಲಭಿಸುವ ಮೋಕ್ಷವು ಜೀವರ ಸ್ವರೂಪಾವಿಭರ್ಾವರೂಪವಾಗಿದೆ. ಮೋಕ್ಷವು ಆಗುಂತಕವಲ್ಲ ಎಂದರೆ ಹೊರಗಿನಿಂದ ಬೇರೆ ಹೊಸದೊಂದು ಏನಾದರೂ ಬಂದು ಸೇರುವುದಲ್ಲ. ಮೋಕ್ಷವೆಂದರೆ ದೇವರೊಡನೆ ಜೀವರಿಗೆ ಐಕ್ಯವೆಂದಲ್ಲ, ಜೀವರು ಎಂದೂ ದೇವರು ಆಗಲಾರರು. ಬ್ರಹ್ಮ-ರುದ್ರಾದಿ ದೇವತೆಗಳೂ, ಅಷ್ಟೇ ಏಕೆ! ಶ್ರೀ ಮಹಾಲಕ್ಷ್ಮೀಯೂ ಕೂಡಾ ಪಡೆಯಲು ಸರ್ವಥಾ ಅಶಕ್ಯವಾದುದು ಆ ಪರಮಾತ್ಮನ ಪದವಿ. ಆದುದರಿಂದ ಜೀವರು ತಮ್ಮ ತಮ್ಮ ಯೋಗ್ಯತಾನುಸಾರ ಪೂರ್ಣರಾಗಿ ಸ್ವಸ್ವರೂಪವಾದ ಆನಂದಾದಿಗಳನ್ನು ಸವಿಯುವರು. ಸುಳ್ಳು ಸುಳ್ಳಾದ, ಭ್ರಾಮಕವಾದ ಮಾತುಗಳನ್ನು ಬದಿಗೆ ಸರಿಸಿ, ಈ ಪ್ರಕಾರ ಜೀವರಿಗೆ ನಿಜವಾಗಿ ಆಗುವ ಫಲವೇನೆಂಬುದನ್ನು ಯಥಾವತ್ತಾಗಿ ನಿರೂಪಿಸುವುದು ಈ ಮತದ ವೈಶಿಷ್ಟ್ಯ ವಾಗಿದೆ.

 ಕರ್ಮಗಳ ವಿಚಾರದಲ್ಲಿಯೂ ಅಷ್ಟೇ. ಯಾವಾಗಲೂ ಶುದ್ಧವಾದ ನಿಷ್ಕಾಮ ಕರ್ಮಕ್ಕೆ ಪ್ರಾಶಸ್ತ್ಯ ಕೊಟ್ಟಿದೆ ಈ ಮತ. ಸಕಾಮವಾಗಿ ಮಾಡುವ ಕರ್ಮಗಳ ಕಡೆಗೆ ಇತರ ಮತಗಳು ಎಳೆದುಕೊಂಡು ಹೋಗುವವು. ಆದರೆ ಅದಕ್ಕೆ ಕಲಂಕ ಹಚ್ಚಬಾರದು. ಫಲಾಭಿಲಾಷೆ ಮತ್ತು ಫಲದ ಭರವಸೆ ಮನೋರಂಜಕವಾದುದೇನೋ ಸರಿ. ಆದರೆ ಅದರಿಂದ ಪುನಃ ಸಂಸಾರದ ಬಂಧನ ಹೆಚ್ಚೆಚ್ಚು ಆಗುವುದು. ಆದುದರಿಂದ ಮುಕ್ತಿ ಬಯಸುವವರಿಗೆ ಅದು ಪ್ರತಿಗಾಮಿ ಸ್ವರೂಪದ್ದಾಗುವುದು. ಇನ್ನು ಕರ್ಮ ಬಿಟ್ಟಿರುವುದಂತೂ ದೇಹಧಾರಣ ಮಾಡಿರುವವರಿಗೆ ಅಸಂಭವ. ವಿಹಿತ ಕರ್ಮ ಬಿಡುವುದರಿಂದ ಅನರ್ಥವೂ ಆಗುವುದು. ಆದುದರಿಂದ ನಿಷ್ಕಾಮಕರ್ಮ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ಮಾರ್ಗದರ್ಶನ ಮಾಡಿರುವುದೇ ಶ್ರೀ ಮಧ್ವಮತದ ವೈಶಿಷ್ಟ್ಯವಾಗಿದೆ.

 ಈ ಜಗತ್ತನ್ನು ಭಗವಂತ ಏಕೆ ನಿಮರ್ಿಸಿದ? ಉದ್ದೇಶವೇನು? ಫಲವೇನು? ಈ ಪ್ರಪಂಚದಲ್ಲಿ ಇರುವ ವ್ಯಕ್ತಿಗಳು ಹಾಗೂ ಪದಾರ್ಥಗಳು ಒಂದೇ ಬಗೆಯಾಗಿರದೇ ಚಿತ್ರ ವಿಚಿತ್ರವಾಗಿರುವುದೇಕೆ? ಇವೇ ಮೊದಲಾದ ಪ್ರಶ್ನೆಗಳು ವಿಶ್ವದ ಮಹತ್ತರ ಒಗಟುಗಳಾಗಿವೆ. ಇವುಗಳ ಗೊಡವೆಗೆ ಹೋಗದೇ ಅದೆಷ್ಟೋ ಮತಗಳು ದೂರದ ದಾರಿಯಿಂದ ಸಾಗಿಹೋಗಿವೆ. ಇವುಗಳನ್ನು ಬಿಡಿಸಲು ಯತ್ನಿಸಿ ಎಷ್ಟೋ ಮತಗಳು ಅಯಶಸ್ವಿಯಾಗಿವೆ. ಶ್ರೀ ಮಧ್ವಮತವೊಂದೇ ಸಮರ್ಪಕ ಉತ್ತರವನ್ನು ಇತ್ತ ಮತವಾಗಿದೆ.

 ಭಗವಂತನು ಪೂರ್ಣನು, ಆಪ್ತಕಾಮನು. ಅವನಿಗೆ ಸ್ವಂತಕ್ಕೆ ಆಗಬೇಕಾದುದೇನೂ ಇಲ್ಲ. ಹೀಗಿದ್ದರೂ ಅವನು ಮಾಡುವ ಜಗತ್ತಿನ ಕಾರ್ಯಭಾರವು ಸಫಲವಾಗಿದೆ. ಆ ಜೀವರ ಸ್ವರೂಪ ವಿಕಾಸಕ್ಕೆ ಉಪಯುಕ್ತವಾಗಿದೆ. ತಮ್ಮ ತಮ್ಮ ಯೋಗ್ಯತೆಗೆ ತಕ್ಕಂತೆ ಸಾಧನ ಮಾಡಿಕೊಂಡು ಜೀವರು ಫಲಭಾಗಿಗಳಾಗಲೆಂದೇ ಭಗವಂತ ಈ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಅಷ್ಟ ಮಾತ್ರವಲ್ಲ, ಅವರವರಿಗೆ ಸಲ್ಲುವ ಸಾಧನಗಳ ಫಲಗಳನ್ನು ಸಾಧಿಸಿ ಕೊಡಲು ತಾನೂ ಕೂಡಾ ಇದರಲ್ಲಿ ಪಾಲುಗೊಳ್ಳುತ್ತಾನೆ. ಅವತರಿಸಿಯೂ ಬರುತ್ತಾನೆ. ಹೀಗೆ ವಿಶ್ವದ ಅನಂತ ಕಾರ್ಯಕಲಾಪಗಳು ನಿಷ್ಫಲವಾಗುವುದು ಹೇಗೆ? ಅವೆಲ್ಲವೂ ಜೀವರನ್ನು ಗುರಿಯ ಕಡೆಗೆ ಮುಟ್ಟಿಸಲು ನಡೆಯುವ ವ್ಯಾಪಾರಗಳಾಗಿವೆ. `ಯಥಾ ಯೋಗ್ಯಫಲಪ್ರಾಪ್ತ್ಯೈ ಲೀಲೈಷಾ ಪರಮಾತ್ಮನಃ` ಶ್ರೀಮಧ್ವವಾಕ್ಯ. ಪುಟ್ಟಮಾತಿನಲ್ಲಿ ಬೆಟ್ಟದಂತಹ ಅರ್ಥ ತುಂಬಿದೆ ಇಲ್ಲಿ. ಇದು ಶ್ರೀಮಧ್ವಮತದ ಚೊಕ್ಕಟವಾದ ವೈಶಿಷ್ಟ್ಯ.
 ಸಿದ್ಧಾಂತವನ್ನು ತೆಗೆದಾಗ ಅದು ಅಬಾಧಿತವಾಗಿರಬೇಕು. ಅಸಂಗತ ವಿಸಂಗತವಾಗಿರಬಾರದು. ಸಮಂಜಸವಾಗಿರಬೇಕು. ಯಾವ ಅನುಪಪತ್ತಿಗೂ ಆಸ್ಪದವಿರಬಾರದು. ಸರಿಯಾದುದೆಲ್ಲವನ್ನೂ ಸ್ವಾಗತಿಸಬೇಕು. ಸ್ವೀಕರಿಸಬೇಕು. ಯಾವ ವಿಷಯದಲ್ಲಿಯೂ ಆಗ್ರಹ ತೋರಬಾರದು. ಈ ಎಲ್ಲಾ ದೃಷ್ಟಿಯಿಂದ ವಿಮಶರ್ಿಸಿದರೆ ಶ್ರೀ ಮಧ್ವಮತದಂತಹ ಸಮಂಜಸ ಮತವು ಇನ್ನೊಂದಿಲ್ಲ. ಈ ಮಾತಿಗೆ ಶ್ರೀ ನ್ಯಾಯಸುಧಾ, ನ್ಯಾಯಾಮೃತ, ಚಂದ್ರಿಕಾ, ತರ್ಕತಾಂಡವ ಮುಂತಾದ ಈ ಮತಗಳ ಉದ್ಗ್ರಂಥಗಳೇ ಸಾಕ್ಷಿ. ಹೀಗೆ ಸರ್ವ ಸಮೀಚೀನತೆಯು ಈ ಮತದ ವೈಶಿಷ್ಟ್ಯವಾಗಿದೆ.

 ಯಾವುದೇ ಒಂದು ಮತವನ್ನು ಅಳೆಯಬೇಕಾದರೆ ಅದರ ಮೂಲ, ಬೆಳವಣಿಗೆ , ಬೆಳೆದು ಬಂದ ರೀತಿ, ಅದರ ಸ್ವರೂಪ, ಗುಣ, ಸ್ವಭಾವ ಮುಂತಾದವುಗಳನ್ನು ಅವಲೋಕಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಮಧ್ವಮತದ ಮಹತ್ವವು ತಿಳಿಯುವುದು. ಇದು ಸತ್ಸಂಪ್ರದಾಯಸಿದ್ಧವಾದ ಮತವಾಗಿದೆ. ಸರ್ವವಿಧದಲ್ಲಿಯೂ ಸಾತ್ವಿಕವಾಗಿದೆ. ಶ್ರೀ ಹಂಸ ನಾಮಕ ಪರಮಾತ್ಮ, ಚತುಮರ್ುಖ ಬ್ರಹ್ಮದೇವರು, ಸನಕಾದಿ ಮುನಿಗಳು, ದೂವರ್ಾಸ ಮಹಷರ್ಿಗಳು ಇವರ ಘನವಾದ ಪರಂಪರೆಯಿಂದ ನಡೆದು ಬಂದ ಮತವಿದು. ಶ್ರೀ ಮಧ್ವಾಚಾರ್ಯರ ಶ್ರೇಷ್ಠತೆ, ಜೀವೋತ್ತಮತ್ವದ ಬಗ್ಗೆಯಂತೂ ಮುಂಚೆಯೇ ಹೇಳಲಾಗಿದೆ. ಮತ್ತು ಇದು ಶುದ್ಧ ಸಾತ್ವಿಕವಾದ ಮತ. ರಾಜಸ, ತಾಮಸವಾದ ಆಚಾರ ವಿಚಾರಗಳಿಗೆ ಎಡೆ ಇಲ್ಲ ಈ ಮತದಲ್ಲಿ. ಈ ಕಾರಣಗಳಿಂದಲೂ ಇದು ವಿಶಿಷ್ಟವಾಗಿದೆ.

 ಮತದ ಬೆಲೆಯು ಅದರ ಉಪಯುಕ್ತತೆಯ ಮೇಲೆ ಅವಲಂಬಿಸಿದೆ. ಎಷ್ಟೋ ಮತಗಳು ಕೇವಲ ತಾತ್ವಿಕ ಚಚರ್ೆಗಳಾಗಿವೆ. ನಿಜವಾದ ಜೀವನಕ್ಕೂ ಅವಕ್ಕೂ ಸಂಬಂಧವಿಲ್ಲ. ಇನ್ನು ಕೆಲವು ಮತಗಳಲ್ಲಿ ಬೋಧಿಸುವ ಪ್ರಮೇಯಗಳೇ ಬೇರೆ, ಆಚರಣೆಯಲ್ಲಿ ತರುವ ಪ್ರಮೇಯಗಳೇ ಬೇರೆ, ಮತ್ತೆ ಕೆಲವು ಮತಗಳಲ್ಲಿ ಸುಳ್ಳಿನಿಂದ ಆರಂಭಿಸಿ ಸತ್ಯದ ದರ್ಶನ ಮಾಡಿಸಲಾಗುವುದಂತೆ, ಇಂತಹ ನಿರುಪಯುಕ್ತ ಮತಗಳ ಕಾಡಿನಲ್ಲಿ ಶ್ರೀ ಮಧ್ವಮತವು ದಿವ್ಯಸಂಜೀವಿನಿಯಾಗಿದೆ. ಶ್ರೀ ಸಂಜೀವ ಮುಖ್ಯಪ್ರಾಣದೇವರ ಮತವಲ್ಲವೇ ಇದು?.

 ಸಾಧಕರ ಅಧಿಕಾರಕ್ರಮಕ್ಕನುಸರಿಸಿ ಅನೇಕ ಸಾಧನಗಳಿವೆ ಇಲ್ಲಿ. ಇವುಗಳಲ್ಲಿ ಯಾವುದೂ ಮಿಥ್ಯೆಯಲ್ಲ. ಎಲ್ಲವೂ ಅವರವರಿಗೆ ಸಾಧುವಾದ ಮಾರ್ಗಗಳೇ. ವಿಹಿತ ದೃಷ್ಟಿಯಿಂದ ಭಕ್ತಿಪೂರ್ವಕವಾಗಿ ಮಾಡುವ ಭಗವದಾರಾಧನೆಯೇ ಪರಮಧರ್ಮ. ಹೀಗೆ ನಾವು ಆಚರಿಸುವ ಸಕಲ ಕ್ರಿಯೆಗಳೂ ಭಗವತ್ಪೂಜಾರೂಪವಾಗಿರಬೇಕು. ಸರ್ವವನ್ನು ಆ ಭಗವಂತನಲ್ಲಿ ಅರ್ಪಣ ಮಾಡಬೇಕು. ಈ ರೀತಿ ಅನುಸಂಧಾನ ತಂದುಕೊಳ್ಳುವ ವಿಧಾನವನ್ನು ಉಪದೇಶಿಸಿದೆ ಈ ಮತ. ಜೀವನದಲ್ಲಿ ಹಾಸುಹೊಕ್ಕಾಗುವಂತಿವೆ ಇದರ ತತ್ವಗಳು. ಈ ಪ್ರಕಾರ ಅತ್ಯಂತ ಜೀವನೋಪಯೋಗಿಯಾಗಿರುವುದು ಶ್ರೀ ಮಧ್ವಮತದ ಮಹಾವೈಶಿಷ್ಟ್ಯವಾಗಿದೆ.

 ಇಂತಹ ವಿವರಣೆಯಿಂದ ತುಂಬಿರುವ ಈ ಶಾಸ್ತ್ರವು ಆಚಾರ್ಯರು ತಾವು ಹೇಳಿರುವ `ನಾಸ್ಮದುಕ್ತಿ ಸದೃಶಂ ಹಿತರೂಪಮ್` ಎನ್ನುವ ವಾಕ್ಯದಂತೆ ನಿಜವಾಗಿಯೂ ನಮ್ಮ ಹಿತವನ್ನು ಕಾಪಾಡುವಂತಹದಾಗಿದೆ.

-- 
ರಂಗನಾಥಾಚಾರ್ಯ ಸಾಲಗುಂದಿ, ಸಿಂಧನೂರ  

No comments:

Post a Comment