Monday, November 12, 2012

ಕಾಣ್ವ ಶಾಖೆಯವರಲ್ಲಿ ಮಾಧ್ವರಿಲ್ಲವೇ ? ಅಥವಾ ಕಾಣ್ವ ಶಾಖೆಯವರು ಮಾಧ್ವರಲ್ಲವೇ ? Part-2


ಭಾಗ - 2

8. ಈಗ ಇನ್ನೊಂದು ಪ್ರಮುಖ ವಿಷಯಕ್ಕೆ ಬರೋಣ ಮಧ್ವಾಚಾರ್ಯರು ನಮ್ಮ ಗುರುಗಳಲ್ಲ ಶ್ರೀ ಯಾಜ್ಞ್ಯವಲ್ಕ್ಯರು ಮಾತ್ರ ನಮ್ಮ ಗುರುಗಳು ಹಾಗಾಗಿ ನಮ್ಮತನವನ್ನು ನಾವು ಉಳಿಸಿ ಕೊಳ್ಳಬೇಕು ಎಂದು ಹೇಳುವವರ ಅಜ್ಞಾನಕ್ಕೆ ಏನೆಂದು ಉತ್ತರಿಸಬೇಕು. ಶ್ರೀ ಯಾಜ್ಞ್ಯವಲ್ಕ್ಯರು ಮಹಾಪುರುಷರು, ಮಹಾ ಮೇಧಾವಿಗಳು, ಶುಕ್ಲ ಯಜುವರ್ೇದದ ದ್ರಷ್ಟಾರರು, ಶ್ರೇಷ್ಟ ಬ್ರಹ್ಮ ಜ್ಞಾನಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಅಲ್ಲಗಳೆಯುವ ಸಾಹಸವನ್ನು ಯಾವ ವಿವೇಕಿಯು ಮಾಡಲಾರನು. ಆದರೆ ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೇ ಶ್ರೀ ಯಾಜ್ಞ್ಯವಲ್ಕ್ಯರು ಕೇವಲ ಕಣ್ವ-ಮಾಧ್ಯಂದಿನ ಶಾಖೆಯವರಿಗಷ್ಟೇ ಗುರುಗಳಲ್ಲ. ಅವರು ಜಗದ್ಗುರುಗಳು. ವೈದಿಕ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ಸರ್ವರಿಗೂ ಮಾನ್ಯವಾದದು. ಹೀಗಾಗಿ ಅವರು ಎಲ್ಲಾ ವೇದಗಳ ಎಲ್ಲಾ ಶಾಖೆಯವರಿಗೂ, ಅವರು ಒಪ್ಪಲಿ ಬಿಡಲಿ, ಗುರುಗಳು. ಅದೇ ರೀತಿ ಶ್ರೀ ಯಾಜ್ಞ್ಯವಲ್ಕ್ಯರಿಗಿಂತ ಮುಂಚೆ ಶುಕ್ಷ ಯಜುವರ್ೇದವನ್ನುಳಿದು ಇತರೆ ವೇದಗಳನ್ನು ವಿಭಾಗಮಾಡಿ, ಪೈಲ, ಶ್ರೀಯಾಜ್ಞ್ಯವಲ್ಕ್ಯರ ಗುರುಗಳಾದ ವೈಶಂಪಾಯನ, ಸುಮಂತು ಹಾಗೂ ಜೈಮಿನಿಗಳಿಗೆ ಉಪದೇಶಮಾಡಿದ ಸಾಕ್ಷಾತ್ ಭಗವಂತನ ಅವತಾರವಾದ ಶ್ರೀ ವೇದವ್ಯಾಸರು ಎಲ್ಲರಿಗೂ ಗುರುಗಳೇ. ಇದನ್ನೂ ಸಹ ಯಾರು ಅಲ್ಲಗಳೆಯಲು ಸಾಧ್ಯವಿಲ್ಲ.  ಹೀಗಿರುವಾಗ ಋಗ್ವೇದಿಗಳು, ಕೃಷ್ಣಯಜುವರ್ೇದಿಗಳು, ಸಾಮವೇದಿಗಳು ಹಾಗೂ ಅಥರ್ವವೇದಿಗಳೆಲ್ಲರೂ, ಎಲ್ಲಿಯೂ ಸಹ, ನಮಗೆ ಶ್ರೀವೇದವ್ಯಾಸರಷ್ಟೇ ಗುರುಗಳು. ಶಂಕರಾಚಾರ್ಯರಾಗಲೀ , ರಾಮಾನುಚಾರ್ಯರಾಗಲಿ ಅಥವಾ ಮಧ್ವಾಚಾರ್ಯರಾಗಲಿ ನಮಗೆ ಗುರುಗಳಲ್ಲ ಎಂದು ಹೇಳುವ ಸಾಹಸ ಮಾಡಿಲ್ಲ. ಏಕೆಂದರೆ ಈ ದಾರ್ಶನಿಕರ ಭಾಷ್ಯ, ಟೀಕೆ ಟಿಪ್ಪಣಿಗಳಿಲ್ಲದೇ ವೇದಗಳನ್ನು ನೇರವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬುದನ್ನು ಅವರು ಒಪ್ಪಿಕೊಂಡಿರುತ್ತಾರೆ. ಅಂಥದ್ದರಲ್ಲಿ ಯಾರ ಭಾಷ್ಯದ ಸಹಾಯವಿಲ್ಲದೇ ಶ್ರೀಯಾಜ್ಞ್ಯವಲ್ಕ್ಯರ ಶುಕ್ಷ ಯಜುವರ್ೇದವನ್ನು ನಮ್ಮ ಪ್ರಸ್ತುತ ಪೀಠಾಧಿಪತಿಗಳು ಮತ್ತು ಅವರ ಆತ್ಮೀಯ ಶಿಷ್ಯರು ನೇರವಾಗಿ ಅಥರ್ೈಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎಂದು ತಿಳಿಯುವುದು ಹಾಸ್ಯಾಸ್ಪದ . ವೇದಗಳನ್ನು ಹೇಗೆ ಅಥರ್ೈಸಬೇಕೆಂದು ತಿಳಿಸುವುದಕ್ಕಾಗಿಯೇ ಶ್ರೀ ವೇದವ್ಯಾಸರು ಬ್ರಹ್ಮ ಸೂತ್ರಗಳನ್ನು ರಚಿಸಿಕೊಟ್ಟ ನಂತರವೂ ಸಹ ಅವು ಕೆಲವರಿಗೆ ಅರ್ಥವಾಗದೇ , ಇನ್ನು ಕೆಲವರಿಗೆ ವಿಪರೀತ ಅರ್ಥವಾಗಿ ವೇದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲಾರದವರು 21 ಜನ ಆಗಿ ಹೋದರು . ವಿಷಯ ಇಷ್ಟು ಗಹನವಾಗಿರುವಾಗ , ಮಧ್ವಾಚಾರ್ಯರ ಭಾಷ್ಯದ ಅಗತ್ಯನಮಗಿಲ್ಲ .ನಾವು ಅವರ ಭಾಷ್ಯ ಒಪ್ಪುವದಿಲ್ಲ ಅವರ ಅವಶ್ಯಕತೆ ನಮಗಿಲ್ಲ, ನಾವುನೇರವಾಗಿ ವೇದಗಳಲ್ಲಿ ಪುರಾಣಗಳಲ್ಲಿ ಏನು ವಾಕ್ಯಗಳಿವೆಯೋ ಅದರಂತೆ ಅರ್ಥಮಾಡುತ್ತೇವೆ ಎಂಬುದು ಎಂಥ ಉದ್ಘಟತನದ ಅಭಿಪ್ರಾಯ ನೀವೇ ವಿಚಾರಿಸಿನೋಡಿ. ಇವರು ಶ್ರೀ ಶಂಕರಾಚಾರ್ಯರು , ರಾಮಾನುಜಾಚಾರ್ಯರಿಗಿಂತಲು ಪ್ರಬುಧ್ದರೇ? ವೈದಿಕ ಸಾಹಿತ್ಯ -ಪುರಾಣ ಸಾಹಿತ್ಯಗಳು ಅರ್ಥವಾಗಬೇಕಾದರೆ ದರ್ಶನೆ ಬಾಷೆ, ಸಮಾಧಿ ಬಾಷೆ, ಗುಹ್ಯ ಬಾಷೆಗಳ ಪರಿಚಯ ವಿರಬೇಕು. ಏಳು ಪ್ರಕಾರಗಳನ್ನು (ಸ್ಟೈಲ್) ತಿಳಿದು ಕೊಂಡಿರಬೇಕು. ಈ ಯಾವುದರ ಗಂಧಗಾಳಿಯಲ್ಲಿದ ನಮಗೆ ಮಧ್ವಾಚಾರ್ಯರ ಭಾಷ್ಯಬೇಡ ಎನ್ನುವುದು ಅಜ್ಞಾನದ ಪರಮಾವಧಿ ಎಂದೇ ಹೇಳಬೇಕಾಗುತ್ತದೆ ಬಹುಶ: ಇತರೆ ಮಾಧ್ವ ಬ್ರಾಹ್ಮಣರು ನಮ್ಮ ಕಾಣ್ವರನ್ನು ತಾರತಮ್ಯ ರೀತಿಯಿಂದ ನಡೆಸಿಕೊಳ್ಳುತ್ತಿರುವುದಕ್ಕಾಗಿ ಅವರ ಮೇಲಿನ ಸಿಟ್ಟಿಗಾಗಿ ಮಧ್ವಾಚಾರ್ಯರನ್ನೇ ಅಲ್ಲಗೆಳೆಯುವುದು ಅಕ್ಷಮ್ಯ ಅಪರಾಧ ಎಂದೇ ನನ್ನ ಭಾವನೆ .

 

9. ಇನ್ನೊಂದು ರೀತಿಯಲ್ಲಿ ವಿಚಾರ ಮಾಡೋಣ ನಮಗೆ ಭಾಷ್ಯವೆ ಬೇಕೆಂಬುದಾದಲ್ಲಿ ಶ್ರೀ ಮಧ್ವಾಚಾರ್ಯರ ಭಾಷ್ಯವೇ ಏಕೆ? ಶ್ರೀ ಶಂಕರಾಚಾರ್ಯರ ಅಥವಾ ರಾಮಾನುಜಾಚಾರ್ಯರ ಭಾಷ್ಯ ಏಕಾಗಬಾರದು ಎಂಬ ಪ್ರಶ್ನೆ ಬರಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ವಾಚಕರ ಗಮನಕ್ಕೆ ಒಂದು ವಿಷಯ ತರಬಯಸುತ್ತೇನೆ. ಈಗ ಸುಮಾರು ಮೂರು ವರ್ಷಗಳಹಿಂದೆ ನಮ್ಮ ಕಣ್ವ ಮಠದ ಪ್ರಸ್ತುತ ಪೀಠಾಥೀಶ್ವರರು ಒಂದು ಕರ ಪತ್ರ ಮುದ್ರಿಸಿ, ಅದರಲ್ಲಿ ಜೀವ ಈಶ ಭೇದ ತಾರತಮ್ಯ ವನ್ನು ಮೊದಲು ಹೇಳಿದವರು ಯಜ್ಞ್ಯವಲ್ಕ್ಯರೇ? ಮಧ್ವಾಚಾರ್ಯರೇ? ಎಂದು ಪ್ರಶ್ನಿಸಿ ತಮ್ಮ ಪಾಂಡಿತ್ಯವನ್ನು ಮೆರೆದಿದ್ದರು. ಅಂದಮೇಲೆ ಇವರ ಪ್ರಕಾರ, ಜೀವ-ಈಶ ಭೇದ ಪಂಚಭೇಧ ತಾರತಮ್ಯವನ್ನು ಮೊದಲು ಹೇಳಿದವರು, ಶ್ರೀ ಯಾಜ್ಞ್ಯವಲ್ಕ್ಯರು ನಂತರ ಅದನ್ನು ಹೇಳಿದವರು ಮಧ್ವಾಚಾರ್ಯರು ಎಂದು ಒಪ್ಪಿಕೊಂಡಂತಾಯಿತಲ್ಲವೇ? ಅಂದಮೇಲೆ ಇವರ ಪ್ರಕಾರ ಶ್ರೀ ಯಜ್ಞ್ಯವಲ್ಕ್ಯರ ಮತವೇ ಶ್ರೀ ಮಧ್ವಾಚಾರ್ಯರ ಮತ ಎಂಬುದು ಸ್ಪಷ್ಠಪಡಿಸಿದಂತಾಯಿತು. ಇನ್ನೊಂದು ಕಡೆ ಶ್ರೀಯಾಜ್ಞ್ಯವಲ್ಕ್ಯರು ಜೀವ ಈಶಭೇದ ತತ್ವಕ್ಕೂ ಶ್ರೀ ಶಂಕರಾಚಾರ್ಯರ ಅಹಂಬ್ರಹ್ಮಾಸ್ಮಿ ತತ್ವಕ್ಕೂ ವಿರೋಧ ಬರುತ್ತದೆ. ರಾಮಾನುಜಾಚಾರ್ಯರ ಇಲ್ಲಿ ಮಾತ್ರ ಭೆಧ ಅಲ್ಲಿ ಒಂದೇ ಎಂಬ ತತ್ವವೂ ವಿರೋಧವಾಗುತ್ತದೆ. ವಿಷಯಹೀಗಿರುವಾಗ ಶ್ರೀಯಾಜ್ಞ್ಯವಲ್ಕ್ಯರ ಅಭಿಪ್ರಾಯವನ್ನು ಸರಿ ಎಂದು ಒಪ್ಪಿಕೊಂಡು ಅದರಂತೆ ಭಾಷ್ಯ ಬರೆದ ಶ್ರೀ ಮಧ್ವಾಚಾರ್ಯರನ್ನೇ ಅನಗತ್ಯ ಎಂದು ಭಾವಿಸುವುದು ಮೂರ್ಖತನವಾಗುವುದಿಲ್ಲವೇ.

10. ಶ್ರೀ ಮಧ್ವಾಚಾರ್ಯರಿಗಿಂತಲೂ ಮುಚೆ ಬಂದ  ಭಾಷ್ಯೇಕಾರರಿಗೂ ತಿಳಿಯದೇ ಹೋದ ಎಷ್ಟೋ ಸಂದಿಗ್ದ ಸಂಗತಿಗಳಿಗೆ, ತಮ್ಮ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಹಾಗೂ ಭಾಗವತ ತಾತ್ಪರ್ಯ ನಿರ್ಣಯದಲ್ಲಿ ಉತ್ತರ ನೀಡಿದ ಶ್ರೀ ಮಧ್ವಾಚಾರ್ಯರನ್ನು ಹೊರಗಿಟ್ಟು ಬದುಕುವ ಆಧ್ಯಾತ್ಮಿಕ ಬದುಕೂ ಒಂದು ಬದುಕೇ ? ಶ್ರೀ ಮಧ್ವಾಚಾರ್ಯ ಒಬ್ಬರನ್ನೇ ಹೊರಗಿಡಲು ಸಾಧ್ಯವಿಲ್ಲ ಅವರ ಹಿಂದೆಯೇ ಅವರ ಪರಂಪರೆಯಲ್ಲಿ ಬರುವ ಮಹಾಪುರುಷರಾದ ಶ್ರೀಯುತ ಜಯತೀರ್ಥರು ವ್ಯಾಸರಾಯರು, ವಾದಿರಾಜರು, ರಾಘವೇಂದ್ರ ಸ್ವಾಮಿಗಳು ಇವರೆಲ್ಲರ ಸಂಪರ್ಕ ಕಳೆದುಕೊಳ್ಳಬೇಕಾಗುತ್ತದೆ. ಇವರೆಲ್ಲರ ಗ್ರಂಥಗಳು ಮಾಧ್ವಭಾಷ್ಯಾನುಸರಿಯಾಗಿಯೇ ರಚನೆಗೊಂಡಿದ್ದಾಗಿವೆ. ಇನ್ನೂ ಮುಂದುವರೆದಲ್ಲಿ ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು ಹಾಗೂ ಶ್ರೀ ಜಗನ್ನಾಥದಾಸರುಗಳನ್ನು ಹೊರಗಿಡಬೇಕಾಗುತ್ತದೆ. ಹೀಗಾಗಿ ಕಾಣ್ವಶಾಖೆಯ ಮಾಧ್ವಮತಾನುಮಾಯಿಗಳ ಭಜನಾ ಮಂಡಳಿಗಳನ್ನೆಲ್ಲಾ  ವಿಸರ್ಜಸಬೇಕಾದೀತು. ಏಕೆಂದರೆ ಎಲ್ಲಾ ಹರಿದಾಸರ ಹಾಡುಗಳೂ ಮಧ್ವಮತ ಪ್ರತಿಪಾದಕವಾಗಿಯೇ ರಚನೆ ಗೊಂಡಿರುತ್ತವೆ. ಒಮ್ಮೆ ಯೋಚಿಸಿ ನೋಡಿ ಪರಿಸ್ಥಿತಿ ಊಹಿಸಿಕೊಂಡರೆ ನಮ್ಮ ಆಧ್ಯಾತ್ಮಿಕ ಬದುಕುನಿಂದ ಮಧ್ವಾಚಾರ್ಯರನ್ನು ಹೊರಿಗಿಟ್ಟು ಬದುಕುವುದು ಎಷ್ಟು ಭಯಾನಕ ಎಂಬುದರ ಅರಿವಾಗುತ್ತದೆ. ಆದರೆ ಇಲ್ಲಿ ಒಂದು ಮಾತು, ಈ ಲೇಖನದಲ್ಲಿ ತಿಳಿದ ವಿಷಯ ಹರಿ-ವಾಯು ಗುರುಗಳಲ್ಲಿ ಶ್ರದ್ಧೆ ಭಕ್ತಿ ಇಟ್ಟು ಆಧ್ಯಾತ್ಮ ಜೀವನ ನಡೆಸಬೇಕೆನ್ನುವವರಿಗೆ ಮಾತ್ರ ಅನ್ವಯವಾಗುತ್ತದಯೇ ಹೊರತು ಹುಟ್ಟಿ ಬಂದ ನಂತರ ಯಾವುದೆ ಒಂದು ದಾರಿಯಲ್ಲಿಹಣ ಆಸ್ತಿಗಳಿಸುವುದು ಮುಖ್ಯವಾಗಿ ಅದಕ್ಕಾಗಿ ಮೋಸ ವಂಚನೆ ಯಿಂದ ಯಾರದೋ ಆಸ್ತಿ ಕಬಳಿಸಿ ಬದುಕುವುದೇ ಪರಮಾರ್ಥ ಎಂದು ಭಾವಿಸುವವರಿಗೆ ಇದರಲ್ಲಿರುವ ಸಂದೇಶ ಅನ್ವಯವಾಗುವುದೇ ಇಲ್ಲ ಎಂಬುದು ಸ್ಪಷ್ಟ.

11.  ಈ ಹಿಂದೆ ಹೇಳಿದಂತೆ ಶ್ರೀ ಯಾಜ್ಞ್ಯವಲ್ಕ್ಯರು ಮಹಾಪುರುಷರು ನಿಜ. ಆದ್ದರಿಂದಲೇ ಅವರ ಉಲ್ಲೇಖ ಉಪನಿಷತ್ತಿನಲ್ಲಿ, ಮಹಾಭಾರತದಲ್ಲಿ , ಭಾಗವತದಲ್ಲಿ ಇತರೆ ಪುರಾಣಗಳಲ್ಲಿ ಬರುತ್ತದೆ. ಈ ಮೇಲೆ ತಿಳಿಸಿದ ಗ್ರಂಥಗಳಲ್ಲಿ ಅವರ ಬಗ್ಗೆ ಉಲ್ಲೇಖ ಇದೆ. ಆ ಗ್ರಂಥಗಳ ಬಗ್ಗೆ ಶ್ರೀ ಯಾಜ್ಞ್ಯವಲ್ಕ್ಯರು ಏನು ಹೇಳುವುದಿಲ್ಲ. ಏಕೆಂದರೆ ಅವರ ಕಾಲದಲ್ಲಿ ಈ ಗ್ರಂಥಗಳ ರಚನೆಯೇ ಆಗಿರಲಿಕ್ಕಿಲ್ಲ ಈಗ ಈ ಗ್ರಂಥಗಳ ಬಗ್ಗೆ ನಮಗೆ ಸರಿಯಾದ ತಿಳುವಳಿಕೆ ಕೊಡಲಾದರೂ ಒಬ್ಬ ಮಹಾಪುರುಷರು ಬೇಕಲ್ಲ? ಇಲ್ಲದೇ ಹೋದಲ್ಲಿ ಅವುಗಳನ್ನು ಅರ್ಥಮಾಡಿಕೊಳ್ಳುವುದು ನಮಗೆ ಸಾಧ್ಯವೇ? ಅಥವಾ ನಮ್ಮ ಮಠದಲ್ಲಿ, ಮಧ್ವಾಚಾರ್ಯರ ನಂತರ 23ನೇ ಭಾಷ್ಯ ರಚಿಸುವವರು ಅವತರಿಸಿದ್ದಾರೆಯೇ? ಇಲ್ಲ. ಈ ಕಾರಣಕ್ಕಾಗಿಯೇ ಶ್ರೀ ಮಧ್ವಾಚಾರ್ಯರು ನಾವು ಅತ್ಯಗತವಾಗಿ ಅನುಸರಿಸಲೇ ಬೇಕಾದ ಗುರುಗಳು. ನಮ್ಮ ಅಧ್ಯಾತ್ಮ ಜೀವನದಲ್ಲಿ ಏನಾದರೂ ಸಾಧಿಸಲೇ ಬೇಕೆಂದಿದ್ದರೇ ಶ್ರೀ ಮಧ್ವರ ವಾಣಿಯನ್ನು ಅನುಸರಿಸಬೇಕೇ ವಿನಃ ತಮ್ಮ ಸ್ವಹಿತ ಸ್ವಾರ್ಥಕ್ಕಾಗಿ ಶ್ರೀ ಮಧ್ವರಂತಹ ಗುರುಗಳನ್ನು ಅಲ್ಲಗಳೆಯುವಂತಹ ಅಜ್ಞಾನಿಗಳ ಉಪದೇಶವನ್ನು  ಕೇಳುವುದರಿಂದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ.

ಮಧ್ವರಾಯರ ಕರುಣೆ ಪಡೆಯದವ ಧರೆಯೊಳಗೆ ಇದ್ದರೇನು? ಇಲ್ಲದಿದ್ದರೇನು?
" ಓಂ ತತ್ಸತ್"
ಕೆ. ಸತ್ಯನಾರಾಯಣರಾವ್, ಹೊಸಪೇಟೆ ಕಣ್ವ ಮಠದ ಉದ್ದಾರ ಬಯಸುವ ಒಬ್ಬ ಶಿಷ್ಯ

No comments:

Post a Comment