Sunday, February 10, 2013

ಶ್ರೀ ಸಾದ್ವೀ ಶಿರೋಮಣಿ ತುರಡಗಿ ತಿಮ್ಮಮ್ಮನ ಚರಿತ್ರೆ

                              || ಶ್ರೀ ||
            
       ರಾಯಚೂರ ಜಿಲ್ಲಾ ಲಿಂಗಸಗೊರ ತಾಲೂಕಿನ ತುರಡಗಿ ಗ್ರಾಮದ ವೇದ ಸಂಪನ್ನರಾದ ನರಸಿಂಹಾಚಾರ್ಯ ಜೊಷಿ ಮತ್ತು  ಸೌ|| ಚಂದ್ರಲಾದೇವಿ ಎಂಬ ವಿಪ್ರೋತ್ತಮ ದಂಪತಿಗಳಲ್ಲಿ ಜನಿಸಿದ ಮಹಾನ ಪುತ್ರಿಯೆ ನಮ್ಮ" ತಿಮ್ಮಮ್ಮಾ". ಮನೆತನದ ಆರಾಧ್ಯ ದೆವನ ಹೆಸರನ್ನೇ ಇಟ್ಟಿದ್ದರಾದ್ದರಿಂದಾ ರೊಢಿಯಲ್ಲಿ ತಿಮ್ಮಮ್ಮಾ ಎಂದು ಕರೆಯುತ್ತಿದ್ದರು.
ಮನೆತನದ ಸಂಸ್ಕ್ರುತಿ, ಧಾರ್ಮಿಕ ಹಿನ್ನೆಲೆಯಲ್ಲಿ ಬೆಳೆದು ಬಂದ ಕಾರಣ ತಿಮ್ಮಮ್ಮನಲ್ಲಿ ಚಿಕ್ಕವಯಸ್ಸಿನಲ್ಲಿಯೇ ರಂಗೋಲಿ, ಹೆಣಿಕೆ, ಹಾಡು ಹಸೆಗಳು ಬಾಲ್ಯದಲ್ಲಿಯೇ ರೊಢಿಗತವಾಗಿದ್ದವು. ಮನೆತನದ ಕೆಲಸಗಳಲ್ಲಿ ಅಚ್ಚುಕಟ್ಟುತನ, ಒಪ್ಪ ಒರಣಗಳಿಂದಲೊ, ಚುರುಕುಮತಿಯಾಗಿರುವದಲ್ಲದೇ, ಪುರಾಣ, ಪ್ರವಚನೆಗಳಲ್ಲಿ ಹರಿಕಥಾಮ್ರುತಸಾರ, ದಾಸರ
ಪದಗಳಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದಳು.

           ಅಷ್ಟವರ್ಷಾತ್ವಿಯಂ ಕನ್ಯಾ ಪುತ್ರವತ್ಪಾಲಿತಾ ಮಯ ||
           ಎದಾನಿಂ ತವ ಪುತ್ರಾಯ ದತ್ತಾ ಸ್ನೇಹೇನ ಪಾಲ್ಯತಾಮ್ ||

       ವೈಧಿಕ ಧರ್ಮಕ್ಕನುಸರಿಸಿ ವೇದ ಸಂಪನ್ನರಾದ ನರಸಿಂಹಾಚಾರ್ಯರು ತಮ್ಮ ಮಗಳಾದ ತಿಮ್ಮಮ್ಮನನ್ನು ಎಂಟನೇ ವಯ್ಯಸ್ಸಿನಲ್ಲಿಏ ಸಮೀಪದ ಮುದ್ದಲಗುಂದಿ ಗ್ರಾಮದ ಕಂತ್ಸ ಗೋತ್ರ ಸಂಭವರಾದ ಶ್ರೀ ಮಾನ ವೆಂಕಟನರಸಿಂಹ ನಾಯಕ ಎಂಬವರ ಸುಪುತ್ರರಾದ ಚಿ|| ಅಶ್ವಥ ನಾಮಕ ವರಶ್ರೇಷ್ಟನಿಗೆ ಮದುವೆ ಮಾಡಿ ಕೊಟ್ಟರು.

       ಸೌ|| ತಿಮ್ಮಮ್ಮನವರು ೮ ವರ್ಷದ ಚಿಕ್ಕ ಹೆಣ್ಣು ಮಗಳಾಗಿದ್ದರೂ ಕೂಡಾ ತವರು ಮನೆಯಲ್ಲಿ ಉತ್ತಮ ಸಂಸ್ಕ್ರತಿಯಿಂದಾ ಬೆಳೆದವಳಾದ್ದರಿಂದಾ ಪತಿ, ಅತ್ತೆ, ಮಾವಂದಿರ ಸೇವೆಯನ್ನು ಭಕ್ತಿ ಪುರಸ್ಸರವಾಗಿ ಮಾಡುತ್ತಿದ್ದಳು.

ಪ್ರಾರಬ್ಧಕರ್ಮಣಾಂ ಭೋಗಾದೇವಕ್ಷಯ:

       ಸೌ||ತಿಮ್ಮಮ್ಮನು ಅತ್ತೆಯ ಮನೆಯಲ್ಲಿ ಪತಿಯ ಸೆವೆಯನ್ನು ಮಾಡುತ್ತಾ ಸದ್ ಗ್ರಹಿಣಿಯಾಗಿ ಏರಡು ವರುಷ ಕಳೆಯುವಷ್ಟರಲ್ಲಿ ಅಂದರೆ ಅವಳ (೧೦) ಹತ್ತನೆ ವಯದಲ್ಲಿ ಒಮ್ಮಿಂದೊಮ್ಮಿಲೆ ಪತಿದೆವರಾದ ಅಶ್ವತ್ಥರಾಯರು ವೈಕುಂಠವಾಸಿಗಳಾದರು ದೈವಿದುರ್ವಿಲಾಸದಿಂದಾ ತಿಮ್ಮಮ್ಮನಿಗೆ ವೈಧವ್ಯವು ಪ್ರಾಪ್ತವಾಯಿತು.
       ತಿಮ್ಮಮ್ಮನವರು ಬಾಲ್ಯದಿಂದಲೇ ಉಜ್ವಲವಾದ ಧಾರ್ಮಿಕ ಮನೋವ್ರತ್ತಿಯುಳ್ಳವರಾದ್ದರಿಂದಾ ಈ ಧು:ಖದಿಂದಾ ಲೋಕೋತ್ತರವಾದ ವೀರ ವೈರಾಗ್ಯವು ಆ ವೇಳೆಯಲ್ಲಿ ನಿರ್ಮಾಣವಾಯಿತು. ಇದರಿಂದಾ ತಮ್ಮ ಆಯುಷ್ಯವನ್ನೆಲ್ಲಾ ಶ್ರೀ ಹರಿಯ ಸೆವೆಯಲ್ಲಿಯೇ ಕಳೆಯಬೆಕೆಂದು ದ್ರುಡನಿಶ್ಚಯ ಮಾಡಿದರು.

       ಸ್ತ್ರೀಯರಿಗೆ ವೈಧವ್ಯವೆಂದರೆ ಸನ್ಯಾಸಾಶ್ರಮವೇ ಸರಿ! ಒಪ್ಪತ್ತು ಊಟ ಮಾಡುವದು, ಕಾಷಾಯ ವಸ್ತ್ರ ಧಾರಣೆ ಮಾಡುವದು, ಸದಾಕಾಲವೂ ಶ್ರೀ ಹರಿಯ ಧ್ಯಾನದಲ್ಲಿಯೇ ಮಗ್ನರಾಗಿರುವದು, ಇದೆ ರೀತಿಯ ನಿಯಮಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರು.
       ತಿಮ್ಮಮ್ಮನವರು ಮನೆ ಕೆಲಸಗಳನ್ನೆಲ್ಲಾ ಪರಮಾತ್ಮನ ಪೂಜೆಯಂದು ತಿಳಿದು ಭಕ್ತಿಯಿಂದಾ ಮಾಡುತ್ತಿದ್ದರು. ಆದರೆ ಪರಮ ಸಾದ್ವಿಯಾದ ಆತಿಮ್ಮಮ್ಮನ ದಿವ್ಯದ್ರುಷ್ಟಿಯು ಸಾಮಾನ್ಯರಾದ ಅವಳ ಅತ್ತೆ-ಮಾವಂದಿರಿಗೆ ತಿಳಿಯಲಿಲ್ಲಾ, ಮೆಲಾಗಿ ಚಿನಿವಾಲರು! ಕ್ರುಪಣರು, ಧನ ಸಂಗ್ರಹದಲ್ಲಿಯೇ ಮಗ್ನರಾದವರು. ಇಂಥವರು ದುರ್ದೈವಿಯಾದ ಈ
ಬಾಲವಿಧವೆಯನ್ನು ಕ್ರೂರತನದಿಂದಾ ಗೋಳಾಡಿಸತೊಡಗಿದರು.
       ಕುಲದೆವರಾದ ಕೊಪ್ಪರ ನ್ರುಸಿಂಹ ದೇವರ ಜಯಂತಿ ಉತ್ಸವಕ್ಕೆ ಪ್ರತಿವರುಷವು ಭಾಗವಹಿಸುವಾಗ ಅಲ್ಲಿ ದೇವದುರ್ಗದ ಸತ್ಪುರುಷ, ಭಗವದಭಕ್ತ ಸಿರೋಮಣಿ, ವೇದಮೂರ್ತಿ ಶ್ರೀ ಗಿರಿಯಪ್ಪನವರ ಪರಿಚಯವಾಯಿತು. ಹಾಗು ಅವರ ಪ್ರೌಢಿಮೆ, ವಾಕ್ಚಾತುರ್ಯ, ಪಾಂಡಿತ್ಯವನ್ನು ನೋಡಿ ಕೇಳಿ ಅವರ ಶಿಷ್ಯತ್ವವನ್ನು ವಹಿಸಿದಳು. ಆ ಸತ್ಪುರುಷರಿಗೂ
ಇವಳ ಭಕ್ತಿ, ವೈರಾಗ್ಯ, ಜ್ನಾನದಾಹವನ್ನು ತಿಳಿದುಕೊಂಡು ತಮ್ಮ ಮಗಳಂತೆಯೇ ಮಮತೆಯನ್ನು ತೋರಿ ತಮ್ಮ ಮನೆಯಲ್ಲಿಯೇ ಇರುವದಕ್ಕೆ ಅನುಕೊಲ ಮಾಡಿಕೊಟ್ಟರು.      
       ಪೊಜ್ಯ ಗಿರಿಯಪ್ಪನವರು ಪ್ರತಿ ವರುಷವೂ ಮೋತಂಪಲ್ಲಿ ಮುಖ್ಯಪ್ರಾಣದೆವರಿಗೂ, ತಿರುಪತಿ ತಿಮ್ಮಪ್ಪನಿಗೂ ಅವಿಚ್ಛಿನ್ನವಾಗಿ ಯಾತ್ರಾ ಕಾರ್ಯವನ್ನು ನೆರವೇರಿಸಿಕೊಂಡು ಬಂದಿದ್ದರಲ್ಲದೆ, ಆಯಾ ಕ್ಷೇತ್ರದಲ್ಲಿ ನೆರೆದ ಜನರಿಗೆ ಜ್ನಾನೋಪದೆಶವನ್ನು ಮಾಡುತ್ತಿದ್ದರು. ಭಗವದ್ಭಕ್ತಳಾದ ತಿಮ್ಮಮ್ಮನೊಕೊಡಾ ನಿರಂತರವಾಗಿ ಅವರ ಜೊತೆಗೆ ಹರಿ
ವಾಯುಗಳ ದರುಶನ, ಭಕ್ತರ ಸೆವೆ, ಪುರಾಣ ಪುಣ್ಯಕಥೆಗಳ ಶ್ರವಣವನ್ನು ಶ್ರದ್ಧೆಯಿಂದಾ ಮಾಡುತ್ತಿದ್ದಳು. ಇದೇರಿತಿಯಾಗಿ ಅಖಂಡ (೨೦) ಇಪ್ಪತ್ತು ವರುಷಗಳ ಸೇವೆಯಫಲವಾಗಿ ತಿಮ್ಮಮ್ಮನಲ್ಲಿ ಇದ್ದ ಜ್ನಾನ, ಭಕ್ತಿ, ವೈರಾಗ್ಯಗಳು ಇನ್ನೂ ಜಾಗ್ರತಗೊಂಡು ಗಟ್ಟಿಗೊಂಡವು.

       ಈ ರೀತಿ ನಡೆಯುತ್ತಿರುವಾಗ ಒಂದು ದಿವಸ ಗುರುಗಳ ಸನ್ನಿಧಿಯಲ್ಲಿ ತಿಮ್ಮಮ್ಮನವರು ವಿನಯಪೊರ್ವಕವಾಗಿ, "ತಾವು ಇಂದಿನವರೆಗೆ (೨೦)ಇಪ್ಪತ್ತು ವರುಷಗಳ ತನಕ ಪಿಪಿಲಿಕಾಮಾರ್ಗದಿಂದಾ ನನಗೆ ಕ್ರಮಕ್ರಮೇಣ ಜ್ನಾನೋಪದೇಶ ಮಾಡುತ್ತಾ ನನ್ನನ್ನು ವಿಹಂಗಮ ಮಾರ್ಗಕ್ಕೆ ತಂದು ಮುಟ್ಟಿಸಿದ್ದೀರಿ, ಈ ಮಾರ್ಗವು
ಸದ್ಯೋಮುಕ್ತಿಪ್ರದವಾಗಿದೆ. ತಮ್ಮ ಜ್ನಾನೋಪದೇಶದಿಂದ ನಾನು ಧನ್ಯಳಾದೆ, ಇನ್ನುಮೇಲೆ ನಮ್ಮ ನಾಡಿಗೆ ಹೋಗಿ ಹೊನೊರ ಗ್ರಾಮದಲ್ಲಿ ವಾಸಮಾಡಿ ತಾವು ಹೇಳಿದ ಉಪದೇಶಾಮ್ರುತವನ್ನು ಆ ನಾಡಿನಲ್ಲಿ ಬಿತ್ತರಿಸಬೇಕೆಂದಿದ್ದೇನೆ" ಅಪ್ಪಣೆಯಾಗಬೇಕು, ಏಂದು ಭಿನ್ನವಿಸಿಕೊಂಡಳು. ಸತ್ಪುರುಷರು "ಹಾಗೆ ಆಗಲಿ" ಏಂದು ಆಜ್ನೇಮಾಡಿದರು.
       ಆ ಬಳಿಕ ಅಮ್ಮನವರು ಪ್ರಸನ್ನ ಚಿತ್ತದಿಂದಾ ಹೊನೊರಿಗೆ ಬಂದು ಊರಮುಂದಿನ ಹಳ್ಳದ ದಂಡೆಯಮೆಲಿರುವ ನಿಸರ್ಗ ಮನೊಹರವಾದ ಶ್ರೀ ಮಾರುತಿ ದೇವಾಲಯವನ್ನು ತಮ್ಮ ಆಶ್ರಮ ಸ್ತಾನವನ್ನಾಗಿ ಮಾಡಿಕೊಂಡು ಅಲ್ಲಿಯೇ ಇರಲಾರಂಭಿಸಿದರು. ಮೊಟ್ಟಮೊದಲು ಸಿರಗುಪ್ಪಿ ಗ್ರಾಮದ ವೆ|| ಮೊ|| ಅಕ್ಷತೇ ಹನುಮಂತಾಚಾರ್ಯ ಎಂಬ ಸದ
ಬ್ರಾಹ್ಮಣ ಇವರ ಶಿಷ್ಯತ್ವವನ್ನು ವಹಿಸಿಕೊಂಡನು. ನಿತ್ಯವೂ ನರಸಿಂಹದೇವರು, ಮುಖ್ಯಪ್ರಾಣ, ಮ್ರುತ್ತಿಕಾ ವ್ರುಂದಾವನ ಗಳ ಪೋಜೆಯನ್ನು ಮಾಡಿ ನೈವಿದ್ಯ, ವೈಶ್ವದೆವ, ಹಸ್ತೊದಕ,ಗಳನ್ನು ಮಾಡಿ. ಅಮ್ಮನವರಿಗೂ, ಅಥಿತಿ ಅಭ್ಯಾಗತರಿಗೂ ತೀರ್ಥವನ್ನು ಕೊಡುತ್ತಿದ್ದರು. ಅಮ್ಮನವರ ದರ್ಶನ ಹಾಗು ಉಪದೇಶಾಮ್ರುತವನ್ನು ಕೇಳಲು ನಾಲ್ಕೂ ವರ್ಣಗಳ
ಸದ್ ಗ್ರಹಿಣಿ, ಗ್ರಹಸ್ತರು ನಿತ್ಯವೂ ಆಶ್ರಮಕ್ಕೆ ಆಗಮಿಸುತ್ತಿದ್ದರು. ಆಶ್ರಮದಲ್ಲಿ ನಿತ್ಯವೂ ಅನ್ನದಾನಕ್ಕೆ ಎಳ್ಳಷ್ಟೂ ಕೊರತೆಯಿರುತ್ತಿರಲಿಲ್ಲಾ. ಆದರೂ ಅಮ್ಮನವರು ಮಾತ್ರ ಅಯಾಚಿತ ವ್ರುತ್ತಿಯಿಂದಲೇ ಇರುತ್ತಿದ್ದರು.
       ಹೂನೂರಿಗೆ ಬಂದನಂತರವೂ ಪ್ರತಿವರುಷ ಯಥಾಪ್ರಕಾರವಾಗಿ ತಿರುಪತಿ ಯಾತ್ರೆಯನ್ನು ಮಾಡುತ್ತಿದ್ದರು. ವಿಶೇಷವೆಂದರೆ ಈಗ ಇವರ ಜೊತೆಯಲ್ಲಿ ನೊರಾರು ಜನ ಬ್ರಾಹ್ಮಣರು ಕುಟುಂಬ ಸಮೇತರಾಗಿ ಯಾತ್ರೆಗೆ ಹೋಗಿ ಬರುತ್ತಿದ್ದರು. ಎಲ್ಲ ಜನರ ಯೋಗಕ್ಷೇಮವನ್ನು ಅಮ್ಮನವರೇ ನೋಡಿಕೊಳ್ಳುತ್ತಿದ್ದರು.

       ಈ ರೀತಿಯಾಗಿ ನಡಿದು ಬಂದ ಯಾತ್ರಾ ಸಮಯದಲ್ಲಿ ಒಂದು ವರುಷ ಭೀಕರ ಬರಗಾಲ ಪ್ರಾಪ್ತವಾಯಿತು. ಆದರೂ ಎದೆಗುಂದದೇ ಯಾತ್ರಾ ಪ್ರಾರಂಭ ಮಾಡಿದರು. ಒಂದು ಪ್ರಾತ:ಕ್ಕಾಲದಲ್ಲಿ ಹನುಮಂತಾಚಾರ್ಯರು ನಿತ್ಯದಂತೆಪ್ರಾತ:ಕಾಲದಲ್ಲಿ ಭಾವಿಗೆ ಸ್ನಾನಕ್ಕೆಂದು ಹೊದರು, ಸೊಂಟಕ್ಕೆ ಕಟ್ಟಿಕೊಂಡ ದುಡ್ಡಿನ ಗಂಟನ್ನು ದಂಡೆಯ
ಮೆಲಿಟ್ಟು ಸ್ನಾನ ಮಾಡಿ ಲಗುಬಗೆಯಿಂದಾ ನಿರನ್ನು ತುಂಬಿಕೊಂಡು ಬಂದುಬಿಟ್ಟರು. ಗುಡಿಯಲ್ಲಿ ಕುಳಿತು ನಿತ್ಯಾನ್ಹೇಕಗಳನ್ನು ಮುಗಿಸಿದ ನಂತರ ಅವರಿಗೆ ದುಡ್ಡಿನ ನೆನಪಾಯಿತು. ತಕ್ಷಣವೇ ಓಡಿಹೊಗಿ ನೋಡುತ್ತರೆ ಹಣ ಅಲ್ಲಿ ಎಲ್ಲವಾಗಿತ್ತು. ಇನ್ನು ಅಮ್ಮನಿಗೆ ಹೇಗೆ ಮುಖ ತೊರಿಸುವದೆಂದು (ಅದು ಭಕ್ತರಿಂದಾ ಬಂದಹಣ) ಭೀತಿಯಿಂದಾ ಗುಡಿಗೆಬಂದು
ಯೋಚನಾ ಮಗ್ನನಾಗಿ ಕುಳಿತುಬಿಟ್ಟನು. ಅಪರಾದಿಯಂತೆ ಕುಳಿತ ಹನುಮಂತಾಚಾರ್ಯರನ್ನು ನೋಡಿದ ಅಮ್ಮನವರು "ಏನಪ್ಪಾ ಹನುಮಪ್ಪಾ ಬಹಳ ಬೇಸತ್ತಿಯೇನಪ್ಪಾ" ಸುಮ್ಮನೇ ಕುಳಿತಿರುವೆ,? ಏಂದು ಕೆಳೀದರು.

                                              ಮುಂದುವರೆಯುವದು.......
 
ಸಂಗ್ರಹ -
ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ.
ಹುಬ್ಬಳ್ಳಿ.
9448215151

No comments:

Post a Comment