Tuesday, June 25, 2013

ಉಡುಪಿ ಯಾತ್ರೆ-೩

ಉಡುಪಿ ಯಾತ್ರೆ-೩

ನೀವುಆಜ್ನೆ ಕೂಟ್ಟರೆ ಇಲ್ಲೇ ಎಲ್ಲರಿಗೂ ಮುದ್ರಾಕೂಡುತ್ತೇವೆ ಇಲ್ಲೇ ಹಾಕಲು ಆತಂಕವಾದಲ್ಲಿ ಇಲ್ಲೇ ಸಮೀಪದ ಹಳ್ಳಿಗೆ ಹೋಗಿ ಎಲ್ಲರಿಗೂ ಮುದ್ರಾ ಕೂಟ್ಟು ಪೂಜಾ ತೀರ್ಥ ಪ್ರಸಾದ ಮುಗಿಸಿಕೂಂಡು ಸಾಯಂಕಾಲಕ್ಕೆ ಪರತ ಬರುತ್ತೇವೆ ಅಂತಾ ವಿಚಾರ ಮಾಡಿಕೂಂಡು ಬರಲು ಸನ್ನಿಧಾನಕ್ಕೆ ಕಳಿಸಿರುತ್ತಾರೆ. ತಾವು ಆಜ್ನಾಮಾಡಿದ ಪ್ರಕಾರ ಅಲ್ಲಿ ಅರಿಕೆಮಾಡಿಕೂಳ್ಳುತ್ತೇವೆ. ಅದರಂತೆ ಮುಂದಿನ ಕಾರ್ಯ ಕೈಕೂಳ್ಳಲಾಗುವದು. ಎಂದು ಸದರವಕೀಲರು ವಗೈರೆ ಜನರು ಬಿನ್ನಹ ಮಾಡಿಕೂಳ್ಳಲು ಇವರ ಪ್ರಾರ್ಥನೆಗೆ ಕೃಪಾಶಿರ್ವಾದದಿಂದಾ ನಾನು ಪರ್ಯಾಯ ಪೀಠದಲ್ಲಿ ಇರುವವರೆಗೂ ನಮ್ಮ ಕಣ್ವ ಶಾಖೆಯ ಪೀಠದ ಶ್ರೀಗಳವರಿಗೆ ಪೂರ್ಣ ಅಧಿಕಾರವಿದೆ. ಇನ್ನುಮೇಲೆ ಯಾವುದೇ ಕಾರ್ಯಮಾಡಲು ನಮ್ಮ ಆಜ್ನೆಯ ಅವಶ್ಯವೇ ಇಲ್ಲಾ ಅಂತಾ ತಮ್ಮಕಡೆಗೆ ಬಂದಶಿಷ್ಯರ ಕಡಿಂದಾ ಈಪ್ರಕಾರ ತಮ್ಮ ಸೂಚನೆಯನ್ನು ಮಾಡಿದರು. ಇದೇನು ಸಣ್ಣವಿಷಯವಲ್ಲ. ಆದರೂ ಪರಮಾತ್ಮನ ಸಂಕಲ್ಪಕ್ಕೆ ಎಂತಹ ಮಹತ್ವದ ವಿಷಯವಾದರೂ ಸರಳವಾಗಿ ಹೂಗುತ್ತದೆ. ಶ್ರೀಗಳ ನಿರೂಪ ಬಂದಮೇಲೆ ಎಲ್ಲ ಶಿಷ್ಯರಿಗೂ ಇಲ್ಲಿ ಮುದ್ರಾ ಹಾಕುವದಾಗಿ ತಿಳಿಸಲು ಎಲ್ಲಕಡೆಗೂ ಮುದ್ರಾದ ಗೂಂದಲವೇ ಗೂಂದಲ. ಅಲ್ಲೇ ಕನಕನ ಖಿಂಡಿಯ ಹತ್ತಿರ ಎಡಭಾಗದಲ್ಲಿ ವಿಠಲಕೃಷ್ಣ ಮಂಟಪದ ಮುಂದೆ ಮುದ್ರಾ ಪ್ರಾರಂಬವಾಗಿ ಅಜಮಾಸ ೭-೮ನೂರು ಮಂದಿಗೆ ಮುದ್ರಾ ಕೂಡಲಾಯಿತು. ಇನ್ನು ಶಿರೂರ ಮಠದ ಶ್ರೀಗಳ ದರ್ಶನ ಕಾರ್ಯ ಒಂದು ಉಳಿಯಿತು. ಇದನ್ನೂಂದು ಕಾರ್ಯ ಮುಗಿಸಬೇಕೆಂಬ ವಿಚಾರ ನಡೆಯಿತು. ಇದರ ಬಗ್ಗೆ ವಿಚಾರ ಮಾಡಿಕೂಂಡು ಬರುವದಕ್ಕೂಸ್ಕರ ವೇ|| ಗೋಪಾಲಾಚಾರ್ಯ ಕನಕಗಿರಿ ಮತ್ತು ಪಟ್ವಾಲ ಇವರನ್ನು ಕಣ್ವ ಮಠದ ಶ್ರೀಗಳು ತಮ್ಮ ದರ್ಶನಕ್ಕೆ ಬರುತ್ತಾರೆ ಎಂದು ತಿಳಿಸಲು ಶಿರೂರ ಮಠದ ಶ್ರೀಗಳವರಕಡೆಗೆ ಕಳಿಸಲಾಯಿತು. ಸದರಿಯವರು ಶಿರೂರ ಮಠಕ್ಕೆ ಹೋಗಿ ಶ್ರೀಗಳವರಿಗೆ ಭೇಟಿಯಾಗಿ ಶ್ರೀಕಣ್ವ ಮಠದ ಶ್ರೀಗಳವರು ತಮ್ಮ ದರ್ಶನಕ್ಕೆ ಬರುತ್ತೇವೆಂದು ತಿಳಿಸಲು ನಮ್ಮನ್ನು ಕಳಿಸಿದ್ದಾರೆ. ಆ ಪ್ರಕಾರ ನಾವು ಸನ್ನಿಧಾನದಲ್ಲಿ ಅರಿಕೆ ಮಾಡಿಕೂಂಡಿದ್ದೇವೆ. ಮಹಾದಾಜ್ನೆ ಪ್ರಕಾರ ನಡೆದುಕೂಳ್ಳುತ್ತೇವೆ. ಅಂತಾ ತಿಳೀಸಲಾಗಿ ಅದರಗೋಸ್ಕರ, ಶ್ರೀಗಳವರು ಈಗ ಕಣ್ವಮಠದ ಶ್ರೀಗಳವರು ಅಥಿತಿ ಆಗಿ ಬಂದಿದ್ದಾರೆ. ಅವರನ್ನು ಸ್ವಾಗತ ಪೂರ್ವಕವಾಗಿ ಬರಮಾಡಿಕೂಳ್ಳೂವವರಿದ್ದೇವೆ.
ಸಂಜೆ ೦೪-೦೦ಘಂಟೆಗೆ ನಮ್ಮ ಪರಿವಾರದವರನ್ನು ಶ್ರೀಗಾಲನ್ನು ಆಮಂತ್ರಿಸಿಕೂಂಡು ಬರಲು ಕಳಿಸುತ್ತೆವೆ. ಆಗ್ಗೆ ತಾವೆಲ್ಲರೂ ಕೂಡಿಕೂಂಡು ಬರುವದಾಗಿ ತಿಳಿಸಿದರು. ಅದೇ ಪ್ರಕಾರ ಮುಂದಿನ ಸಿದ್ದತೆ ಮಾಡಲಾಯಿತು. ಇಷ್ಟೆಲ್ಲಾಕಾರ್ಯ ಮುಗಿಯುವದರೂಳಗಾಗಿ ಮದ್ಯಾನ್ಹವಾದದ್ದರಿಂದಾ ಸ್ನಾನ,ಪೂಜಾದಿ ಎಲ್ಲ ಕಾರ್ಯಗಳನ್ನು ಮುಗಿಸಿ ಶ್ರೀಪರ್ಯಾಯ ಪೀಠಾಲಂಕ್ರತ ಶ್ರೀಗಳಿಂದಾ ಕರೆ ಬರಲು ಶ್ರೀಕೃಷ್ಣದೇವರ ಸನ್ನಿಧಾನಕ್ಕೆ ಹೋಗಿ ನೇವೈದ್ಯ ಮಂಗಳಾರತಿ ಮುಗಿಸಿಕೂಂಡು ಎಲ್ಲಶಿಷ್ಯರಿಂದಾ ಚೌಕಿಗೆ ಹೋಗಿ ಎಲ್ಲ ಶ್ರೀಗಳ ಸಹಪಂಕ್ತಿಯಲ್ಲಿ ಭೋಜನ ಮುಗಿಸಿಕೂಂಡು ಬಂದು ನಮ್ಮ ವಾಸಸ್ಥಾನದಲ್ಲಿ ವಿಶ್ರಾಂತಿ ತೆಗೆದುಕೂಳ್ಳಲಾಯಿತು. ಮೂದಲೇ ತಿಳೀಸಿದ ಪ್ರಕಾರ ೦೪-೦೦ಘಂಟೆಗೆ ಶಿರೂರ ಮಠದ ಶ್ರೀಗಳವರು ತಮ್ಮ ದಿವಾನ ಮತ್ತು ಪರಿವಾರದೂಂದಿಗೆ ನಮ್ಮನ್ನುಕರೆಯಬಂದರು. ಸದರಿಯವರ ಸಂಗಡ ನಮ್ಮ ಶಿಷ್ಯ ಸಮೋಹದೂಡನೆ ಶಿರೂರ ಮಠಕ್ಕೆ ಹೋಗಲಾಯಿತು. ಅಲ್ಲಿ ಸ್ವಾಗತ ಸಮಾರಂಭ ಮುಗಿದಮೇಲೆ ಶಿರೂರ ಶ್ರೀಗಳವರ ಸನ್ನಿಹಿತವಾಗಿ ಸಿದ್ದಮಾಡಲ್ಪಟ್ಟ ಪೀಠಾರೋಹಣ ಮಾಡಲಾಯಿತು. ಆಮೇಲೆ ಶಿರೂರ ಶ್ರೀಗಳು ತಮ್ಮಶಿಷ್ಯರದ್ವಾರಾ ನಮಗೆ ಫಲಪುಷ್ಪತಾ ಮತ್ತು ಪೀತಾಂಬರ, ರೂ೫೧-೦೦ ಗಳು ಕಾಣಿಕೆಯಾಗಿ ಕೂಟ್ಟರು. ಅವುಗಳನ್ನು ಸ್ವೀಕರಿಸಲಾಯಿತು. ನಮ್ಮ ಸಿಷ್ಯ ವೇ|| ಶಿನಪ್ಪಯ್ಯ ದೇವರು ದ್ವಾರಾ ಫಲ ಪುಷ್ಪ ಅಕ್ಷತಾ ರೂ೧೦೧-೦೦ ಗಳನ್ನು ಕಾಣಿಕೆಯಾಗಿ ಕೂಡಲಾಯಿತು. ಮತ್ತು ಸ್ವಲ್ಪ ಮಟ್ಟಿಗೆ ಮಠದ ವಿಷಯವನ್ನು ಪರಿಚಯ ಮಾಡಿಕೂಡಲಾಯಿತು. ನಿಮ್ಮ ಪೀಠಸ್ಥರಾದ ಶ್ರೀ ಲಕ್ಷ್ಮೀಮನೋಹರತೀರ್ಥ ಶ್ರೀಪಾದಂಗಳವರಿಂದಾ ನಮ್ಮ ಮೂಲ ಪಿಠಸ್ಥರಾದ ಶ್ರೀ ಮನ್ ಮಾಧವತೀರ್ಥರಿಗೆ ಆಶ್ರಮ ಕೂಟ್ಟು ಮಠ ಸ್ಥಾಪನಮಾಡಿಸಿರುತ್ತಾರೆ. ಹಿಂದೆ ಶ್ರೀ ಮಾಧವತೀರ್ಥರು ಬರೆದುಕೂಟ್ಟ ಶರ್ತುಗಳು ಏನು ಇರುವವೂ ಏನು ಏಂದು ಅವುಗಳನ್ನು ನಮಗೆ ಸರಿಪಡಿಸಲು ಸಾದ್ಯವೋ, ಅಸಾಧ್ಯವೋ ಏಂಬಭಯದಿಂದಾ ಇಲ್ಲಿಯವರೆಗೂ ನಮ್ಮ ಪೀಠದ ಯಾವ ಶ್ರೀಗಳವರು ಇಲ್ಲಿಗೆ ಬಂದಿರುವದಿಲ್ಲಾ. ಈಗಮಾತ್ರ ನಾವು ಶ್ರೀವಿಠಲಕೃಷ್ಣನ ಮೂಲ ರಜತಪೀಠವನ್ನು, ಮೂಲಸ್ಥಾನದ್ಲ್ಲಿ ಇರುವ ಶ್ರೀ ಕೃಷ್ಣನ ದರ್ಶನ ಮತ್ತು ನಮ್ಮ ಪೀಠವನ್ನುಸ್ತಾಪಿಸಲು ಆಧಾರಸ್ಥಂಬವಾದ ನಮಗೆ ಗುರುಪೀಠವಾದ ನಿಮ್ಮಪೀಠವನ್ನು ಅವಲೋಕನ ಮಾಡಲು ಶ್ರೀಕೃಷ್ಣನ ಪ್ರೇರಣೆಯಿಂದಾ ಅತೀ ಆತುರರಾದೆವು. ಇಲ್ಲಿಗೆ ಈಗ ೨೦೦ವರ್ಷಗಳ ಹಿಂದೆ ರಜತಪೀಠ ಬಿಟ್ಟು ಕಣ್ವಪೀಠಕ್ಕೆ ಬಂದ ಶ್ರೀ ಹರಿಗೂ ತನ್ನ ಪೀಠಕ್ಕೆ ಹೋಗಬೇಕೆಂಬ ಆತುರ.
ಆದರೆ ಭಕ್ತಾಭಿಮಾನಿಯಾದ ಶ್ರೀಹರಿಯು ಭಕ್ತರಬಿಟ್ಟು ಹೋಗಲು ಸಾಧ್ಯವೇಇಲ್ಲವೆಂಬ ಚರ್ಚಯಗೋಸ್ಕರವಾಗಿ ಸ್ವಲ್ಪವಿಷಯಗಳನ್ನು ಬೆಳೆಸಬಯಸುವೆವು. ಈಗ ನಮ್ಮದೇ ಒಂದು ವಿಷಯ ನಾವು ವಿಜಾಪೂರ ಜಿಲ್ಲೆಯ ಬಾಗೆವಾಡಿತಾಲ್ಲೂಕದ ಬಳೂತಿ ಎಂಬ ಗ್ರಾಮದ ಜೋಯ್ಸರ ಮನೆಯಲ್ಲಿ ಹಿಟ್ಟಿದವನು ಕಣ್ವಪೀಠದ ಅತೀ ಅಪರಿಚಿತನು. ಸುಖ ದುಖ:ದ ತೋಳಲಾಟದಲ್ಲಿ ಅಜ್ನಾಂಧಕಾರದಲ್ಲಿ ಬಿದ್ದು ಯಾವಮಾರ್ಗ ತೋಚದಂಥಾ ಅಧಮನು. ಪ್ರಚಾರಗಳಿಗೆ ಉಪಯುಕ್ತವಾದಂತಾ ಒಂದು ಕಿಂಚಿತ್ ಶಕ್ತಿಯು ನನ್ನಲ್ಲಿರುವದಿಲ್ಲಾ. ಇಂತಹ ಸ್ತಿತಿಯಲ್ಲಿ ಕರುಣಾಸಾಗರನಾದ ಶ್ರೀ ಹರಿಯು ಕಣ್ವ ಮಠದ ಶಿಷ್ಯಂತರ್ಗತನಾಗಿ ನನ್ನನ್ನು ಹುಡುಕುಬಂದ ತನ್ನ ಸೇವೆಗೋಸ್ಕರ ಎಳೆತಂದ ಶ್ರೀಹರಿಯುನಮ್ಮನ್ನು ಬಿಟ್ಟು ಉಡುಪಿಗೆ ಹೋಗಲು ಸಾಧ್ಯವೇ. ಎಂದಿಗೂ ಆಗಲಾರದು, ಶ್ರೀಹರಿಯು ಹೇಗಾದರೂ ಭಕ್ತರಬಿಟ್ಟು ಅಗಲಲಾರಾ. ನಾವು ಅಪರಿಚಿತರಾದ್ದರಿಂದಾ ಯಾವ ಕಾರ್ಯವನ್ನು ಯಾವ ಶಿಷ್ಯರಿಗೆ ವಹಿಸಬೆಕೆಂಬುದರ ವಿಷಯದಲ್ಲಿ ನಮ್ಮ ಬುದ್ದಿಯು ಕುಂಠಿತವಾದದ್ದು ಸಹಜವದೆ. ಅದಕ್ಕೂಸ್ಕರವಾಗಿ ಶ್ರೀಹರಿಯು ಎಲ್ಲಭಾರವನ್ನು ತಾನೇ ಸಹಿಸಬೇಕಾಯಿತು. ಏಲ್ಲಶಿಷ್ಯರಿಗೆ ಯಾವಯಾವ ಪ್ರೇರಣೆ ಮಾಡಬೇಕು ಮಾಡಿ ಆ ಪ್ರೇರಣೆಯ ಪ್ರಕಾರ ಅವರು ಮಾಡುವ ಕಾರ್ಯಗಳಿಗೆ ಅನಕೂಲ ಮಾಡಿಕೂಟ್ಟು ಎಲ್ಲರನ್ನು ತನ್ನ ಪೀಠಕ್ಕೆ ಕರೆದುಕೂಂಡು ಬಂದನು. ಇರಲಿ ನಾವು ಸ್ವಲ್ಪದರಲ್ಲಿಯೇ ನಮ್ಮ ಮಠದ ವಿಷಯವನ್ನು ತಿಳಿಸಲಾಯಿತು. ಎಲ್ಲ ವಿಷಯಗಳಳನ್ನು ತಿಳಿದುಕೂಂಡ ಮೇಲೆ ಒಳ್ಳೆ ಹರ್ಷೂದ್ಗಾರಗಳಿಂದಾ ಶಿರೂರ ಮಠದ ಶ್ರೀಗಳು ನುಡಿದ ಎರಡು ಮಾತುಗಳು ಹಿಂದಿನ ವಿಷಯ ಹಿಂದೆ ಆಯಿತು ಮುಂದೆ ಆ ವಿಷಯಗಳನ್ನು ಎತ್ತುವಕಾರಣವಿಲ್ಲಾ. ನಮ್ಮಪೀಠದಿಂದಾ ಕಣ್ವಪೀಠ ಸ್ತಾಪಿತವಾಗಿದೆ ಎಂಬಗೌರವವೇ ಸಾಕು. ಹೆಚ್ಚಿನದೇನೂ ಬೇಡಾ. ಇನ್ನುಮೇಲೆ ಎಲ್ಲಪೀಠಗಳೂ ಒಕ್ಕಟ್ಟಾಗಿನಡೆದರೆ ಎಲ್ಲಾ ಕಾರ್ಯಗಳು ಅನಕೂಲವಾಗಿ ಮಠಗಳ ಗೌರವವು ಉಳಿಯುತ್ತವೆ. ಸಮಾಜ ಸುಧಾರಣೆಯಗೂಸ್ಕರ ಹೆಚ್ಚು ಪ್ರಯತ್ನ ಮಾಡಲುಸಾದ್ಯ ವಾಗುತ್ತದೆ. ಇನ್ನು ಮೇಲೆ ನೀವುಯಾವ ಸಂಕೂಚ ತಕ್ಕೂಳ್ಳುವ ಕಾರಣವಿಲ್ಲಾ. ನೀವು ಇನ್ನು ಮೇಲೆ ಬೇಕಾದಾಗ್ಗೆ ಬರಬಹುದು. ನೀವು ಯಾವಾಗ್ಗೆ ಬಂದರೂ ನಿಮ್ಮ ಪೀಠಕ್ಕೆ ಗೌರವವಿದೆ. ಮತ್ತು ಯಾವ ಅನುಮಾನವಿಲ್ಲದೆ ನಿಮ್ಮ ಕೂಡಾ ಸಹಕರಿಸಿ ನೀವು ಬಂದಕಾರ್ಯಗಳನ್ನು ಮುಗಿಸಿ ನಿಮ್ಮನ್ನು ಪರತ ಕಳಿಸುವದು ನಮ್ಮದಿರುತ್ತದೆ. ಅಂತಾ ಹೇಳಿಬಿಟ್ಟರು.
ಆಮೇಲೆ ಫೋಟೋ ವಗೈರೆ ತೆಗೆಯುವ ಕಾರ್ಯಕ್ರಮಗಳು ಮುಗಿದ ನಂತರ ಪರತ ನಮ್ಮ ಸ್ತಾನಕ್ಕೆ ಬಂದೆವು. ಆಮೆಲೆ ಕೃಷ್ಣಾಪುರ ಮಠಕ್ಕೆ ಹೂಗಿ ಮೂದಲಿನಂತೆ ಕಾರ್ಯಕ್ರಮ ಮುಗಿಸಿಕೂಂಡು ಬಂದೆವು. ಆಮೇಲೆ ಮಠದ ನಿಮಿತ್ಯವಾಗಿ ಒಂದು ಸೇವಾ ಮಾಡಿಸಬೇಕು ಅಂತಾ ಎಲ್ಲ ಶಿಷ್ಯರು ಕೂಡಿಕೂಂಡು ವಿಚಾರ ಪ್ರಾರಂಭಮಾಡಿದರು. ಎಲ್ಲರೂ ತಮ್ಮ ಮನಸ್ಸಿನ ವಿಚಾರಗಳನ್ನು ತಿಳಿಸಲು ಪ್ರಾರಂಭ ಮಾಡಿದರು. ಎಲ್ಲರವಿಚಾರಗಳ ಸಮ್ಮಿಲನ ಮಾಡಿ ರಜತ ರಥೋತ್ಸವ ಮಾಡಿಸಬೇಕೆಂದು ನಿಶ್ಚಯಿಸಲಾಯಿತು. ಎಲ್ಲಶಿಷ್ಯರು ತಮ್ಮ ಯೂಗ್ಯತೆಯ ಮೇರೆಗೆ ವರ್ಗಣಿಕೂಡಿಸಿಕೂಂಡು ರೂ ೫೦೧/ ಕೂಟ್ಟು ಅವತ್ತಿನ ದಿವಸ ರಥೂತ್ಸವ ಮಾಡಿಸಲಾಯಿತು. ನಂತರ ಸಾಯಂಕಾಲದ ಸ್ನಾನ ಮಂಗಳಾರತಿ ಎಲ್ಲ ಕಾರ್ಯಕ್ರಮ ಮುಗಿಸಿ ಆಮಂತ್ರಿಸಿದ ಪ್ರಕಾರ ಸಭಾಸ್ಥಾನಕ್ಕೆ ಬರಲಾಯಿತು. ಅಲ್ಲಿ ಪ್ರೇಕ್ಷಕರು, ಭಾಷಣಕಾರರು, ಗಾಯಕರು, ಮಾನಪತ್ರಾರ್ಪಣ ಮಾಡುಅವವರಿಂದಾ ಅಸಂಖ್ಯಾತ ಜನ ಗುಂಪುಗೂಡಿದ್ದಾಗಿತ್ತು. ಸಭಾವೇದಿಕೆಯಮೇಲೆ ನಾಲ್ಕು ಜನ ಶ್ರೀಗಳವರು ಉಪಸ್ಥಿತರಾಗಿದ್ದರು. ೧) ವಿದ್ಯಮಾನ್ಯ ತೀರ್ಥ ಭಂಡಾರಕೇರ ಶ್ರೀಗಳು, ೨) ವಿಶ್ವೇಶತೀರ್ಥ ಪೇಜಾವರಶ್ರೀಗಳು, ೩) ಶ್ರೀ ವಿದ್ಯಾತಪೋನಿಧಿ ತೀರ್ಥ ಕಣ್ವ ಮಥದ ಶ್ರೀಗಳು, ೪) ಚಿತ್ತಾಪೂರದ ಶ್ರೀಗಳವರು. ಈಪ್ರಕಾರ ಶ್ರೀಗಳವರು ಪೀಠಾರೋಹಣ ಮಾಡಿರಲು ಎಲ್ಲಕಾರ್ಯಗಳು ಇವರ ಅಧಿಕಾರ ಕ್ಷೇತ್ರದಲ್ಲಿಯೇ ನಡೆಯುವವು ಎಂಬ ಭಾವನೆಯಾಗಿ ಎಲ್ಲರ ಭಿತ್ತಿವೃತ್ತಿಯು ಇವರಲ್ಲಿಯೇ ತಲ್ಲೀನವಾಗಿದ್ದವು. ಮೂದಲಿಗೆ ಮಾನಪತ್ರ ವಂದನಾರ್ಪಣೆ, ಗಾಯನ, ಭಾಷಣ, ಈ ಪ್ರಕಾರ ಕರ್ಯಕ್ರಮಗಳು ಮೂದಲೇ ಠರಾಯಿಸಿ ಒಂದೂಂದು ಕಾರ್ಯದಲ್ಲಿ ಒಬ್ಬವ್ಯಕ್ತಿಗೆ ಇಂತಿಷ್ಟು ವೇಳೆ ಎಂಬ ನಿರ್ಭಂದ ಮಾಡಿ ಅದರಂತೆ ಒಂದು ಬೋರ್ಡಮೇಲೆ ಹಚ್ಚಲಾಯಿತು. ಆ ಮೇಲೆ ಕಾರ್ಯಕ್ರಮಗಳು ಪ್ರಾರಂಭ ಮಾಡಲ್ಪಟ್ಟವು. ಅಲ್ಲಿಯ ಶಾಂತತೆ, ಒತ್ಸಾಹ ವಿದ್ವನ್ಮಣಿಗಳ ಸಮೂಹ ಇದರಗೂಸ್ಕರವಾಗಿ ಎಲ್ಲರೂ ತಮ್ಮಕ್ರಮದಲ್ಲಿ ವೇಳೆಯ ಆಕ್ರಮಣ ಮಾಡಲಾರಂಭಿಸಿದರು. ಹಿಗಾಗಿ ವೇಳೆಯು ಸಾಲದಾಯಿತು. 
ವಂದಾನರ್ಪಣೆ, ಗಾಯನ ಮುಗಿದಮೇಲೆ ಭಾಷಣದ ವೇಳೆತೀರಾ ಸ್ವಲ್ಪ ಒಳಿಯಿತು. ಭಾಷಣಕಾರರು ತಮ್ಮ ಭಾಷಣಗಳ ಮೂಲಕ ಎಲ್ಲ ಜನರ ಮೇಲೆ ಪರಿಣಾಮವಾಗಹತ್ತಿದ್ದರಿಂದಾ ಭಾಷಣಕಾರರಿಗೆ ನಿಮ್ಮ ವೇಳೆ ಮುಗಿಯಿತು ಅಂತಾ ಸೂಚನೆ ಕೂಡಲಾಯಿತು. ಆಮೇಲೆ ಪೇಜಾವರ ಶ್ರೀಗಳವರು ಪ್ರವಚನ ಪ್ರಾರಂಭವಾಯಿತು. ಈಗನಡೆದ ಪರ್ಯಾಯದ ಉತ್ಸವಕ್ಕೆ ಸದ್ಭಕ್ತರು, ಜ್ನಾನಿಗಳು, ವಿದ್ವಾನಜನರು, ತಮ್ಮ ತನು ಮನ ಧನುಗಳೀಂದಲೂ ಸೇವೆಸಲ್ಲಿಸತಕ್ಕ ಕಾರ್ಯಕರ್ತರು ಇಲ್ಲಿಗೆ ಆಗಮಿಸಿ ಭಗವಹಿಸಲಾಗಿತ್ತು. ಎಲ್ಲ ಕಾರ್ಯಗಳು ಒಳ್ಳೆವಿಜ್ರಂಭಣೆಯಿಂದಾ ಜರುಗಿದವು. ಅದರಲ್ಲಿ ಕಣ್ವಮಠದ ಶ್ರೀಗಳ ಆಗಮನದಿಂದಾ ವಿಶೇಷವಾದ ಕಳೆಬಂದಿರುತ್ತದೆ. ಈಗ ಕಣ್ವಪೀಠದಲ್ಲಿರುವ ಶ್ರೀವಿದ್ಯಾತಪೂನಿಧಿ ತೀರ್ಥ ಶ್ರೀಪಾದಂಗಳವರು ತಪಸ್ವಿಗಳು, ಒಳ್ಳೆವರ್ಚಸ್ವಿಗಳು, ಸತ್ವಸ್ತರು, ಸಮಾಜಊದ್ಧರಕ್ಕೋಸ್ಕರ ಒಳ್ಳೆ ಕಳೆಕಳೆಯುಳ್ಳವರು. ಮತ್ತು ಭಗವತ್ಕೃಪೆಗೆ ಪಾತ್ರರಾಧವರೆಂಬ ಬಗ್ಗೆ ನಮಗೆ ಮನವರಕೆಯಾಗಿದೆ. ಆಶ್ರಮ ತೆಗೆದುಕೂಂಡ ೬ ತಿಂಗಳಲ್ಲಿ ಹಿಂದೆ ಪಿಠಾದ್ಯಂತ ಇಲ್ಲಿಗೆ ಬರಲು ಪ್ರಯತ್ನಮಾಡಿ ಯಾವಶ್ರೀಗಳಿಗೂ ಸಾದ್ಯವಾಗದ ರಜತಪೀಠಕ್ಕೆ ಸರಳವಾಗಿ ಬಂದುಬಿಟ್ಟರು. ಇರಲಿ ಈಕಣ್ವ ಮಠವು ನಮ್ಮ ಉಡುಪಿಯ ಶಿರೂರ ಮಠದ ಶ್ರೀ ಲಕ್ಷ್ಮೀಮನೂಹರತೀರ್ಥರಿಂದಾ ಆಶ್ರಮ ಪಡೆದ ಶ್ರೀಮನ್ಮಾಧವತೀರ್ಥ ಶ್ರೀಗಳವರಿಂದಾ ಸ್ಥಾಪಿಸಲ್ಪತ್ತಿರುವದು. ಅಂದಮೇಲೆ ನಮ್ಮದೇ ಆಯಿತು. ಅಂತುಒತ್ತಿನಲ್ಲಿ ಹೇಳುವದೆಂದರೆ ಉಡುಪಿಯ ಎಂಟುಮಠದ ಪೈಕಿ ಕಣ್ವಮಠ ಒಂಬತ್ತನೇಯ ಮಠವೆಂದು ಎಲ್ಲರೂ ಸಹಕರಿಸಿ ಗೌರವಯುಕ್ತವಾಗಿ ನಡೆದುಕೂಳ್ಳಬೇಕೆಂದು ನಾವು ನಿ:ಸ್ಸಂಡೆಹವಾಗಿ ಹೇಳುತ್ತೇವೆ. ಮತ್ತು ಎಲ್ಲ ಜನರು ಈಕಾರ್ಯದಲ್ಲಿ ಭಾಗವಹಿಸಿದ್ದರಿಂದಾ ನಿಮ್ಮೆಲ್ಲರಿಗೂ ಆಯು, ಆರೂಗ್ಯ ಐಶ್ವರ್ಯ, ಅಭಿರ್ವದ್ದಿಯಾಗಲೆಂದು ಕೋರಿ ವೇಳೆ ಸಂಕುಚಿತ ಮೂಲಕವಾಗಿ ನಮ್ಮ ಪ್ರವಚನ ಮುಗಿಸುತ್ತೇವೆ.
ನಮಗೆ ನಿಕಟ ಸಂಬಂಧ ಶಿಷ್ಯರಾದ ದೇವರು ವಕೀಲರೇ ಮೂದಲಾದ ಎಲ್ಲರೂ ಈಗ ಇಲ್ಲಿ ನಮ್ಮ ಶ್ರೀಗಳು ತಾವು ಸ್ವಲ್ಪ ಮಟ್ಟಿಗೆ ಭಾಷಣ ಮಾಡಿದರೆ ನೆಟ್ಟಗಾಗುತ್ತಿತ್ತು. ಅಂತಾ ಕೇಳಿಕೂಳ್ಳಲು ಧೈರ್ಯವಾಗದೇ ಯಲ್ಲರಿಗೂ ಪ್ರವಚನ ಹೇಳಲು ಧೈರ್ಯ ಬರಲಿಲ್ಲಾಯಂದು ತಿಳಿದುಕೂಂಡು ಉಪಾಯವಿಲ್ಲಾ ಅಂತಾ ಉದಸೀನರಾಗಿಬಿಟ್ಟರು. ಆದರೆ ಶ್ರೀವಿಠಲಕೃಷ್ಣನ ಪ್ರೇರಣೆಯಿಂದಾ ನಾವುಇಲ್ಲಿ ಪ್ರವಚನರೂಪವಾಗಿ ಎರಡು ಮಾತಾಡುವ ಕುತುಹಲ. ಆದರೆ ಬೋರ್ಡಿನಲ್ಲಿ ನಮಗೆ ಮಾತನಾಡಲು ವೇಳೆಇಲ್ಲಾ ಇದರಿಂದಾ ನಾವು ಪೇಜಾವರ ಶ್ರೀಗಳವರಿಗೆ ನಮಗೆ ಪ್ರವಚನೆಗೂಸ್ಕರವಾಗಿ ಸ್ವಲ್ಪ ವೇಳೆ ತೆರು ಮಾಡಿಕೂಡಲು ವಿಚಾರಿಸಿದೆವು. ಆಗೆ ಶ್ರೀಗಳವರು ನೀವು ಬೇಕಾದಷ್ಟು ವೇಳೆ ತೆಗೆದುಕೂಳ್ಳಬಹುದು ಅಂತಾ ಹೇಳಿ ಇನ್ನುಮುಂದಿನ ವೇಳೆಯನ್ನು ಶ್ರೀಕಣ್ವಮಠದ ಶ್ರೀಗಳ ಪ್ರವಚನದಗೂಸ್ಕರ ಕೂಟ್ಟಿದೆ. ಅವರದು ಮುಗಿದಮೇಲೆ ಮುಂದಿನವರು ಪ್ರಾರಂಭ ಮಾಡಬೇಕು ಅಂತಾ ಎಲ್ಲರಿಗೂ ಸೂಚನೆ ಮಾಡಿದರು. ಆಮೇಲೆ ನಮ್ಮ ಪ್ರವಚನ ಪೂರ್ವದಲ್ಲಿ ಮೂದಲು ಶುಕ್ಲಾಂಭರಧರಂ ಇದರಿಂದಾ ವಿಠಲಕೃಷ್ಣನಿಗೆ ಮತ್ತು ವಂದೇಹಂ ಮಂಗಲಾತ್ಮಾನಾಂ ಇದರಿಂದಾ ಯೂಗೀಶ್ವರ ಯಾಜ್ನ್ಯವಲ್ಕ್ಯರಿಗೂ ಮತ್ತು ಮಾಧವಾರ್ಯರಿಂದಾ ಎಲ್ಲ ಗುರುಗಳಿಗೂ ವಂದನಾರ್ಪಣೆ ಮಾಡಿ ನಮ್ಮ ಪ್ರವಚನ ಪ್ರಾರಂಭ ಮಾಡಿದೆವು. ಈಗಿನ ವೇಳೆಯಲ್ಲಿ ನಮಗೆ ಇಲ್ಲಿಗೆ ಬರಲು ಸಾದ್ಯವೇ ಇದ್ದಿಲ್ಲಾ. ಆದರೆ ರಜತ ಪೀಠಸ್ಥನಾದ ಕೃಷ್ಣದೇವರು ತಮ್ಮ ಪ್ರೇರಣೆಯಿಂದಾ ಪೇಜಾವರ ಶ್ರೀಗಳು ಅನಾನುಕೂಲತೆಯನ್ನೆಲ್ಲ ಬದಿಗೆ ಸರಿಸಿ ಕಣ್ವ ಪೀಠದಿಂದಾ ರಜತಪೀಠದವರೆಗೆ ಅನಕೂಲದಸಿದ್ದಾಂತ ಸೂಚನೆ ಮಾಡಿಕೂಟ್ಟುಬಿಟ್ಟರು. ಈಪರ್ಯಾಯದ ನಿಮಿತ್ಯಗೂಸ್ಕರ ರಜತಪೀಠಕ್ಕೆ ಬಂದಶ್ರೇಯಸ್ಸಿಗೆ ಪೇಜಾವರಶ್ರೀಗಳೇ ಎಂದು ನಿಸ್ಸಂದೇಹವಾಗಿ ಹೇಳುತ್ತೆವೆ. ಮತ್ತು ಈಗ ತಮ್ಮಪ್ರವಚನದಲ್ಲಿ ಕಣ್ವಮಠದ ಬಗ್ಗೆ ತೂರ್ಪಡಿಸಿದ ಕಳಕಳಿಯಬಗ್ಗೆ ನಮಗೆ ಬಹಳೇ ಆನಂದವಾಗಿದೆ.ಈಗಿನ ವೇಳೆಯಲ್ಲಿ ನಮಗೆ ಇಲ್ಲಿಗೆ ಬರಲು ಸಾದ್ಯವೇ ಇದ್ದಿಲ್ಲಾ. ಆದರೆ ರಜತ ಪೀಠಸ್ಥನಾದ ಕೃಷ್ಣದೇವರು ತಮ್ಮ ಪ್ರೇರಣೆಯಿಂದಾ ಪೇಜಾವರ ಶ್ರೀಗಳು ಅನಾನುಕೂಲತೆಯನ್ನೆಲ್ಲ ಬದಿಗೆ ಸರಿಸಿ ಕಣ್ವ ಪೀಠದಿಂದಾ ರಜತಪೀಠದವರೆಗೆ ಅನಕೂಲದಸಿದ್ದಾಂತ ಸೂಚನೆ ಮಾಡಿಕೂಟ್ಟುಬಿಟ್ಟರು. ಈಪರ್ಯಾಯದ ನಿಮಿತ್ಯಗೂಸ್ಕರ ರಜತಪೀಠಕ್ಕೆ ಬಂದಶ್ರೇಯಸ್ಸಿಗೆ ಪೇಜಾವರಶ್ರೀಗಳೇ ಎಂದು ನಿಸ್ಸಂದೇಹವಾಗಿ ಹೇಳುತ್ತೆವೆ. ಮತ್ತು ಈಗ ತಮ್ಮಪ್ರವಚನದಲ್ಲಿ ಕಣ್ವಮಠದ ಬಗ್ಗೆ ತೂರ್ಪಡಿಸಿದ ಕಳಕಳಿಯಬಗ್ಗೆ ನಮಗೆ ಬಹಳೇ ಆನಂದವಾಗಿದೆ. ಮತ್ತು ಅವರು ಹೇಳಿದ ಪ್ರಕಾರ ಕಣ್ವಮಠ ಉಡುಪಿಗೆ ೯ನೇ ಮಠವಾದ ಮೇಲೆ ಕಣ್ವಮಠವಾದರೂ ಉಡುಪಿಪೀಠದ ಶ್ರೀಗಳವರು ಯಾವುದೇಕಾರ್ಯಕ್ರಮ ಕೈಗೂಳ್ಳಲು ಸದರ ಕಾರ್ಯಕ್ಕೆ ಹೆಗಲಿಗೆ ಹೆಗಲುಕೂಟ್ಟು ಸಹಕಾರ ನೀಡುವದರಲ್ಲಿ ತನ್ನ ಯೂಗ್ಯತೆಯ ಮಟ್ಟಿಗೆ ಕಣ್ವಮಠವು ಸದಾ ಸಿದ್ದವಾಗಿದೆ ಎಂದು ನಿಸ್ಸಂದೇಹವಾಗಿ ಹೇಳುವೆವು. ಮತ್ತು ಈವೇಳೆಯನ್ನು ನಮಗೆ ಮೀಸಲಾಗಿ ಕೂಟ್ಟ ಪೇಜಾವರ ಶ್ರೀಗಳವರಿಗೆ ಧನ್ಯವಾದಗಳನ್ನು ಅರ್ಪಿಸುವೆವು ಮತ್ತು ನಿಮ್ಮೆಲ್ಲರಿಗೂ ತನ್ನ ಕೃಪಾಬಲದಿಂದಾನಿಮ್ಮೆಲ್ಲರನ್ನು ಕಾಪಾಡಲೆಂದು ಶ್ರೀ ವಿಠಲಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ ನಮ್ಮಪ್ರವಚನ ಮುಗಿಸುವೆವು.) ಮತ್ತು ಮುಂದೆ ಮತ್ತೇ ಭಾಷಣಗಳಾದವು. ಅವರ ಪರಿಚಯವಿಲ್ಲದ ಮೂಲಕವಾಗಿ ಬರೆಯಲು ಸಾಧ್ಯವಾಗಲಿಲ್ಲಾ. ಸಭಾ ವಿಸರ್ಜನಾ ನಂತರ ಎಲ್ಲರೂ ತಮ್ಮ ಸ್ಥಾನಗಳಿಗೆ ಹೋದರು. ದಿ||೨೧-೦೧-೧೯೬೮ರಂದು ಮುಂಜಾನೆ ಸ್ನಾನಾನ್ಹೇಕಗಳು ಮುಉಗಿದಮೇಲೆ ಉಳಿದ ಜನರಿಗೆ ಮುದ್ರಾ ಹಾಕಲಾಯಿತು. ಮತ್ತು ಕರೆಯ ಬಂದ ಪ್ರಕಾರ ಎಲ್ಲಮಠಗಳಿಗೆ ಹೋಗಿಬರಲಾಯಿತು. ಕಾಣಿಕೆ ಕೂಡುವದು ಮರ್ಯಾದಾ ಮಾಡುವದು ಮುಗಿದಮೇಲೆ .ಎಲ್ಲ ಶ್ರೀಗಳ ಸನ್ನಿಧಾನದಲ್ಲಿ ಚೌಕಿಯಲ್ಲಿ ಭೋಜನ ಸಮಾರಂಭ ಮುಗಿದಮೇಲೆ ಪರತ ಹೂರಡುವ ತಯಾರು ಪ್ರಾರಂಭವಾಯಿತು. ಮತ್ತು ೪-೦೦ಘಂಟೆಗೆ ಪೇಜಾವರಶ್ರೀಗಳನ್ನು, ಭಂಡಾರಕೇರಿ ಶ್ರೀಗಳನ್ನು ಕರೆಸಲಾಯಿತು. ಸದರಿಯವರಿಗೆ ಫಲ ಪುಷ್ಪ ಕಾಣಿಕೆಯನ್ನು ಕೂಡಲಾಯಿತು. ಇಬ್ಬರಿಗೂ ರೂ೧೦೦/ ಕೂಡಲಾಯಿತು. ಮತ್ತು ಪುನ: ಪೇಜಾವರ ಶ್ರೀಗಳು ಒಂದು ಪೀತಾಂಬರ ರೂ೨೦೦/ ಫಲಪುಷ್ಪಗಳನ್ನು ನಮಗೆ ಕೂಟ್ಟರು. ಅಲ್ಲಿ ಬಂದ ಬ್ರಾಹ್ಮಣರಿಗೆ ಕಿಂಚಿತ ಸಂಭಾವನಾ ಕೂಡಲಾಯಿತು.
ಎಲ್ಲಕಾರ್ಯಗಳನ್ನು ಮುಗಿಸಿಕೂಂಡು ಶ್ರೀಗಳಿಂದಾ ನೀರೂಪ ತೆಗೆದುಕೂಂಡು ವಾದ್ಯವೈಭವಗಳಿಂದಾ ಬಂದು ಜೀಪಿನಲ್ಲಿ ಕುಳಿತುಕೂಂಡು ಎಲ್ಲರಿಗೂ ಮಂತ್ರಾಕ್ಷತೆ ಕೂಟ್ಟು ರೂ೧೦/ ಬಾಜಿವಗೈರೆಯವರಿಗೆ ಖುಷಿ ಕೂಟ್ಟು ಹೂರಟೆವು.

No comments:

Post a Comment