Sunday, August 11, 2013

ಶ್ರಾವಣ ಮಾಸ

                       
ಶ್ರಾವಣ ಮಾಸವು ಶ್ರೀಧರ ಹಾಗು ಶ್ರೀ ಧನ್ಯ ದೇವತೆಯುಳ್ಳದ್ದು. ಪೂರ್ಣಿಮಾದಲ್ಲಿ ಶ್ರವಣಾ ನಕ್ಷತ್ರದ ಯೋಗವಿರುವಾಗ ಶ್ರಾವಣ ಮಾಸವು ಬರುತ್ತದೆ. ಶ್ರಾವಣದಲ್ಲಿ ಮಾಡಿದ ಭಗವನ್ಮಹಿಮೆಯ ಮಂತ್ರಸಿದ್ಧಿಯನ್ನು ಕೊಡುವದರಿಂದಲೂ ಶ್ರಾವಣಮಾಸ ಯನಿಸಿದೆ. ಶ್ರಾವಣಮಾಸದ ಯಾವ ದಿನವೂ ವೃತರಹಿತವಾಗಿಲ್ಲಾ. ಒಂದು ದಿನವೂ ವೃತ ಮಾಡದೇ ಶ್ರಾವಣವನ್ನು ಯಾರು ಕಳೆಯುವರೋ ಅವರು ನರಕವನ್ನು ಹೊಂದುವರು.

ವೃತಗಳು-
೧) ಏಕ ಭುಕ್ತವೃತ.
೨) ಮಂಗಳ ಗೌರಿ ವೃತ.
೩) ಬುಧ,ಭ್ರಹಸ್ಪತಿ ವೃತ.
೪) ಜೀವಂತಿಕಾ ವೃತ.
೫) ಶನೇಶ್ವರ ವೃತ.
೬) ರೋಟಿಕಾ ವೃತ.
೭) ದೂರ್ವಾಗಣಪತಿ ವೃತ.
೮) ಅನಂತ ವೃತ.
೯) ನಾಗಚತುರ್ಥಿ
೧೦) ನಾಗ ಪಂಚಮಿ
೧೧) ಗರುಡ ಪಂಚಮಿ.
೧೨) ಸಿರಿಯಾಳ ಷಷ್ಟಿ.
೧೩) ಅವ್ಯಂಗ ವೃತ.
೧೪) ಶೀತಲಾಸಪ್ತಮಿ ವೃತ.
೧೫) ಪುತ್ರದಾ ಏಕಾದಶಿ ವೃತ.
೧೬) ಪವಿತ್ರಾರೋಪಣವೃತ
೧೭) ದುರ್ಗಾಷ್ಟಮಿ.
೧೮) ಕೃಷ್ಣಾಷ್ಟಮಿ.
೧೯) ವಾಮನ ಜಯಂತಿ.
೨೦) ಅಗಸ್ತ್ಯಾರ್ಘ್ಯ
೨೧) ಮಹಾಲಕ್ಷ್ಮೀವೃತ.

೧) ಏಕಭುಕ್ತ ವೃತ-
ದಿನಕ್ಕೆ ಒಂದುಬಾರಿ ಮಾತ್ರ ಊಟವನ್ನು ಮಾಡಬೇಕು. ಬೆಳಗಿನಿಂದಾ ಉಪವಾಸವಿದ್ದು ಸಂಜೆ ೪.೦೦ ಘಂಟೆಗೆ ಊಟವನ್ನು ಮಾಡಿ ಮತ್ತೆ ಫಲಹಾರಾದಿಗಳನ್ನು ಮಾಡದೇ ಶ್ರೀಧರನ ಪ್ರೀತಿಗಾಗಿ ತುಪ್ಪ, ಕ್ಷೀರ, ಹಣ್ಣು ಮೊದಲಾದವುಗಳನ್ನು ಬ್ರಾಹ್ಮಣನಿಗೆ ದಾನ ಮಾಡಬೇಕು.

೨) ಮಂಗಳ ಗೌರಿವೃತ -

ಮಾಸದಲ್ಲಿ ಬರುವ ೪/೫ ಮಂಗಳವಾರದಲ್ಲಿ ಈ ವೃತವನ್ನ ಮಾಡಬೇಕು. ನವ ವಿವಾಹಿತ ಸ್ತ್ರೀಯರು ವಿವಾಹ ವರ್ಷದಿಂದಾ ೫ ವರ್ಷ ಪರ್ಯಂತ ಈ ವ್ರುತವನ್ನು ಮಾಡಬೇಕು. ಮೂದಲ ವರ್ಷ ತಾಯಿಯ ಮನೆಯಲ್ಲಿಯೂ, ನಂತರದ ವರ್ಷಗಳಲ್ಲಿ ಪತಿಯ ಮನೆಯಲ್ಲಿಯೂ ಆಚರಿಸತಕ್ಕದ್ದು.

) ಬುಧ, ಬ್ರಹಸ್ಪತಿ ವೃತ -
ಶ್ರಾವಣ ಮಾಸದಲ್ಲಿ ಬರುವ ಬುಧ-ಗುರು ವಾರಗಳಲ್ಲಿ ಬುಧ,ಬ್ರಹಸ್ಪತಿಯರನ್ನು ಪೂಜಿಸಿದರೆ ಇಷ್ಟಾರ್ಥಗಳೆಲ್ಲಾ ಸಿದ್ದಿಸುವವು. ಮೊಸರನ್ನವನ್ನು ನಿವೇದನೆ ಮಾಡಿ ಬ್ರಾಹ್ಮಣನಿಗೆ ಭೋಜನ ಮಾಡಿಸಬೇಕು. ಸ್ತ್ರೀಯರು ತೊಟ್ಟಿಲ ಮೇಲ್ಬಾಗದಲ್ಲಿ ಬುಧ-ಗುರು ಚಿತ್ರ ಬರೆದು ಪೂಜಿಸಿದರೆ ಸತ್ಪುತ್ರರು ಜನಿಸುವರು. ಪಾಕ ಶಾಲೆಯಲ್ಲಿ ಪೂಜಿಸಿದರೆ, ಪಾಕ ಸಮೃದ್ಧಿಯಾಗುವದು. ಧನಾಗಾರದಲ್ಲಿ ಪೂಜಿಸಿದರೇ ಧನವು ಅಭಿವೃದ್ದಿ ಯಾಗುವದು. ಇದನ್ನು ಏಳು ವರ್ಷಗಳವರೆಗೆ ಮಾಡಬೆಕು.

೪) ಜಿವಂತಿಕಾ ವೃತ-
ಜಿವಂತಿಕಾ ದೇವಿ ಎಂದರೆ ಸಂತಾನ ಲಕ್ಷ್ಮೀ. ಶ್ರಾವಣ ಶುಕ್ಲ ಶುಕ್ರವಾರದಂದು ಅನೇಕ ಮಕ್ಕಳೂಡಗೂಡಿ ಜೀವಂತಿಕಾದೇವಿಯ ಚಿತ್ರವನ್ನು ಬರೆದು ಷೊಡಷೊಪಚಾರಗಳಿಂದ ಪೊಜಿಸಬೆಕು. ಗೊದಿ ಹಿಟ್ಟಿನಿಂದ ಐದು ಹಣತೆಗಳನ್ನು ಮಾಡಿ ತುಪ್ಪದ ಬತ್ತಿಯಿಂದಾ ಆರತಿ ಮಾಡಬೆಕು. ನಂತರ ಹಣತೆಗಳನ್ನು ತುಪ್ಪದಲ್ಲಿ ಕರೆದು ಸ್ವತ; ಭಕ್ಷಿಸಬೇಕು. ವೃತ ನಿರತರು ಹಸಿರು ಸೀರೆ, ಕುಪ್ಪುಸ, ಬಳೆಗಳನ್ನು ಧರಿಸಬಾರದು. ಹಸಿರು ಬಣ್ಣದ ಕಾಯಿಪಲ್ಯಗಳನ್ನೂ ಬಳಸಬಾರದು. ಅಕ್ಕಿ ತೊಳೆದ ನೀರನ್ನು ಎಂದೂ ದಾಟಬಾರದು. ವೃತಾಚರಣೆಯಿಂದಾ ಗರ್ಭದಲ್ಲಿ ಬದುಕಿ ಜೇವಂತವಾಗಿರುವ ಮಕ್ಕಳೇ ಹುಟ್ಟುವರು.

೫) ಶ್ರಾವಣ ಮಾಸದ ಪ್ರತಿ ಶನಿವಾರ ಶನೇಶ್ವರ, ವಾಯು,ಹಾಗು ನೃಸಿಂಹದೇವರ ಪೂಜೆಯನ್ನು ಷೂಡಶೂಪಚಾರಗಳಿಂದ ಮಾಡಬೇಕು ಯಜಮಾನನು ಅಂದು ಏಳ್ಳೆಣ್ಣೆಯಿಂದಾ ಅಭ್ಯಂಜನವನ್ನು ಮಾಡಬೆಕು. ಹಾಗು ಒಬ್ಬ ವಿಪ್ರರನ್ನು ಆಮಂತ್ರಿಸಿ ಅವರಿಗೂ ಏಳ್ಳೆಣ್ಣೆಯಿಂದಾ ಅಭ್ಯಂಜನ ಮಾಡಿಸಬೆಕು. ವಿಪ್ರನು ಕುಂಟನಾಗಿದ್ದರೆ ಉತ್ತಮ. ಏಕೆಂದರೆ ಶನಿದೇವರು ಕುಂಟನಾದ್ದರಿಂದಾ. ಶನಿದೇವರನ್ನು ಶನ್ನೂದೇವಿ ರಭಿಷ್ಟಯಾ... ಮಂತ್ರದಿಂದಾ, ಹನುಮಂತ ದೇವರನ್ನು ಬುದ್ದಿರ್ಭಲಂ.... ಮಂತ್ರದಿಂದಾ, ಹಾಗು ನೃಸಿಂಹ ದೇವರನ್ನು ಉಗ್ರಂ ವಿರಂ .... ಮಂತ್ರದಿಂದಾ ಆವ್ಹಾನಿಸಿ ಪೂಜಿಸಬೇಕು. ವಿಪ್ರರಿಗೆ ಭೋಜನ ಮಾಡಿಸಿ ಏಳ್ಳೆಣ್ಣೆ, ಕಬ್ಬಿಣಪಾತ್ರೆ, ಏಳ್ಳು, ಫಲ, ತಾಂಬೂಲಗಳೂಂದಿಗೆ ದಕ್ಷಿಣಾದಿಗಳನ್ನು ಕೂಟ್ಟು ಶನಿಯು ಪ್ರೀತನಾಗಲಿ ಎಂದು ಕೃಷ್ಣಾರ್ಪಣ ಬಿಡಬೇಕು. ಈ ವೃತದಿಂದಾ ಲಕ್ಷ್ಮೀ ಸ್ತಿರವಾಗಿ ನಿಲ್ಲುವಳು, ಪಂಚಮ, ಅಷ್ಟಮ, ಎಳುವರೆಶನಿಯ ಕಾಟಗಳು ಇರುವದಿಲ್ಲಾ.

) ರೋಟಿಕಾವೃತ- ರೋಟಿಕಾವೃತವು ಶ್ರಾವಣ ಮಾಸದ ಶುಕ್ಲ ಪ್ರತಿಪದಾ ಸೋಮವಾರ ಬಂದರೆ ಅಂದಿನಿಂದಾ ೫ ವಾರಗಳಕಾಲ ಆಚರಿಸಬೇಕು. ಈ ದಿನಗಳಲ್ಲಿ ರುದ್ರಾಂತರ್ಮಿಯಾದ ಸಂಕರ್ಷಣನನ್ನು "ತ್ರ್ಯಯಂಬಕಂ ಯಜಾಮಹೇ.... ಮಂತ್ರದಿಂದಾ ಆಹ್ವಾನಿಸಿ ಬಿಲ್ವ ಹಾಗು ನಾನಾ ತರದ ಪುಷ್ಪಗಳಿಂದಾ ಪೂಜಿಸಿ (೫) ಐದು ರೂಟ್ಟಿಗಳನ್ನು ನೇವೈದ್ಯವೆಂದು ಅರ್ಪಿಸಬೆಕು. ಅದರಲ್ಲಿ ೨ ನ್ನು ವಿಪ್ರರಿಗೆ, ೨ ನ್ನು ಪೂಜಕನಿಗೂ, ಒಂದನ್ನು ಭಗವಂತನಿಗೆ ಅರ್ಪಿಸಬೆಕು. ಭಗವಂತನಿಗೆ ಅರ್ಪಿಸಿದ ರೂಟ್ಟಿಯನ್ನು ಗೋವಿಗೆ ಕೂಡಬೇಕು. ಈ ವೃತಚರಣೆಯಿಂದಾ ಸಪ್ತದ್ವೀಪಸಹಿತ ಭೂಮಿಯನ್ನು ದಾನ ಮಾಡಿದರೆ ಬರುವ ಫಲ ದೂರಕುವದು. ಈರಿತಿಯಾಗಿ ೫ ವರ್ಷಗಳ ಪರ್ಯಂತರ ಮಾಡಿ ನಂತರ ಉದ್ಯಾಪನೆಯನ್ನು ಮಾಡಿ ವೃತ ಸಮಾಪ್ತಿ ಮಾಡಬೆಕು. 


ಸಶೇಷ...

ಸಂಗ್ರಹ -
ಶ್ರೀ ಗುರುರಾಜಾಚಾರ್ ಪುಣ್ಯವಂತ,
ಹುಬ್ಬಳ್ಳಿ

 


 

No comments:

Post a Comment