Monday, November 5, 2012

ಕಾಣ್ವ ಶಾಖೆಯವರಲ್ಲಿ ಮಾಧ್ವರಿಲ್ಲವೇ ? ಅಥವಾ ಕಾಣ್ವ ಶಾಖೆಯವರು ಮಾಧ್ವರಲ್ಲವೇ ? ( Part-1 )

ಶುಕ್ಲ ಯಜುವರ್ೇದದ ಕಾಣ್ವ ಶಾಖೆಯ ಮಧ್ವಮತಾನುಯಾಯಿಗಳೇ ,

ತೀರಾ ಇತ್ತೀಚಿನ ದಿನಗಳಲ್ಲಿ ಕನರ್ಾಟಕದಲ್ಲಿ ಕೆಲವರು ವಿಶೇಷವಾಗಿ ಕಣ್ವ ಮಠದ ಪ್ರಸ್ತುತ ಪೀಠಾಧಿಪತಿಗಳ ಸುತ್ತ ಮುತ್ತಾ ಸೇರಿ ಕೊಂಡಿರುವವರು ಸಮಾಜದಲ್ಲಿ ಹೇಳಿಕೆಗಳನ್ನು ಕೊಡುತ್ತಾ , ನಾವು ಕಾಣ್ವರು ಮಾಧ್ವರಲ್ಲ, ಮಧ್ವಾಚಾರ್ಯರಿಗೂ ನಮಗೂ ಸಂಬಂಧವಿಲ್ಲ ಎಂಬಂತೆ ಅಪಪ್ರಚಾರ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇವರ ಪ್ರಕಾರ ಶ್ರೀ ಯಾಜ್ಞ್ಯವಲ್ಕ್ಯರು ಮಾತ್ರ ನಮ್ಮ ಗುರುಗಳು, ಕಣ್ವ ಮಠ ಒಂದು ಮಾಧ್ವ ಮಠವಲ್ಲ, ಅದು ಸ್ಮಾರ್ತ, ಭಾಗವತ ಮತ್ತು ಮಾಧ್ವ ಸಂಪ್ರದಾಯದವರೆಲ್ಲರಿಗೂ ಸೇರಿದ್ದಾಗಿದೆ ಎಂಬ ವಿಷ ಬೀಜವನ್ನು ಬಿತ್ತಲಾರಂಬಿಸಿದ್ದಾರೆ. ದುರದೃಷ್ಟವಶಾತ್ ಇದಕ್ಕೆ ಪ್ರಸ್ತುತ ಪೀಠಾಧಿಪತಿಗಳ ಬೆಂಬಲವಿರುವುದು ಸಹ ಕಂಡು ಬಂದಿದೆ   (ವಿಪಯರ್ಾಸವೆಂದರೆ ಒಂದು ಕಡೆ ನಾವು ಮಾಧ್ವರಲ್ಲ ಎಂದು ಹೇಳಿಕೆ ನೀಡುತ್ತಾ ಮತ್ತೊಂದು ಕಡೆ ಈ ಮಠ ಸ್ಮಾರ್ತ ಭಾಗವತ ಮತ್ತು ಮಾಧ್ವ ಸಂಪ್ರದಾಯದವರೆಲ್ಲರಿಗೂ ಸೇರಿದೆ ಎಂದು ಎರಡು ವಿರುದ್ಧ ಹೇಳೀಕೆಗಳನ್ನು ನೀಡುತ್ತಿರುವುದು).

 ಈ ಮೇಲೆ ತಿಳಿಸಿದ ಘಟನೆಗಳಿಂದಾಗಿ ನಾವು ಅಂದರೆ ಕಾಣ್ವ ಶಾಖೆಯ ಮಧ್ವ ಮತಾನುಯಾಯಿಗಳು ವಿಷಯವನ್ನು ಚೆನ್ನಾಗಿ ವಿವರಿಸಿ ಸತ್ಯವನ್ನು ಜನರಿಗೆ ತಿಳೀಸುವ ಕಾರ್ಯನಡೆಯಬೇಕಾಗಿದೆ. ಅದಕ್ಕಾಗಿ ಈ ಲೇಖನ ಬರೆಯುತ್ತಿದ್ದೇನೆ.

1. ಮೊಟ್ಟ ಮೊದಲನೆಯದಾಗಿ ನಮ್ಮ ಮಠಕ್ಕೆ ಇಟ್ಟಿರುವ ಹೆಸರಿನಿಂದಾಗಿ ಬಹಳ ಜನರಿಗೆ ಗೊಂದಲ ಉಂಟಾಗುತ್ತಿದೆ. ಶಾಖೆ (ಸಂಹಿತೆ)ಯ ಹೆಸರನ್ನು ಮಠಕ್ಕೆ ಇಟ್ಟಿರುವುದರಿಂದ ಕಣ್ವ ಶಾಖೆ ಮತ್ತು ಕಣ್ವ ಮಠ ಈ ಎರಡರ ನಡುವಿನ ವ್ಯತ್ಯಾಸ ಜನರಿಗೆ ತಿಳಿಯುತ್ತಿಲ್ಲ. ಹೀಗಾಗಿ ಹೆಚ್ಚಿನ ಜನರಿಗೆ, ನಮ್ಮ ಮಠ ಕಾಣ್ವ ಶಾಖೆಯ ಎಲ್ಲಾ ಸಂಪ್ರದಾಯದವರಿಗೆ ಸೇರಿದ್ದು ಎಂಬ ಭ್ರಮಯುಂಟಾಗಿದೆ. ಬೇರೆ ವೇದಗಳವರಿಗೆ ಅಂದರೆ ಋಗ್ವೇದಿಗಳಲ್ಲಿ ಹಾಗೂ ಕೃಷ್ಣ ಯಜುವರ್ೇದಿಗಳಲ್ಲಿ ಈ ರೀತಿಯಿಲ್ಲ. ಅವರಲ್ಲಿ ಸ್ಮಾರ್ತರಿಗೆ, ಶ್ರೀ ವೈಷ್ಣವರಿಗೆ ಹಾಗೂ ಮಾಧ್ವರಿಗೆ ಬೇರೆ ಬೇರೆ ಮಠಗಳಿವೆ. ನಮ್ಮಲ್ಲಿ ಆ ರೀತಿ ಇಲ್ಲ. ಆದುದರಿಂದ ನಮ್ಮ ಕಣ್ವ ಮಠ ಎಲ್ಲಾ ಸಂಪ್ರದಾಯದವರಿಗೆ ಸೇರಿದ್ದು ಎಂಬುದಾಗಿ ತಪ್ಪು ತಿಳಿದುಕೊಂಡಿದ್ದಾರೆ. ಇಷ್ಟಕ್ಕೆಲ್ಲಾ ಕಾರಣವೇನೆಂದರೆ ಶಾಖೆಯ ಹೆಸರನ್ನು ಮಠಕ್ಕೆ ಇಟ್ಟಿರುವುದರಿಂದ ಜನರಿಗೆ ವಿಷಯ ಅರ್ಥವಾಗುತ್ತಿಲ್ಲ ಕೆಲವರಿಗೆ ಅರ್ಥವಾದರು ತಮ್ಮ ಸ್ವಹಿತಕ್ಕಾಗಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಈ ಕೆಳಗಿನ ವಿವರಣೆಯನ್ನು ನಿಧಾನವಾಗಿ ಗಮನವಿಟ್ಟು ಓದಿ , ವಿಚಾರ ಮಾಡಿದರೆ ಎಲ್ಲರಿಗೂ ಸತ್ಯಗೋಚರಿಸುತ್ತದೆ.

2. ಶಂಕರಾಚಾರ್ಯ ಮತದವರು (ಸ್ಮಾರ್ತರು) ರಾಮಾನುಜಾಚಾರ್ಯ ಮತದವರು (ಶ್ರೀವೈಷ್ಣವರು) ಮಧ್ವಾಚಾರ್ಯಮತದವರು (ಮಾಧ್ವರು) ಈ 3 ಸಂಪ್ರದಾಯದವರು ಎಲ್ಲಾ ವೇದಗಳ ಎಲ್ಲಾ ಶಾಖೆಗಳಲ್ಲಿಯೂ ಇರುತ್ತಾರೆ. ಈಗ ನಮಗೆ ಪ್ರಸ್ತುತ ಲಭ್ಯವಿರುವ ಶಾಖೆಗಳೆಂದರೆ ಋಗ್ವೇದದ ಶಾಕಲ ಶಾಖೆ (ಸಂಹಿತೆ) ಕೃಷ್ಣ ಯಜುವರ್ೇದ ತೈತ್ತಿರೀಯ ಶಾಖೆ ಮತ್ತು ಕಠಶಾಖೆ ಹಾಗೂ ಶುಕ್ಲ ಯಜುವರ್ೇದದ ಕಣ್ವಶಾಖೆ ಮತ್ತು ಮಧ್ಯಂದಿನ ಶಾಖೆ.

3. ಋಗ್ವೇದಿಗಳಿಗೆ ಈಗ ತಮ್ಮ ಶಾಖೆ ಯಾವುದೆಂಬುದೇ ತಿಳಿಯುತ್ತಿಲ್ಲ. ಆದರೆ ಋಗ್ವೇದಿಗಳಲ್ಲಿ ಶಾಂಕರರು, ರಾಮಾನುಜೀಯರು ಹಾಗೂ ಮಾಧ್ವರು ಹೀಗೇ ಮೂರು ಸಂಪ್ರದಾಯದವರಿದ್ದಾರೆ ಶಂಕರಾಚಾರ್ಯರ ಕಾಲದಲ್ಲಿದ್ದ ಎಲ್ಲಾ ಬ್ರಾಹ್ಮಣರಲ್ಲಿ ಮುಂದೆ ರಾಮಾನುಜಾಚಾರ್ಯರು ಬಂದ ನಂತರ ಕೆಲವರು ಅವರ ಮತವನ್ನನುಸರಿದ್ದರು. ತದನಂತರದಲ್ಲಿ, ಮಧ್ವಾಚಾರ್ಯರು ಬಂದನಂತರ ಅವರಲ್ಲಿ ಕೆಲವರು ಮಧ್ವ ಮತವನ್ನು ಅನುಸರಿಸಿದ್ದರು. ಹೀಗೆ, ಶಂಕರರ ಮತದಲ್ಲೇ ಉಳಿದವರು , ಶೃಂಗೇರಿ ಮಠ, ಕಂಚಿಮಠ, ಸ್ವರ್ಣವಲ್ಲಿ ಇತ್ಯಾದಿ ಮಠದ ಶಿಷ್ಯರಾದರು ರಾಮಾನುಜಾಚಾರ್ಯರ ಮತಾನುಯಾಯಿಗಳು, ಶ್ರೀ ವೈಷ್ಣವರೆನಿಸಿ ಅವರದೇ ಆದ ಮಠಗಳ ಶಿಷ್ಯರೆನಿಸಿದರು. ಮುಂದೆ ಮಾಧ್ವ ಮತಾನುಯಾಯಿಗಳು ಉತ್ತರಾದಿಮಠ, ವಿಬುದೇಂದ್ರ ಮಠ (ಈಗಿನ ರಾಯರ ಮಠ) ವ್ಯಾಸರಾಯ ಮಠ, ಶ್ರೀ ಪಾದರಾಯರ ಮಠ ಮುಂತಾದ ಅನೇಕ ಮಠದ ಶಿಷ್ಯರೆನಿಸಿದರು. ತಾತ್ಪರ್ಯವೇನೆಂದರೆ ಒಂದೇ ವೇದದ ಒಂದೇ ಶಾಖೆಯವರು ಕಾಲಾನುಕ್ರಮವಾಗಿ ಅದ್ವೈತ, ವಿಶಿಷ್ಠಾದ್ವೈತ ಹಾಗೂ ದೈತ ಹೀಗೇ ಮೂರು ಮಠಗಳಲ್ಲಿ ಅವರವರ ಅಭಿರುಚಿಗೆ ತಕ್ಕಂತೆ ಹಂಚಿಹೋದರು.

4. ಈ ಮೇಲೆ ತಿಳಿಸಿದ ಪ್ರಕ್ರಿಯೆಗನುಗುಣವಾಗಿ ಕೃಷ್ಣ ಯಜುವರ್ೇದಿಯ ತೈತ್ತಿರೀಯ ಶಾಖೆಯವರು ಸಹ ಮೂರು ಮಠಗಳಲಿ ತಮ್ಮ ಅಭಿರುಚಿಗೆ ತಕ್ಕಂತೆ ಹಂಚಿಹೋಗಿರುತ್ತಾರೆ. ಒಟ್ಟಾರೆ ಅಭಿಪ್ರಾಯದಲ್ಲಿ ಈ ಮೂರು ಮತ ಮಠಗಳಲ್ಲಿ ಋಗ್ವೇದಿಗಳು (ಶಾಖೆ ತಿಳಿದಿಲ್ಲ) ಕೃಷ್ಣ ಯಜುವರ್ೇದದ ತ್ತೆತ್ತೀರೀಯ ಶಾಖೆಯವರು ಇರುತ್ತಾರೆ. ಆದರೆ ಇವರ ಮಠಗಳಿಗೆ ಋಗ್ವೇದ ಶಾಕಲ ಮಠವೆಂದಾಗಲೀ ಕೃಷ್ಣ ಯಜುವರ್ೇದದ ತ್ತೆತ್ತಿರೀಯ ಮಠವೆಂದಾಗಲೀ ಹೆಸರಿಲ್ಲ ಮಠಗಳ ಹೆಸರುಗಳು ಶಾಖೆಯ ಹೆಸರುಗಳಿಂದ ಭಿನ್ನವಾಗಿದೆ. ಉದಾ: ಶೃಂಗೇರಿ ಮಠ, ಕಂಚಿಮಠ, ಸ್ವರ್ಣವಲ್ಲಿ ಮಠ ಶ್ರೀ ವೈಷ್ಣವ ಮಠಗಳು0 ಉತ್ತರಾದಿಮಠ, ರಾಯರ ಮಠ ಇತ್ಯಾದಿ, ಹೀಗಾಗಿ ಉತ್ತರಾದಿ -ರಾಯರ-ವ್ಯಾಸ ರಾಯರ ಮಠಗಳಲ್ಲಿ ಸ್ಮಾರ್ತರಿರುವುದಿಲ್ಲ ಅದರಂತೆಯೇ ಶೃಂಗೇರಿ , ಕಂಚಿ, ಸ್ವರ್ಣವಲ್ಲಿ ಮಠಗಳಲಿ ಮಾಧ್ವರಿರುವುದಿಲ್ಲ ಗಮನಿಸಬೇಕಾದ ವಿಷಯವೆಂದರೆ ಇವರ ಮಠಗಳು ಬೇರೆ ಬೇರೆಯಾದರೂ ಸಹ ಇವರೆಲ್ಲರೂ ಒಂದೇ ಶಾಖೆಗೆ ಸೇರಿದವರಾಗಿರಬಹುದು.

5. ಈಗ ನಮ್ಮ ಕಣ್ವ ಮಠಕ್ಕೆ ಬರೋಣ ಶುಕ್ಲ ಯುವರ್ೇದದಲ್ಲಿ ಒಟ್ಟು 15 ಶಾಖೆಗಳಿದ್ದು ಈಗ ಕೇವಲ ಎರಡು ಶಾಖೆಗಳು ಉಳಿದುಕೊಂಡಿವೆ. ಅವುಗಳೆಂದರೆ 1) ಕಾಣ್ವ ಶಾಖೆ 2) ಮಾಧ್ಯಂದಿನಶಾಖೆ ಇವುಗಳಲ್ಲಿ ಕನರ್ಾಟಕದಲ್ಲಿ ಮಾಧ್ಯಂದಿನ ಶಾಖೆಯವರು ಇಲ್ಲವೆಂದೇ ಹೇಳಬಹುದು. ಉತ್ತರ ಭಾರತದಲ್ಲಿ ಈ ಶಾಖೆಯವರು ಹೇರಳವಾಗಿ ಸಿಗುತ್ತಾರೆ. ಇನ್ನು ಉಳಿದಿದ್ದು ಕಣ್ವಶಾಖೆ . ಈ ಹಿಂದೆ ತಿಳಿಸಿದಂಥ ಕ್ರಮದಲ್ಲಿಯೇ ಕಣ್ವ ಶಾಖೆಯವರು ಸಹ ಶಂಕರಾಚಾರ್ಯಕಾಲದಲ್ಲಿ ಇದ್ದವರಲ್ಲಿ ಕಲವರು ರಾಮಾನುಜಾಚಾರ್ಯರ ಬಂದನಂತರ ಅವರ ಮತ ಮಾಯಿಗಳಾದರೂ ಮುಂದೆ ಮಧ್ವಾಚಾರ್ಯರು ಬಂದನಂತರ ಇದೇ ಕಣ್ವ ಶಾಖೆಯ ಕೆಲವರು ಮಧ್ವಮತಾನು ಯಾಯಿಗಳಾದರು.

6. ಈ ರೀತಿ ಮಾಧ್ವ ಮತಕ್ಕೆ ಸೇರಿದ ಕಣ್ವ ಶಾಖೆಯವರು ಮೊದಲು ಆಗ ಚಾಲ್ತಿಯಲ್ಲಿದ್ದ ಪದ್ಮನಾಭ ತೀರ್ಥರ ಪರಂಪರೆಯ ಮಠದಲ್ಲಿದ್ದವರು ಮುಂದೆ ಮಠಗಳು ವಿಭಾಗವಾಗಿ ಉತ್ತರಾದಿ ಮಠ ಮತ್ತು ವಿಭುದೇಂದ್ರ ತೀರ್ಥರ ಮಠಗಳೆಂದು ಕರೆಯಲ್ಪಟ್ಟಾಗ ಕಣ್ವ ಶಾಖೆಯ ಮಧ್ವಮತಾನುಯಾಯಿಗಳು ಶ್ರೀ ವಿಭುದೇಂದ್ರ ಮಠದಲ್ಲಿ (ಈಗಿನ ರಾಯರ ಮಠದಲ್ಲಿ) ಸೇರಿಕೊಂಡರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಧ್ವಮತಕ್ಕೆ ಸೇರಿದ ಕಣ್ವ ಶಾಖೆಯರು ಮಾತ್ರ ಈ ಮಠಕ್ಕೆ ಸೇರಿಕೊಂಡರೆ ವಿನಃ ಬೇರೆ ಕಣ್ವ ಶಾಖೆಯ ಅದೈತ ಮತ್ತು ವಿಶಿಷ್ಠಾದೈತ ಮತದವರು ಇವರೊಂದಿಗೆ ಈ ಮಠಗಳಲ್ಲಿ ಸೇರಿಕೊಳ್ಳಲಿಲ್ಲ ಬಹುಶ ಅವರುಗಳು ತಮ್ಮ ತಮ್ಮ ಮತಗಳಿಗೆ ಸೇರಿದ ಮಠಗಳಲ್ಲಿ ಸೇರಿಕೊಂಡಿರಬಹುದು.  ಮುಂದೆ ಅಧ್ವೈತ ಮತಗಳನ್ನು ಅನುಸರಿಸಿಕೊಂಡು ಬಂದವರಲ್ಲಿ ಚಿದಂಬರ ದೀಕ್ಷಿತರು ಹಾಗೂ ಅಗಡಿ ಆನಂದವನ ಪ್ರಮುಖವಾದುವುಗಳು ಅದರೆ ಅವುಗಳು ಮಠಗಳೆಂದು ಕರೆಸಿಕೊಳ್ಳಲಿಲ್ಲ. ಸಂಸ್ಥಾನಗಳಾಗಿಯೇ ಉಳಿದು ಕೊಂಡಿದ್ದು ಅದುದರಿಂದ ಆ ಸಂಸ್ಥಾನಗಳಲಿ ಸನ್ಯಾಸ ಪೀಠಾಧಿಪತಿಗಳು ಇಲ್ಲ. ಆದರೆ ಕಣ್ವ ಶಾಖೀಯ ಅದೈತಿಗಳು (ಶಂಕರ ಮತದವರಿಗೆ) ಆ ಸಂಸ್ಥಾನಗಳೇ ಮಠಗಳಿದ್ದಂತೆ.

7. ಮುಂದೆ ಶ್ರೀ ರಾಯರ ಮಠದಲ್ಲಿ ಕಣ್ವ ಶಾಖೀಯರನ್ನು ತಾರತಮ್ಯ ಭಾವದಿಂದ ಕಾಣತೊಡಗಿದಾಗ ಇದರಿಂದ ಮನನೊಂದು ಶ್ರೀ ವೆಂಕಟೇಶಾಚಾರ್ಯರು ಕಣ್ವ ಶಾಖೆಯ ಮಾಧ್ವರಿಗಾಗಿಯೇ ಒಂದು ಮಠವನ್ನು ಸ್ಥಾಪಿಸಬೇಕೆಂದು ನಿರ್ಣಯಿಸಿ ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಶಿರೂರು ಮಠದ ಆಗಿನ ಪೀಠಾಧಿಪತಿಗಳಾಗಿದ್ದ ಶ್ರೀ ಲಕ್ಷ್ಮೀ ಮನೋಹರ ತೀರ್ಥರಿಂದ ಸನ್ಯಾಸ ಸ್ವೀಕರಿಸಿ ಕಣ್ವ ಶಾಖೆಯ ಮಧ್ವಮತಾನುಯಾಯಿಗಳಾಗಿಯೇ ಕಣ್ವಶಾಖಿಯರ ಸ್ವಾಭಿಮಾನ ದ್ಯೋತಕವೆಂಬಂತೆ  ಶಾಖೆಯ ಹೆಸರನ್ನೇ ಮಠಕ್ಕೂ ನಾಮಕರಣ ಮಾಡಿ ಕಣ್ವ ಮಠ ಎಂದು ಕರೆದರು. ಈ ರೀತಿಯಾಗಿ ಸ್ಥಾಪನೆಯಾದ ಕಣ್ವ ಮಠಕ್ಕೆ ಕೇವಲ ಮಧ್ವಮತಾನುಮಾಯಿಗಳಷ್ಟೇ ಶಿಷ್ಯರಾಗಿದ್ದರಲ್ಲದೆ ಬೇರೆ ಶಂಕರಾಚಾರ್ಯರ ಮತಾನುಮಾಯಿಗಳಾಗಲೀ ರಾಮಾನುಜಾಚಾರ್ಯರ ಮತಾನು ಮಾಯಿಗಳಗಳಲೀ  ಅಥವಾ ಇತರ ಬೇರೆ ಯಾವುದೇ ಸಂಪ್ರದಾಯವರಾಗಲಿ ಶಿಷ್ಯರಾಗಿರಲಿಲ್ಲ ಆಗಿರುವ ಸಾಧ್ಯತೆಗಳೇ ಇರಲಿಲ್ಲ, ಹೀಗೆ ಕಣ್ವ ಮಠ ಎಂದರೆ ಅದೊಂದು ಮಾಧ್ವಮಠವೇ ಹೊರತು ಈಗ ಕೇವಲ ಅಪಪಪ್ರಚಾರ ನಡೆಸಿರುವಂತೆ ಅದು ಎಲ್ಲಾ ಮತದವರಿಗೂ ಸೇರಿದ್ದು ಎಂಬುದಕ್ಕೆ ಯಾವ ಪ್ರಮಾಣವೂ ಇಲ್ಲ ಆಧಾರವೂ ಇಲ್ಲ. ಹೀಗಾಗಿ ಬೇರೆ ಮತಕ್ಕೆ ಸಂಪ್ರದಾಯಕ್ಕೆ ಸೇರಿದವರು ತಮ್ಮ ಮತವನ್ನು ಪ್ರತಿಪಾದಿಸುವ ಮಠಗಳಿಗೆ ಸಂಸ್ಥಾನಗಳಿಗೆ ಶಿಷ್ಯರಾಗುವುದು ಉಚಿತ ಸ್ವಧಮರ್ಾಚರಣೆ. ಅದೇ ಶ್ರೇಷ್ಠವಾದ ಹಾದಿ.  ಒಟ್ಟಾರೆ ತಾತ್ಪರ್ಯದಲ್ಲಿ ಕಣ್ವ ಶಾಖೆ ಬೇರೆ ಕಣ್ವ ಮಠ ಬೇರೆ. ಬೇರೆ ವೇದಗಳ ಶಾಖೆಗಳಲ್ಲಿ ಇರುವಂತೆ ಕಣ್ವ ಶಾಖೆಯಲ್ಲಿಯೂ ಸಹ ಅಧೈತ, ವಿಶಿಷ್ಠಾಧೈತ ಭಾಗವತ ಸಂಪ್ರದಾಯದವರಿದ್ದಾರೆ ಅದೇ ರೀತಿ ಬೇರೆ ವೇದಗಳ ಶಾಖೆಗಳ ಮಾಧ್ವರಿಗೆ ಹೇಗೆ ಉತ್ತರಾದಿ ಮಠ , ರಾಯರ ಮಠ, ಶ್ರೀ ಪಾದರಾಯರ ಮಠ ವ್ಯಾಸರಾಯರ ಮಠ ಮುಂತಾಗಿ ಇವೆಯೋ ಹಾಗೆ ಕಾಣ್ವ ಶಾಖೆಯ ಮಾಧ್ವರಿಗಾಗಿಯೇ ಇರುವ ಮಠ ಕಣ್ವಮಠ. ಅದಕ್ಕಾಗಿಯೇ ಕಣ್ವಮಠದ ಮಾದವತೀರ್ಥರಿಂದ ಹಿಡಿದು ಪ್ರಸ್ತುತ ಪೀಠಾಧಿಪತಿಗಳವರ ಹಣಿಯಮೇಲೆ ಮಾಧ್ವಮತದ ಸಂಕೇತ ಅಂಗಾರ-ಅಕ್ಷತೆ ಕಂಗೊಳಿಸುತ್ತದೆ. ಕಣ್ವಮಠದ ಪಂಚಾಂಗ ಶುರುವಾದಂದಿನಿಂದ ಇಂದಿನವರೆಗೆ ಪಂಚಾಗದ ರಕ್ಷಪುಟದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರ ಕಂಡುಬರುತ್ತದೆ .

"ಮಧ್ವರಾಯರ ಕರುಣೆ ಪಡೆಯದವ ಧರೆಯೊಳಗೆ ಇದ್ದರೇನು? ಇಲ್ಲದಿದ್ದರೇನು?"
"ಓಂ ತತ್ಸತ್"

ಕೆ. ಸತ್ಯನಾರಾಯಣರಾವ್, ಹೊಸಪೇಟೆ ಕಣ್ವ ಮಠದ ಉದ್ದಾರ ಬಯಸುವ ಒಬ್ಬ ಶಿಷ್ಯ

2 comments:

  1. gurugale lekhana uttama vagidi, idu namma janrigi yake arthavguthill? namma namma uddharakagi prathiyondu jiviyu madhva rayara ashraya hodale beku idu sathya. sathya. sathya

    ReplyDelete
  2. ತುಂಬಾ ಒಳ್ಳೆಯ ಮಾಹಿತಿ ಗುರುಗಳೆ

    ReplyDelete